World Cup 2023; ವಿರಾಟ್ ಸ್ವಾರ್ಥಿ ಎಂದ ಹಫೀಜ್ ಗೆ ಸರಿಯಾಗಿ ತಿರುಗೇಟು ನೀಡಿದ ಮೈಕಲ್ ವಾನ್


Team Udayavani, Nov 9, 2023, 1:32 PM IST

World Cup 2023; ವಿರಾಟ್ ಸ್ವಾರ್ಥಿ ಎಂದ ಹಫೀಜ್ ಗೆ ಸರಿಯಾಗಿ ತಿರುಗೇಟು ನೀಡಿದ ಮೈಕಲ್ ವಾನ್

ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ಎಂಟು ಪಂದ್ಯಗಳಲ್ಲಿ ವಿರಾಟ್ ನಾಲ್ಕು ಅರ್ಧಶತಕ ಮತ್ತು ಎರಡು ಶತಕ ಹೊಡೆದಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕದ ದಾಖಲೆ ಸರಿಗಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರ ಈ ಇನ್ನಿಂಗ್ಸನ್ನು ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಟೀಕೆ ಮಾಡಿದ್ದರು.

“ನಾನು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ ನಲ್ಲಿ ಸ್ವಾರ್ಥದ ಭಾವನೆಯನ್ನು ಕಂಡೆ. ಈ ವಿಶ್ವಕಪ್‌ನಲ್ಲಿ ಇದು ಮೂರನೇ ಬಾರಿಗೆ ನಡೆದಿದೆ. 49 ನೇ ಓವರ್‌ನಲ್ಲಿ, ಅವರು ತಮ್ಮ ಶತಕವನ್ನು ತಲುಪಲು ಸಿಂಗಲ್ ತೆಗೆದುಕೊಳ್ಳಲು ನೋಡುತ್ತಿದ್ದರು. ಅವರು ತಂಡದ ಹಿತಕ್ಕೆ ಪ್ರಾಶಸ್ತ್ಯ ನೀಡಲಿಲ್ಲ” ಎಂದು ಹಫೀಜ್ ಹೇಳಿದ್ದರು.

ಹಫೀಜ್ ಅವರ ಈ ‘ಸ್ವಾರ್ಥ’ ಹೇಳಿಕೆಗೆ ಭಾರೀ ಟೀಕೆಗಳು ಎದುರಾಗಿತ್ತು. ಭಾರತದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಹಫೀಜ್ ಗೆ ಕಿಡಿಕಾರಿದ್ದಾರೆ.

ಪುಣೆಯಲ್ಲಿ ಬುಧವಾರ ನಡೆದ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ನಡುವಿನ ಪಂದ್ಯದಲ್ಲಿ ಆಂಗ್ಲರ ತಂಡದ ಬೆನ್ ಸ್ಟೋಕ್ಸ್ ಶತಕ ಬಾರಿಸಿದ್ದರು. ಸ್ಟೋಕ್ಸ್ 84 ಎಸೆತಗಳಲ್ಲಿ 108 ರನ್ ಗಳಿಸಿದ್ದರು. ಈ ಇನ್ನಿಂಗ್ಸನ್ನು ಹೊಗಳುವ ಭರದಲ್ಲಿ ಹಫೀಜ್ ಮತ್ತೆ ಕೊಹ್ಲಿ ವಿರುದ್ಧ ಟೀಕೆ ಮಾಡಿದ್ದರು.

