![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 7, 2023, 1:27 PM IST
ಮುಂಬಯಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕಳೆದ ಎರಡು – ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮುಖವನ್ನಿಟ್ಟುಕೊಂಡು ಮಾಡಿರುವ ಡೀಪ್ ಫೇಕ್ ವಿಡಿಯೋ.
ಎಐ ತಂತ್ರಜ್ಞಾನ ಬಳಸಿಕೊಂಡು ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮಾರ್ಫ್ ಮಾಡಿ ಬೇರೊಂದು ವಿಡಿಯೋಗೆ ಜೋಡಿಸಲಾಗಿದೆ. ಈ ವಿಡಿಯೋದಲ್ಲಿರುವುದು ಬಿಟ್ರಿಷ್ – ಇಂಡಿಯನ್ ಸೋಶಿಯಲ್ ಮೀಡಿಯಾ ತಾರೆ ಝಾರಾ ಪಟೇಲ್.
ಲಿಫ್ಟ್ ನೊಳಗೆ ಕಪ್ಪು ಉಡುಗೆಯಲ್ಲಿ ಝಾರಾ ಪಟೇಲ್ ಬರುತ್ತಾರೆ. ಅರೆಬೆತ್ತಲೆಯಾಗಿ ಝಾರಾ ಪಟೇಲ್ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಗೊತ್ತಾಗದ ರೀತಿಯಲ್ಲಿ ರಶ್ಮಿಕಾ ಅವರ ಮುಖವನ್ನು ಜೋಡಿಸಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.
ಈ ಬಗ್ಗೆ ಕಾನೂನು ಕ್ರಮಕಗೊಳ್ಳುವಂತೆ ಕಲಾವಿದರಾದ ಅಮಿತಾಭ್, ನಾಗ ಚೈತನ್ಯ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ. ಸ್ವತಃ ರಶ್ಮಿಕಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಮೂಲ ವಿಡಿಯೋದಲ್ಲಿರುವ ಯುವತಿ ಝಾರಾ ಪಟೇಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
“ಯಾರೋ ನನ್ನ ದೇಹ ಮತ್ತು ಬಾಲಿವುಡ್ನ ಜನಪ್ರಿಯ ನಟಿಯ ಮುಖವನ್ನು ಬಳಸಿಕೊಂಡು ಡೀಪ್ಫೇಕ್ ವೀಡಿಯೊವನ್ನು ಕ್ರಿಯೇಟ್ ಮಾಡಿದ್ದಾರೆ. ಈ ವಿಡಿಯೋಗೂ ನನ್ನ ಒಳ್ಳಗೊಳ್ಳುವಿಕೆ ಇಲ್ಲ. ಏನಾಗಿದೆ ಅದರ ಬಗ್ಗೆ ನನಗೆ ಆಘಾತವಾಗಿದೆ ಮತ್ತು ಇದರಿಂದ ಮನಸ್ಸು ವಿಚಲಿತಗೊಂಡಿದೆ. ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ನಾನು ಚಿಂತಿಸುತ್ತೇನೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ವೇಳೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ನೀವು ಏನು ನೋಡಿದರೂ ಒಮ್ಮೆ ಪರಿಶೀಲಿಸಿ,ಇಂಟರ್ ನೆಟ್ ಕಾಣಸಿಗುವುದು ಎಲ್ಲವೂ ನಿಜವಲ್ಲ” ಎಂದು ಝಾರಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಬ್ರಿಟಿಷ್ – ಇಂಡಿಯನ್ ಸೋಶಿಯಲ್ ಮೀಡಿಯಾ ತಾರೆ ಆಗಿರುವ ಝಾರಾ ಪಟೇಲ್ ಅವರಿಗೆ 400,000 ಫಾಲೋವರ್ಸ್ ಇದ್ದಾರೆ. ಇವರು ವೃತ್ತಿಯಲ್ಲಿ ಡೇಟಾ ಇಂಜಿನಿಯರ್ ಆಗಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.