Lal Salaam ಟೀಸರ್ನಲ್ಲಿ ಮಿಂಚಿದ ರಜಿನಿ; ʼಮೊಯ್ದೀನ್ ಭಾಯಿʼ ಲುಕ್ಸ್ ಗೆ ಫ್ಯಾನ್ಸ್ ಫಿದಾ
Team Udayavani, Nov 12, 2023, 3:21 PM IST
ಚೆನ್ನೈ: ಕಾಲಿವುಡ್ ಸಿನಿರಂಗದ ಪ್ರೇಕ್ಷಕರಿಗೆ ದೀಪಾವಳಿ ಹಬ್ಬಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಲಾಲ್ ಸಲಾಂʼ ಚಿತ್ರದ ಟೀಸರ್ ಗಿಫ್ಟ್ ಆಗಿ ಸಿಕ್ಕಿದೆ.
ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ʼಲಾಲ್ ಸಲಾಂʼ ನಲ್ಲಿ ʼತಲೈವಾʼ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರಜಿನಿಕಾಂತ್ ನಿರ್ದೇಶನದ ʼಲಾಲ್ ಸಲಾಂʼ ಈಗಾಗಲೇ ಪೋಸ್ಟರ್ ಗಳಿಂದ ಗಮನ ಸೆಳೆದಿದೆ. ಇದೀಗ ಟೀಸರ್ ರಿಲೀಸ್ ಮಾಡಿ ಪ್ರೇಕ್ಷಕರಿಗೆ ದೀಪಾವಳಿ ಹಬ್ಬಕ್ಕೆ ಕೊಡುಗೆ ನೀಡಿದೆ.
ಗಲಾಟೆಯೊಂದು ನಡೆದಿರುವ ದೃಶ್ಯವನ್ನು ತೋರಿಸಲಾಗಿದೆ. ಎರಡು ಪಾತ್ರದ ರೋಷದ ನೋಟವನ್ನು ತೋರಿಸಿದ್ದು, ಕ್ರಿಕೆಟ್ ಆಡುವ ತಂಡವನ್ನು ತೋರಿಸಲಾಗಿದೆ. ಕ್ರಿಕೆಟ್ ಹಾಗೂ ಇಬ್ಬರ ನಡುವೆ ನಡೆಯುವ ಸಮರದ ಕಥೆಯಲ್ಲಿ ಕುಟುಂಬ ಹಾಗೂ ರಾಜಕೀಯ ಸ್ಥಿತಿ ಟೀಸರ್ ಝಲಕ್ ನಲ್ಲಿದೆ.
ಟೀಸರ್ ನಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶವೆಂದರೆ ʼ ಮೊಯ್ದೀನ್ ಭಾಯಿʼ ಆಗಿ ಕಾಣಿಸಿಕೊಂಡಿರುವ ರಜಿನಿಕಾಂತ್ ಫೈಟ್ ಸೀನ್ ಗಳು. ಮನೆಯ ಹಿರಿಯವನಾಗಿ ಇಲ್ಲಿ ʼತಲೈವಾʼ ಕಾಣಿಸಿಕೊಂಡಿದ್ದಾರೆ.
ʼಲಾಲ್ ಸಲಾಂʼ ಐಶ್ವರ್ಯಾ ನಿರ್ದೇಶನದ ಮೂರನೇ ಸಿನಿಮಾ. ಈ ಹಿಂದೆ ಅವರು ʼ3ʼ(2011), ʼ ವೈ ರಾಜಾ ವೈʼ(2015) ಸಿನಿಮಾವನ್ನು ಮಾಡಿದ್ದರು. ʼಲಾಲ್ ಸಲಾಂʼ ಸಿನಿಮಾದಲ್ಲಿ ವಿಷ್ಣು ವಿಶಾಲ್,ವಿಕ್ರಾಂತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ರಜಿನಿಕಾಂತ್ ಹಾಗೂ ಕಪಿಲ್ ದೇವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2024 ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದೇ ಸಮಯದಲ್ಲಿ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ಕೂಡ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Japan ಆ್ಯನಿಮೇಟೆಡ್ ರಾಮಾಯಣ ಅ.18ಕ್ಕೆ ಮರು ಬಿಡುಗಡೆ
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್ ಚೌಟ
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.