“ಬೆನ್‌ ಸ್ಟೋಕ್ಸ್ ಒತ್ತಡದಲ್ಲಿ ತಂಡವು ಗೆಲ್ಲಲು ಗರಿಷ್ಠ ರನ್ ಗಳಿಸಲು ಆಕ್ರಮಣಕಾರಿ ಉದ್ದೇಶದಿಂದ ಅಗತ್ಯವಿರುವಲ್ಲಿ ಇನ್ನಿಂಗ್ಸ್‌ ಆ್ಯಂಕರ್ ಮಾಡುತ್ತಾನೆ. ಸ್ವಾರ್ಥ ಮತ್ತು ನಿಸ್ವಾರ್ಥ ವಿಧಾನವನ್ನು ಪ್ರತ್ಯೇಕಿಸಲು ಸಂಪೂರ್ಣ ಉದಾಹರಣೆ.” ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಮರು ಟ್ವೀಟ್ ಮಾಡಿದ್ದ ವಾನ್, ಸ್ಟೋಕ್ಸ್ ರದ್ದು ಉತ್ತಮ ಇನ್ನಿಂಗ್ಸ್. ವಿರಾಟ್ ರದ್ದು ಕೂಡಾ ಹಾಗೆಯೇ. ಯಾಕೆಂದರೆ ಅವರದ್ದು ಕೋಲ್ಕತ್ತಾದ ಕಠಿಣ ಪಿಚ್ ಮತ್ತು ಕಠಿಣ ಬೌಲಿಂಗ್ ದಾಳಿಯ ಎದುರಾಗಿ ಬಂದಿತ್ತು ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ, ಈ ಹಿಂದೆ ಮೊಹಮ್ಮದ್ ಹಫೀಜ್ ಅವರು ವಿರಾಟ್ ಕೊಹ್ಲಿಯ ಬೌಲಿಂಗ್ ನಲ್ಲಿ ಔಟಾದ ಫೋಟೊವೊಂದನ್ನು ಹಂಚಿಕೊಂಡ ವಾನ್, ‘ನೀವು ವಿರಾಟ್ ಬೌಲಿಂಗ್ ನಿಂದ ಬೌಲ್ಡ್ ಆಗಿದ್ದೀರಿ, ಬಹುಶಃ ಈ ಕಾರಣಕ್ಕೆ ನಿವು ಯಾವಾಗಲೂ ಅವನ ಬಗ್ಗೆ ಹೇಳುತ್ತೀರಿ’ ಎಂದು ಕಿಚಾಯಿಸಿದ್ದಾರೆ. ವಿಶೇಷವೆಂದರೆ ಕೊಹ್ಲಿಯ ನಿಧಾನಗತಿ ಬ್ಯಾಟಿಂಗ್ ಎಂದು ಟೀಕೆ ಮಾಡುವ ಹಫೀಜ್ ಆ ಟಿ20 ವಿಶ್ವಕಪ್ ಇನ್ನಿಂಗ್ಸ್ ನಲ್ಲಿ 28 ಎಸೆತಗಳಲ್ಲಿ ಕೇವಲ 15 ರನ್ ಮಾಡಿ ಔಟಾಗಿದ್ದರು.

ಟಾಪ್ ನ್ಯೂಸ್

1-manu

Ramp Walk ಮಾಡಿ ಗಮನ ಸೆಳೆದ ಮನು ಭಾಕರ್ : ವಿಡಿಯೋ ನೋಡಿ

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

1-crick

1st Test; ಪಾಕಿಸ್ಥಾನಕ್ಕೆ ತವರಿನಲ್ಲೇ ಶಾಕ್:ಇಂಗ್ಲೆಂಡ್ ಗೆ ಇನಿಂಗ್ಸ್ & 47 ರನ್‌ಗಳ ಜಯ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Train: ಕುಂದಾಪುರದಿಂದ ತಿರುಪತಿಗೆ ರೈಲು: ವಿಜಯ ದಶಮಿಯಂದು ಚಾಲನೆ

Train: ಕುಂದಾಪುರದಿಂದ ತಿರುಪತಿಗೆ ರೈಲು: ವಿಜಯ ದಶಮಿಯಂದು ಚಾಲನೆ

Haryana: ಅಕ್ಟೋಬರ್ 15ರಂದು ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

Haryana: ಅಕ್ಟೋಬರ್ 15ರಂದು ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

10-fonts

UV Fusion: ಫಾಂಟ್‌ ಎಂದು ಉಪೇಕ್ಷಿಸಬೇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-manu

Ramp Walk ಮಾಡಿ ಗಮನ ಸೆಳೆದ ಮನು ಭಾಕರ್ : ವಿಡಿಯೋ ನೋಡಿ

1-crick

1st Test; ಪಾಕಿಸ್ಥಾನಕ್ಕೆ ತವರಿನಲ್ಲೇ ಶಾಕ್:ಇಂಗ್ಲೆಂಡ್ ಗೆ ಇನಿಂಗ್ಸ್ & 47 ರನ್‌ಗಳ ಜಯ

1-wewqewqe

Women’s T20 World Cup;ಇಂದು ಆಸ್ಟ್ರೇಲಿಯಕ್ಕೆ ಪಾಕ್‌ ಸವಾಲು

BCCI

Ranji Trophy ಕ್ರಿಕೆಟ್‌ ಇಂದಿನಿಂದ : ಕರ್ನಾಟಕಕ್ಕೆ ಮಧ್ಯಪ್ರದೇಶ ಎದುರಾಳಿ

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-manu

Ramp Walk ಮಾಡಿ ಗಮನ ಸೆಳೆದ ಮನು ಭಾಕರ್ : ವಿಡಿಯೋ ನೋಡಿ

9

Mangaluru: ಜರ್ಮನಿ ಪಾರ್ಲಿಮೆಂಟ್‌ ಪುಸ್ತಕದಲ್ಲಿ ಸ್ಪೀಕರ್‌ ಖಾದರ್‌ ಸಹಿ

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

12-hosapete

Hosapete ರೋಟರಿ ಕ್ಲಬ್ ನೂತನ ಸಭಾಂಗಣಕ್ಕೆ ರತನ್ ಟಾಟಾ ಹೆಸರು

8

ಇಂದ್ರಾಳಿ ಮೇಲ್ಸೇತುವೆ ನ.10ರೊಳಗೆ ಪೂರ್ಣಗೊಳಿಸಲು ಡಿಸಿ ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.