Daily Horoscope: ಒಂದರ ಮೇಲೊಂದು ಕಿರಿಕಿರಿ ತಂದಿಡುವ ನಕಾರಾತ್ಮಕ ಶಕ್ತಿಗಳ ಹಾವಳಿ


Team Udayavani, Nov 11, 2023, 7:30 AM IST

1-Saturday

ಮೇಷ: ಅವಸರದಲ್ಲಿ ನಿರ್ಧಾರ ಕೈಗೊಳ್ಳದಿರಿ. ಉದ್ಯೋಗ ಸ್ಥಾನದಲ್ಲಿ ಕಳೆದು ಹೋದ ಹೆಸರು ಮತ್ತೆ ಪ್ರಾಪ್ತಿ.ಮಾರ್ಗದರ್ಶಕನ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ನೌಕರರನ್ನು ಹುರಿದುಂಬಿಸುವ ಕ್ರಮ. ಆರೋಗ್ಯ ಉತ್ತಮ.

ವೃಷಭ: ಸೃಷ್ಟಿಯನ್ನು ವಿಶಾಲವಾಗಿಟ್ಟು ಕೊಂಡು ಮುನ್ನಡೆಯಿರಿ. ಉದ್ಯೋಗದಲ್ಲಿನ ಸ್ಥಾನ ಸ್ಥಿರ. ಹೊಸ ಉದ್ಯಮದಲ್ಲಿ ಕೈಜೋಡಿಸಲು ಆಹ್ವಾನ. ವ್ಯವಹಾರ ವಿಸ್ತರಣೆಗೆ ವಿತ್ತಸಂಸ್ಥೆಯ ನೆರವು ಲಭ್ಯ. ಗಣ್ಯರೊಂದಿಗೆ ಓಡಾಟದ ಸಂದರ್ಭ.

ಮಿಥುನ: ಒಂದರ ಮೇಲೊಂದು ಕಿರಿಕಿರಿಯನ್ನು ತಂದಿಡುವ ನಕಾರಾತ್ಮಕ ಶಕ್ತಿಗಳ ಹಾವಳಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿಯಾದರೂ ಗೌರವ ವೃದ್ಧಿ. ಸ್ವಂತ ಉದ್ಯಮ ಮಂದಗತಿಯಲ್ಲಿ ಪ್ರಗತಿ. ಹಿರಿಯರಿಗೆ ಅನಾರೋಗ್ಯದ ಭೀತಿ.

ಕರ್ಕ: ಸಂದರ್ಭಗಳ ಸದುಪಯೋಗವನ್ನು ಕಲಿತರೆ ಯಶಸ್ಸು ಅಬಾಧಿತ. ಉದ್ಯೋಗದ ವಿಷಯದಲ್ಲಿ ಆತಂಕ ಬೇಡ. ಪ್ರಾಚೀನ ವಿದ್ಯೆಯನ್ನು ಕಲಿಯುವ ಆಸಕ್ತಿ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚುವರಿ ಜವಾಬ್ದಾರಿಗಳು.

ಸಿಂಹ: ಕೆಲವೊಮ್ಮೆ ಮನುಷ್ಯ ಯೋಚಿಸಿ ದಂತೆಯೇ ವಾತಾವರಣ ನಿರ್ಮಾಣಗೊಳ್ಳುತ್ತದೆ ಎನ್ನುವುದಕ್ಕೆ ನಿಮ್ಮಷ್ಟು ಒಳ್ಳೆಯ ಉದಾಹರಣೆ ಇನ್ನೊಂದು ಸಿಗಲಾರದು. ಮುಟ್ಟಿದೆಲ್ಲ ಚಿನ್ನವಾಗುವ ದಿನ. ಉದ್ಯಮ ಉತ್ಪನ್ನಗಳಿಗೆ ವಿದೇಶದಿಂದಲೂ ಬೇಡಿಕೆ.

ಕನ್ಯಾ: ಅರಸುತ್ತಿರುವ ಬಳ್ಳಿ ಕಾಲಿಗೆ ಸುತ್ತಿಕೊಳ್ಳು ವಂತಹ ಅದೃಷ್ಟವಂತರು ನೀವು. ಉದ್ಯಮ ಆರಂಭಿಸುವ ಪ್ರಯತ್ನದಲ್ಲಿ¨ªಾಗಲೇ ಅಕಸ್ಮಾತ್‌ ಧನಾಗಮ. ಹಿರಿಯರ ಆಸ್ತಿ ಅಭಿವೃದ್ಧಿಯ ಯೋಜನೆ ಕಾರ್ಯರೂಪಕ್ಕೆ.

