Viral Video: ಕುಡಿದ ಮತ್ತಿನಲ್ಲಿ ಹಾವಿನ ಜತೆ ಹುಚ್ಚಾಟವಾಡಿ ಕೊನೆಯುಸಿರೆಳೆದ ಯುವಕ
Team Udayavani, Nov 6, 2023, 3:53 PM IST
ಲಕ್ನೋ: ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಹಾವನ್ನು ಹಿಡಿದುಕೊಂಡು ಬೇಕಾಬಿಟ್ಟಿಯಾಗಿ ವರ್ತಿಸಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಅಖಂಡ ಬಳ್ಳಾರಿ ಜಿಲ್ಲೆ, ವಿರೂಪಾಕ್ಷನ ದರ್ಶನ-ತುಂಗಭದ್ರಾ ತಟದಲ್ಲಿ ಜನಾರ್ದನರೆಡ್ಡಿ ಪ್ರಾರ್ಥನೆ
ಐರೌಲೀ ಗ್ರಾಮದ ರೋಹಿತ್ ಜೈಸ್ವಾಲ್ (22ವರ್ಷ) ಎಂಬ ಯುವಕ, ಕುಡಿದ ಮತ್ತಿನಲ್ಲಿ ಹಾವೊಂದನ್ನು ಹಿಡಿದುಕೊಂಡು, ನಾನು ಮಹಾಕಾಲ್(ಈಶ್ವರ) ನನಗೆ ಕಚ್ಚು ಎಂದು ಕೂಗಾಡುತ್ತಾ, ಹಾವನ್ನು ಚುಂಬಿಸುವುದು, ಕುತ್ತಿಗೆ ಸುತ್ತಿಕೊಳ್ಳುವುದು, ನಾಲಿಗೆಗೆ ಕಚ್ಚಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ.
ರೋಷಗೊಂಡ ಹಾವು ನಾಲ್ಕೈದು ಬಾರಿ ಜೈಸ್ವಾಲ್ ಗೆ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿದ್ದ. ಈತ ಚಿತ್ರೀಕರಣ ಮಾಡಿಕೊಂಡಿರುವ 4 ನಿಮಿಷ 38 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
देवरिया–शराब के नशे में जहरीले सांप के साथ स्टंट करते साप को गाली देते और अपने जीभ पर डंक मरवाते युवक का वीडियो वायरल
जहरीले सांप ने युवक को डसा युवक की मौत
पुलिस ने शव को पोस्टमार्टम के लिए भेजा
खुखुंदू थाना क्षेत्र अहिरौली गांव का मामला#deoriya pic.twitter.com/oIG905HOsO— ANB NEWS (@AnbNewstv) November 6, 2023
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈತ ಹಾವಿನ ಕಡಿತದಿಂದಾಗಿಯೇ ಸಾವನ್ನಪ್ಪಿರುವುದಾಗಿ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದು, ಈತನ ಪೋಷಕರು ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು
Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…
Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!
Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್ಪೆಕ್ಟರ್!
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್
Reservation: ಚಳಿಗಾಲ ಅಧಿವೇಶನಕ್ಕೂ ಮುನ್ನ ಸರಕಾರ ನಿರ್ಧಾರ ಪ್ರಕಟಿಸಲಿ: ಜಯಮೃತ್ಯುಂಜಯ ಶ್ರೀ
Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಿಂದ ಅಸಹಕಾರ: ಎಚ್ಡಿಕೆ
Udupi;ವಿಧಾನಪರಿಷತ್ ಉಪಚುನಾವಣೆ: ನಿಷೇಧಾಜ್ಞೆ ಜಾರಿ
Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.