Hockey ಏಷ್ಯಾಡ್ ವೈಫಲ್ಯ ಕಾಡುತ್ತಲೇ ಇತ್ತು: ನಾಯಕಿ ಸವಿತಾ
ಭಾರತಕ್ಕೆ 2ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ
Team Udayavani, Nov 7, 2023, 12:06 AM IST
ಹೊಸದಿಲ್ಲಿ: “ಏಷ್ಯಾಡ್ ವೈಫಲ್ಯ ನಮ್ಮನ್ನು ಕಾಡುತ್ತಲೇ ಇತ್ತು. ಇದನ್ನು ಹೊಡೆದೋಡಿಸಲು ನಮ್ಮ ಮುಂದಿದ್ದ ಉತ್ತಮ ಅವಕಾಶವೆಂದರೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ. ಇಲ್ಲಿ ಚಿನ್ನದ ಪದಕ ಗೆಲ್ಲಲೇಬೇಕೆಂದು ಪಟತೊಟ್ಟು ಆಡಿದ ಪರಿಣಾಮ ಪ್ರಶಸ್ತಿ ಒಲಿಯಿತು’ ಎಂಬುದಾಗಿ ಭಾರತೀಯ ವನಿತಾ ಹಾಕಿ ತಂಡದ ನಾಯಕಿ ಸವಿತಾ ಪುನಿಯ ಪ್ರತಿಕ್ರಿಯಿಸಿದ್ದಾರೆ.
ರವಿವಾರ ತಡರಾತ್ರಿ ನಡೆದ ಫೈನಲ್ನಲ್ಲಿ ಆತಿಥೇಯ ಭಾರತ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಎರಡನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಜಯಿಸಿತ್ತು.
“ನಮ್ಮದು ಆತಿಥೇಯ ತಂಡವಾಗಿತ್ತು. ಭಾರತದಲ್ಲಿ ಮೊದಲ ಸಲ ಆಯೋಜನೆಗೊಂಡ ಪಂದ್ಯಾವಳಿಯೂ ಇದಾಗಿತ್ತು. ಹೀಗಾಗಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಏಷ್ಯಾಡ್ ಸೆಮಿಫೈನಲ್ನಲ್ಲಿ ಎಡವಿದ ಬಳಿಕ ನಮ್ಮ ಮುಂದೆ ಉತ್ತಮ ಅವಕಾಶವೊಂದು ತೆರೆಯಲ್ಪಟ್ಟಿತು. ಅಜೇಯವಾಗಿ ಸಾಗಿ ಚಾಂಪಿಯನ್ ಆಗುವ ಯೋಜನೆಯನ್ನು ರೂಪಿಸಿದೆವು. ಇದು ಯಶಸ್ವಿಯಾದುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ’ ಎಂಬುದಾಗಿ ಸವಿತಾ ಹೇಳಿದರು.
ಫ್ಲಡ್ಲೈಟ್ ಸಮಸ್ಯೆ
ಫ್ಲಡ್ಲೈಟ್ ಸಮಸ್ಯೆಯಿಂದಾಗಿ ಈ ಪಂದ್ಯ 50 ನಿಮಿಷ ತಡವಾಗಿ ಆರಂಭಗೊಂಡಿತ್ತು. ಭಾರತ ಆರಂಭ ದಿಂದಲೇ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡುತ್ತ ಹೋಯಿತು. ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮಿÕಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಭಾರತದ ಗೋಲುವೀರರೆನಿಸಿದರು. ಕಳೆದ ಸಲದ ಚಾಂಪಿಯನ್ ಜಪಾನ್ಗೆ ಒಂದೂ ಗೋಲು ಸಿಡಿಸಲಾಗಲಿಲ್ಲ.
ಭಾರತ 2016ರ ಸಿಂಗಾಪುರ ಕೂಟದಲ್ಲಿ ಮೊದಲ ಸಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತ್ತು. ಜಪಾನ್ 2013 ಮತ್ತು 2021ರಲ್ಲಿ ಚಾಂಪಿಯನ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ
Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.