Dharwad: ಸತ್ಯದ ಮೌಲ್ಯಗಳಿಗಾಗಿ ಶ್ರಮಿಸಿ- ನುಗಡೋಣಿ
ಬೇರೆ ಬೇರೆ ಸ್ತರಗಳ ಜನರ ಬವಣೆಗಳು ನಮ್ಮ ಕಥಾ ಸಾಹಿತ್ಯದಲ್ಲಿ
Team Udayavani, Nov 6, 2023, 1:14 PM IST
ಧಾರವಾಡ: ನಮ್ಮ ಸುತ್ತಲಿನ ಕೇಡುಗಳನ್ನು ಗುರುತಿಸುತ್ತ ಲೇಖಕರು ಕಥೆಗಳನ್ನು ಬಹಳ ಜವಾಬ್ದಾರಿಯಿಂದ ಬರೆಯಬೇಕು
ಎಂದು ಕಥೆಗಾರ ಡಾ|ಅಮರೇಶ ನುಗಡೋಣಿ ಹೇಳಿದರು. ಕಸಾಪ ಸಾಹಿತ್ಯ ಭವನದಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನ
ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇಸಿ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.
ದೇಸಿಯತೆ ಎನ್ನುವುದು ಸ್ಥಳೀಯತೆ ಮತ್ತು ಜಾಗತಿಕತೆ ಈ ಎರಡನ್ನೂ ಒಳಗೊಂಡಿರುವುದನ್ನು ಇಂದಿನ ಹೊಸ ಲೇಖಕರು ತಿಳಿಯುವಂತೆ ಆಗಬೇಕು. ಸುಳ್ಳು ಹೇಳುವವರು ತಮ್ಮದೆ ಸರಿಯೆಂದು ವಾದಿಸುವ ಜಗತ್ತಿನಲ್ಲಿ ಸತ್ಯದ ಮೌಲ್ಯಗಳಿಗಾಗಿ ಬರಹಗಾರರು ಶ್ರಮಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದರು.
ಕಥೆಗಾರ ಹನುಮಂತ ಹಾಲಗೇರಿ ಮಾತನಾಡಿ, ಸಮಾಜದ ಬೇರೆ ಬೇರೆ ಸ್ತರಗಳ ಜನರ ಬವಣೆಗಳು ನಮ್ಮ ಕಥಾ ಸಾಹಿತ್ಯದಲ್ಲಿ ಅಭಿವ್ಯಕ್ತಿಯಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಥಾ ಕಮ್ಮಟದ ನಿರ್ದೇಶಕ ಡಾ| ಬಸು ಬೇವಿನಗಿಡದ, ಡಾ| ಅನಸೂಯಾ ಕಾಂಬಳೆ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ಕನ್ನಡ ಕತೆಯ ಪ್ರಾದೇಶಿಕ ಹಾಗೂ ದೇಶಿ
ಚಹರೆಗಳ ಕುರಿತು ಚನ್ನಪ್ಪ ಅಂಗಡಿ, ಕಥೆ ಕಟ್ಟುವ ಬಗೆಯ ಬಗ್ಗೆ ಡಾ| ಪ್ರಜ್ಞಾ ಮತ್ತಿಹಳ್ಳಿ, ಮಕ್ಕಳ ಕತೆಗಳ ಕುರಿತು ಡಾ|
ಆನಂದ ಪಾಟೀಲ ಮಾತನಾಡಿದರು.
ಸುರೇಖಾ ಸುರೇಶ ಮತ್ತು ಶರಣಬಸವ ಚೋಳಿನ ಕೆಲ ಆಯ್ದ ಕಥೆಗಳ ಪ್ರಸ್ತುತಿ ಮಾಡಿದರು. ಶ್ರೀಧರ ಗಸ್ತಿ ಅಕ್ಕಮಹಾದೇವಿ ವಚನವನ್ನು, ಸುರಭಿ ಸುರೇಶ ಬೇಂದ್ರೆ ಭಾವಗೀತೆಯನ್ನು ಹಾಡಿದರು. ರಾಖಿ ಹಾನಗಲ್ ನಿರೂಪಿಸಿದರು. ಸುಮಾರು 50 ಜನ ಯುವ ಲೇಖಕರು ಶಿಬಿರದಲ್ಲಿ ಚರ್ಚೆ, ಸಂವಾದದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.