Bailhongal: ಶರಣರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ
ಇನ್ನೊಬ್ಬರ ಹೊಲಿಕೆ ಅಸಾಧ್ಯ, ಶರಣರಿಗೆ ಶರಣರೆ ಸಮಾನ
Team Udayavani, Nov 8, 2023, 5:05 PM IST
ಬೈಲಹೊಂಗಲ: ಶರಣ ಸಂಕುಲಕ್ಕೆ ಬೆಳಕಾಗಿ ವಚನ ಸಾಹಿತ್ಯ ರಕ್ಷಣೆಯಲ್ಲಿ ವೀರಗಣಾಚಾರಿಯಾಗಿದ್ದ 12ನೇ ಶತಮಾನದ ಮಡಿವಾಳ ಮಾಚಿದೇವರ ವಚನಗಳು ಇಂದು ಅತ್ಯಂತ ಪ್ರಸ್ತುತವಾಗಿವೆ ಎಂದು ಮಡಿವಾಳಪ್ಪ ಸಂಗೊಳ್ಳಿ ಹೇಳಿದರು.
ಸಮೀಪದ ಕಾರಿಮನಿ ಗ್ರಾಮದ ಮಡಿವಾಳ ಮಾಚಿದೇವರ ಸಮಾ ಧಿ ಸ್ಥಳದಲ್ಲಿ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾನವ ಕುಲಕ್ಕೆ ವಚನ ಸಾಹಿತ್ಯವನ್ನು ನೀಡಿದ ಶರಣರ ವಚನಗಳಲ್ಲಿ ಮಡಿವಾಳ ಮಾಚಿದೇವರು ಅಗ್ರಪಂಕ್ತಿಯಲ್ಲಿದ್ದವರು ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, 12ನೇ ಶತಮಾನದ ದಾರ್ಶನಿಕ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಥೇಮ್ಸ್ ನದಿ ದಡದ ಮೇಲೆ ಸ್ಥಾಪನೆಯಾಗಿದೆ. ಶರಣರ ವಚನಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗುವದನ್ನು ನೋಡಿದರೆ 900 ವರ್ಷಗಳ ಹಿಂದಿನ ವಚನ ಸಾಹಿತ್ಯ ಇಂದಿನ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು.
ಎಚ್.ಜಿ.ಹೆಬ್ಬಳ್ಳಿ ಮತ್ತು ಸುಮಂಗಲಾ ಕರಡಿಗುದ್ದಿ ಮಾತನಾಡಿ, ಶರಣರು ಕಂಡ ಸಮಾನತೆಯ ನಾಡು ಕಟ್ಟಲು ಪಣ ತೊಡೋಣ, ಶರಣರ ಸಾಧನೆ ದೊಡ್ಡದಾಗಿದ್ದು ಅವರಿಗೆ ಇನ್ನೊಬ್ಬರ ಹೊಲಿಕೆ ಅಸಾಧ್ಯ, ಶರಣರಿಗೆ ಶರಣರೆ ಸಮಾನ ಎಂದರು.
ಸಿ.ಬಿ.ಯಡಳ್ಳಿ, ಎಫ್.ಎಸ್.ಸಿದ್ದನಗೌಡರ, ಎಮ್.ಎಸ್.ಕೊಳ್ಳಿ, ಎಸ್.ಎಸ್.ಆರಭಾಂವಿ, ಸಂಗಪ್ಪ ತಡವಲ, ರಾಜಕುಮಾರ ಮಡಿವಾಳರ, ಷಣ್ಮುಖಯ್ಯ ಪೂಜೇರಿ, ವಿರುಪಾಕ್ಷಯ್ಯ ಪೂಜೇರಿ, ನಾಗಪ್ಪ ನಾಯ್ಕರ, ಸೋಮಲಿಂಗ ಕಾರಿಮನಿ, ಬಸವರಾಜ ನರಸಣ್ಣವರ, ರಾಜಶೇಖರ ನಿಡವಣಿ ಇದ್ದರು. ಶೋಭಕ್ಕ ನಾಗನಗೌಡರ ಸ್ವಾಗತಿಸಿದರು. ಸುಧಾ ನರಸಣ್ಣವರ ನಿರೂಪಿಸಿದರು. ಚನ್ನಪ್ಪ ನರಸಣ್ಣವರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ
MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್
Rabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ
Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ ಖಂಡನೆ; ಮನವಿ ಸಲ್ಲಿಕೆ
Mahalingpur: ಧಾರಕಾರ ಮಳೆ; ಪ್ರಸಕ್ತ ವರ್ಷದ ಮಳೆಗಳಲ್ಲಿಯೇ ಅತ್ಯುತ್ತಮ ಮಳೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್
MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್
Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Manipal: ಬ್ಯಾಂಕ್ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್ ಬಾಯಲ್
Ajjampura: ಪತ್ನಿಯ ಶೀಲ ಶಂಕಿಸಿ 5 ವರ್ಷದ ಮಗಳನ್ನೇ ಕೊಂದ ತಂದೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.