![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
ಶ್ರೀರಾಮ್ ನಾಯಕ್, Nov 10, 2023, 5:51 PM IST
ಪಾವ್ ಭಾಜಿ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯತೆಯನ್ನು ಪಡೆದ ಖಾದ್ಯಗಳಲ್ಲಿ ಒಂದಾಗಿದೆ ಇದರ ಹೆಸರು ಕೇಳಿದಾಗ ನೆನಪಿಗೆ ಬರುವುದು ಮಹಾರಾಷ್ಟ್ರ. ಯಾಕೆಂದರೆ ಈ ಖಾದ್ಯ ಹುಟ್ಟಿದ್ದು ಅಲ್ಲಿಯೇ. ಸುಮಾರು 1850ರ ದಶಕದಲ್ಲಿ ಈ ಖಾದ್ಯವು ಮುಂಬೈಯ ಗಿರಣಿ ಕಾರ್ಮಿಕರ ಭಕ್ಷ್ಯಕ್ಕಾಗಿ ಹುಟ್ಟಿಕೊಂಡಿತು. ಆದಾಗ್ಯೂ ಕಾಲಾನಂತರದಲ್ಲಿ ಈ ಖಾದ್ಯವು ರೆಸ್ಟೋರೆಂಟ್ ಗಳಲ್ಲಿ ತನ್ನ ದಾರಿಯನ್ನು ಕಂಡುಕೊಂಡಿತು ಹೀಗೆ ಅಂತಿಮವಾಗಿ ಇಡೀ ಭಾರತ ಹಾಗೂ ವಿದೇಶಕ್ಕೂ ಈ ಖಾದ್ಯ ಹರಡಿತು. ಈಗ ಪಾವ್ ಭಾಜಿ ಎಲ್ಲರ ಮೆಚ್ಚಿನ ಆಹಾರವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರನ್ನೂ ಸೆಳೆಯುತ್ತದೆ. ನೀವು ಸಹ ಪಾವ್ ಭಾಜಿ ರುಚಿಗೆ ಮನಸೋತಿದ್ದರೆ ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು
ಪಾವ್ ಬನ್- 6 ರಿಂದ 8, ಆಲೂಗಡ್ಡೆ-3, ಬಟಾಣಿ-100ಗ್ರಾಂ, ಕ್ಯಾಪ್ಸಿಕಮ್-2,ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು-ಸ್ವಲ್ಪ, ಬೆಣ್ಣೆ-ಅರ್ಧ ಕಪ್,ಪಾವ್ ಭಾಜಿ ಮಸಾಲ-4ಚಮಚ, ಮೆಣಸಿನ ಪುಡಿ-2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ನಿಂಬೆ ರಸ-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
-ಮೊದಲಿಗೆ ಆಲೂಗಡ್ಡೆ ಮತ್ತು ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
-ನಂತರ ಈರುಳ್ಳಿ, ಟೊಮೆಟೋ , ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ.
-ಒಂದು ಬಾಣಲೆಗೆ 2ಚಮಚ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ, ಟೊಮೆಟೋ,ಕ್ಯಾಪ್ಸಿಕಮ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಿ.
-ತದನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪಾವ್ ಭಾಜಿ ಮಸಾಲ,ಮೆಣಸಿನ ಪುಡಿ,ಬೇಯಿಸಿದ ಆಲೂಗಡ್ಡೆ/ಬಟಾಣಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ(ಸ್ಮಾಶ್)ಸ್ವಲ್ಪ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ 3 ರಿಂದ 5ನಿಮಿಷ ಬೇಯಲು ಬಿಡಿ.
-ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಕರವಾದ ಭಾಜಿ ಸಿದ್ಧ.
-ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಮಧ್ಯ ಸೀಳಿದ ಪಾವ್ ಬನ್ ನ ಎರಡೂ ಬದಿ ಸ್ವಲ್ಪ ರೋಸ್ಟ್ ಮಾಡಿಕೊಳ್ಳಿ ನಂತರ ಭಾಜಿ ಜೊತೆ ಸರ್ವ್ ಮಾಡಿದರೆ ಸ್ವಾಧಿಷ್ಟಕರವಾದ ಪಾವ್ ಭಾಜಿ ಸವಿಯಲು ಸಿದ್ಧ.
-ಶ್ರೀರಾಮ್ ಜಿ. ನಾಯಕ್
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್ಲಾಲ್ ನಂತಹ 20 ಸ್ಟಾರ್ಸ್ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.