ತುಲಾ: ಆನಂದವನ್ನು ಬೇಕಾದಂತೆ ಆವಾಹಿಸಿ ಕೊಳ್ಳುವ ವಿದ್ಯೆಯನ್ನು ಬಲ್ಲವರಾಗಿರುವುದರಿದ ನಿಮ್ಮ ವ್ಯಕ್ತಿತ್ವ ನಿಗೂಢವಾಗಿ ಕಾಣಿಸುತ್ತದೆ! ಉದ್ಯೋಗ ಅಬಾಧಿತ. ಸ್ವಂತದ ಉದ್ಯಮ ತಕ್ಕಮಟ್ಟಿಗೆ ನಿರಾತಂಕ ಸ್ಥಿತಿ ಯಲ್ಲಿ. ನೌಕರರ ಕಾರ್ಯೋತ್ಸಾಹದಿಂದ ಯಶಸ್ಸು ಪ್ರಾಪ್ತಿ.

ವೃಶ್ಚಿಕ: ಸಂತೃಪ್ತಿ, ಸಮಾಧಾನಗಳ ದಿನ. ಸಹೋದ್ಯೋಗಿಗಳಿಗೆ ಪ್ರೋತ್ಸಾಹಪೂರ್ವಕ ಮಾರ್ಗದರ್ಶನದಿಂದ ಗೌರವ ವೃದ್ಧಿ. ವ್ಯವಹಾರ ಸ್ಥಾನಕ್ಕೆ ಗಣ್ಯರ ಸಂದರ್ಶನ. ಗೃಹೋತ್ಪನ್ನಗಳ ಮಾರಾಟದಿಂದ ನಿರೀಕ್ಷೆ ಮೀರಿದ ಲಾಭ.

ಧನು: ಯಾವುದೇ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವುದನ್ನು ಬಲ್ಲವರಿಗೆ ಬದುಕು ಸಮಸ್ಯೆಯಾಗುವುದಿಲ್ಲ. ಉದ್ಯೋಗವನ್ನು ಸಲೀಸಾಗಿ ನಿರ್ವಹಿಸುವಿರಿ. ಸಮಾಜದಲ್ಲಿ ಗೌರವ ವೃದ್ಧಿ. ಸಣ್ಣ ಪ್ರಮಾಣದಲ್ಲಿ ಕೃಷಿ ಆರಂಭ.

ಮಕರ: ಮೃದುಭಾಷಿಯಾಗಿರುವುದರಿಂದ ಸುಲಭದಲ್ಲಿ ಕಾರ್ಯಸಿದ್ಧಿ. ಉದ್ಯೋಗದಲ್ಲಿ ಪ್ರತಿಭೆಗೆ ಮಾನ್ಯತೆ. ಲೆಕ್ಕ ಪರಿಶೋಧಕರು, ವೈದ್ಯರು, ಎಂಜಿನಿಯರ್‌ರು ಮೊದಲಾದ ವೃತ್ತಿಪರರಿಗೆ ಮುಗಿಯದ ಆತಂಕ. ಹತ್ತಿರದ ದೇವಾಲಯಕ್ಕೆ ಭೇಟಿ.

ಕುಂಭ: ಸಂಪತ್ತಿನ ಸದ್ವಿನಿಯೋಗದ ಯೋ ಚನೆ. ಉದ್ಯೋಗದಲ್ಲಿ ಇನ್ನಷ್ಟು ವೇತನ ಏರಿಕೆಯೊಂದಿಗೆ ಜವಾಬ್ದಾರಿ ಹೇರಿಕೆ. ಸಾಮಾಜಿಕ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಆಸಕ್ತಿ. ಬಂಧುವರ್ಗದಲ್ಲಿ ವಿವಾಹಕ್ಕೆ ಸಹಾಯ.

ಮೀನ: ಸಪ್ತಾಹದಲ್ಲಿ ಕೈಗೆತ್ತಿಕೊಂಡ ಮುಖ್ಯಕಾರ್ಯಗಳ ಮುಕ್ತಾಯ.ಉದ್ಯೋಗದಲ್ಲಿ ಅನಿರೀಕ್ಷಿತವಾದ ಗುರುಸ್ಥಾನ ಪ್ರಾಪ್ತಿ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ವಿಭಾಗದಲ್ಲಿ ವಿಶ್ವಾಸ ಉಳಿಕೆ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಮನೆಯವರ ಸಹಕಾರ.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

1-horoscope

Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ

Dina Bhavishya

Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು

031

Horoscope: ರಾಜಕಾರಣಿಗಳಿಗೆ ನೆಮ್ಮದಿ ಭಂಗವಾಗಲಿದೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.