Jaipur: ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್ನಿಂದ ಪರಿಸರಸ್ನೇಹಿ ಗೋಮಯದಿಂದ 3 ಲಕ್ಷ ದೀಪ
Team Udayavani, Nov 12, 2023, 11:42 PM IST
ಜೈಪುರ: ರಾಜಸ್ಥಾನ ರಾಜಧಾನಿ ಜೈಪುರದ ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್ ದೀಪಾವಳಿಗಾಗಿ ಗೋಮಯ ಬಳಸಿ 3 ಲಕ್ಷಕ್ಕೂ ಅಧಿಕ ಪರಿಸರಸ್ನೇಹಿ ದೀಪಗಳನ್ನು ತಯಾರಿಸಿದೆ. ಹರೇ ಕೃಷ್ಣ ಮೂಮೆಂಟ್ ಅಡಿಯಲ್ಲಿ ಈ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಜೈಪುರದ ಸಮೀಪವಿರುವ ಟ್ರಸ್ಟ್ನ ಹಿಂಗೋನಿಯಾ ಗೋಶಾಲೆಯಲ್ಲಿ 13,000ಕ್ಕೂ ಹೆಚ್ಚು ಗೋವುಗಳಿವೆ.
“ಹಿಟ್ಟು, ಮರದ ಪುಡಿ ಮತ್ತು ಬೆಲ್ಲದ ಪುಡಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಗೋಮಯದೊಂದಿಗೆ ಬೆರೆಸಿ ದೀಪಗಳನ್ನು ತಯಾರಿಸಲಾಗಿದೆ. ದೀಪಾವಳಿ ಅಂಗವಾಗಿ ನಮ್ಮ ಸ್ವಯಂ ಸೇವಕರು ಶ್ರಮವಹಿಸಿ, 3 ಲಕ್ಷಕ್ಕೂ ಅಧಿಕ ದೀಪಗಳನ್ನು ತಯಾರಿಸಿದ್ದಾರೆ” ಎಂದು ಹರೇ ಕೃಷ್ಣ ಮೂಮೆಂಟ್ನ ವಕ್ತಾರರು ತಿಳಿಸಿದ್ದಾರೆ.
“ಮಿಶ್ರಣಕ್ಕೆ ಹೈಡ್ರಾಲಿಕ್ ಸಹಾಯದಿಂದ ಕಾರ್ಯನಿರ್ವಹಿಸುವ ಯಂತ್ರದ ಸಹಾಯದಿಂದ ಸುಂದರವಾದ ಆಕಾರ ನೀಡಲಾಯಿತು. ಒಂದು ನಿಮಿಷಕ್ಕೆ ಸುಮಾರು 11 ದೀಪಗಳನ್ನು ಸಿದ್ಧಪಡಿಸಲಾಗಿದೆ. ಅವು ಗಳನ್ನು ಭಕ್ತರಿಗೆ, ಹಲವನ್ನು ರಿಯಾಯಿತಿ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.