Kidnapping: ದುಡ್ಡು ವಾಪಸ್ ಕೊಡದ್ದಕ್ಕೆ ಬೆಸ್ಕಾಂ ಗುತ್ತಿಗೆ ನೌಕರನ ಅಪಹರಣ
Team Udayavani, Nov 4, 2023, 11:22 AM IST
ಬೆಂಗಳೂರು: ದುಡ್ಡು ಹಿಂತಿರುಗಿಸಲಿಲ್ಲವೆಂದು ಆಕ್ರೋಶಗೊಂಡು ಬೆಸ್ಕಾಂ ನೌಕರನನ್ನು ಅಪಹರಿಸಿದ್ದ ಆರೋಪಿಗಳು ಕೃತ್ಯ ನಡೆದ 24 ಗಂಟೆಯೊಳಗೆ ಪೀಣ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಹಿತ್ ಗೌಡ, ವೆಂಕಟೇಶ್, ರವಿ, ರಮೇಶ್, ಭರತ್ ಸೇರಿ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಸ್ಕಾಂ ನೌಕರ ಪ್ರವೀಣ್ ಅಪಹರಣಕ್ಕೆ ಒಳಗಾದವರು. ಗುತ್ತಿಗೆ ಆಧಾರದಲ್ಲಿ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್, ಬೆಸ್ಕಾಂನಲ್ಲಿ ಉನ್ನತ ಅಧಿಕಾರಿಗಳು ಪರಿಚಯವಿದ್ದು, ಕೆಲಸ ಕೊಡಿಸುತ್ತೇನೆ ಎಂದು ಸಾಕಷ್ಟು ಜನರಿಂದ ಲಕ್ಷಾಂತರ ರೂ. ಪಡೆದಿದ್ದ. ನಂತರ ಕೆಲಸವನ್ನೂ ಕೊಡದೇ, ದುಡ್ಡನ್ನೂ ಹಿಂತಿರುಗಿಸದೇ ವಂಚಿಸಿದ್ದ ಎನ್ನಲಾಗಿದೆ.
ವಂಚನೆಗೊಳಗಾದವರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅ.30ರಂದು ಸಂಜೆ ಮಾತು ಕತೆಗೆಂದು ಪ್ರವೀಣ್ನನ್ನು ಆರೋಪಿಗಳು ಕರೆಸಿಕೊಂಡಿದ್ದರು. ತಾವು ಕೊಟ್ಟಿರುವ ದುಡ್ಡು ಹಿಂತಿರುಗಿಸುವಂತೆ ಮನವಿ ಮಾಡಿದ್ದರು. ಇವರ ಮಾತನ್ನು ಪ್ರವೀಣ್ ನಿರ್ಲಕ್ಷಿಸಿದ್ದ. ಇದರಿಂದ ಆಕ್ರೋಶಗೊಂಡ ವಂಚನೆಗೊಳಗಾದವರ ಗುಂಪು ನವ ಯುಗ ಟೋಲ್ ಬಳಿ ಪ್ರವೀಣ್ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಿದ್ದರು. ನಂತರ ಮಡಿಕೇರಿಯ ಹೋಮ್ ಸ್ಟೇಯಲ್ಲಿ ಇರಿಸಿಕೊಂಡಿದ್ದರು. ಪೀಣ್ಯ ಪೊಲೀಸರು ಪ್ರವೀಣ್ನನ್ನು ರಕ್ಷಿಸಿ, ಅಪಹರಣಕಾರರ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!
Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ
Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?
Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ನಾಲ್ವರ ಬಂಧನ
Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.