Daily Horoscope: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ


Team Udayavani, Nov 13, 2023, 7:30 AM IST

TDY-1

ಮೇಷ: ಹಬ್ಬದ ದಿನಗಳ ಮಧ್ಯದಲ್ಲಿ ಕರ್ತವ್ಯದ ಕರೆಗೆ ಓಗೊಡಬೇಕಾದ ಪರಿಸ್ಥಿತಿ. ಕಾರ್ಯ ಭಾರ ನಿರ್ವಹಣೆಯಲ್ಲಿ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆಯನ್ನು ಹಿಡಿದಿಡುವ ಪ್ರಯತ್ನ. ಪಾಲುದಾರರೊಂದಿಗೆ ಕಾರ್ಯಯೋಜನೆ ವಿಮರ್ಶೆ.

ವೃಷಭ: ಉದ್ಯೋಗ ಸ್ಥಾನದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಕಾರ್ಯ. ಉದ್ಯಮದ ನೌಕರ ವರ್ಗಕ್ಕೆ ಸಂತೋಷ. ಬಂಧುಗಳೊಂದಿಗೆ ಸಮ್ಮಿಲನ. ದೂರದ ಊರಿನಲ್ಲಿರುವ ಬಂಧುಗಳ ಮನೆಯಲ್ಲಿ ಶುಭಕಾರ್ಯದ ವಾರ್ತೆ. ಪ್ರಾಚೀನ ವಿದ್ಯಾಪಾರಂಗತರ ಭೇಟಿಯಿಂದ ಲಾಭ.

ಮಿಥುನ: ಸ್ವಯಂಸಾಧನೆ ಯಿಂದ ಆತಂಕ ದೂರ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ. ಊರಿನಿಂದ ಬಂದ ಗಣ್ಯರಿಗೆ ಗೌರವ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ ಮುಂದೂಡಲು ನಿರ್ಧಾರ. ಸಾಹಿತ್ಯ ಉಪಾಸಕರಿಗೆ ಸಮಾಧಾನದ ದಿನ.

ಕರ್ಕಾಟಕ: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ. ಉದ್ಯೋಗದಲ್ಲಿ ನಿಮ್ಮದೇ ಛಾಪು ಮೂಡಿಸುವುದರಲ್ಲಿ ಯಶಸ್ವಿ. ಉದ್ಯಮ ಕ್ಷೇತ್ರದಲ್ಲಿ ಎಳೆಯರಿಗೆ ಪೋ›ತ್ಸಾಹ ನೀಡುವ ಕ್ರಮಗಳು. ಸರಕಾರಿ ಕ್ಷೇತ್ರದ ಮಹಿಳಾ ಅಧಿಕಾರಿಯಿಂದ ಸಹಾಯ.

ಸಿಂಹ: ಸ್ವಯಂ ಯೋಗ್ಯತೆ ಯಿಂದ ಉನ್ನತಿಗೇರಿದ ನಿಮಗೆ ಭವಿಷ್ಯದ ಚಿಂತೆಯಿಲ್ಲ. ಉದ್ಯೋಗ ಸ್ಥಾನದಲ್ಲಿ ಅನಭಿಷಿಕ್ತ  ದೊರೆಯ ಸ್ಥಾನ. ಆತಂಕ ಒಡ್ಡುವವರ ಪರಾಜಯ.  ಸ್ವಂತ ಉದ್ಯಮಕ್ಕೆ ಎದುರಾದ ಪೈಪೋಟಿ ಹೇಳಹೆಸರಿಲ್ಲದೆ ಮಾಯ.

ಕನ್ಯಾ: ಆರ್ಥಿಕ ಪ್ರಗತಿಗೆ ಹಿತಶತ್ರುಗಳು ಒಡ್ಡಿದ ಬಾಧೆ ನಿವಾರಣೆ. ಉದ್ಯೋಗದಲ್ಲಿ ವೇತನ ಏರಿಕೆ. ಅಕಸ್ಮಾತ್‌ ಧನಲಾಭ. ವಾಹನ ಸಂಬಂಧಿ ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಲಾಭ. ವಸ್ತ್ರೋದ್ಯಮಿಗಳ ಆದಾಯ ಊಹಾತೀತ ಮಟ್ಟದಲ್ಲಿ  ವೃದ್ಧಿ. ಸಣ್ಣ ಪ್ರಯಾಣದಲ್ಲಿ ಅನಿರೀಕ್ಷಿತ ಖರ್ಚು.

ತುಲಾ: ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಸಂತೋಷದ ಕ್ಷಣಗಳು ನಿಮ್ಮದಾಗಿವೆ. ಉದ್ಯೋಗ ಸ್ಥಾನದಲ್ಲಿ ಸದಾ ಬೇಡಿಕೆಯಲ್ಲಿದ್ದೀರಿ. ಉದ್ಯಮದಲ್ಲಿ ಪ್ರತಿಭೆಗೆ ಮನ್ನಣೆ ನೀಡಿದ್ದರಿಂದ ಆದರಣೀಯರಾಗಿದ್ದೀರಿ. ನೆರೆಯ ಮಿತ್ರರ ಆನಂದದಲ್ಲಿ ಪಾಲುಗೊಂಡ ಸಂತೃಪ್ತಿ.

ವೃಶ್ಚಿಕ: ಇಲ್ಲದಿರುವುದರ ಚಿಂತೆ ಬಿಟ್ಟು ಇರುವುದಕ್ಕೆ ಸಂತೋಷ ಪಡಿ.ಮಕ್ಕಳ ಏಳಿಗೆ ಯನ್ನು ನೋಡಿ ನೆಮ್ಮದಿಯ ಕ್ಚಣಗಳನ್ನು ಅನುಭವಿಸಿ.ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಪರಿಣತರೊಂದಿಗೆ ಸಮಾಲೋಚನೆ.

ಧನು: ಬಹುದಿನಗಳ ಅಪೇಕ್ಷೆ ಯೊಂದು ಈಡೇರುವ ದಿನ.  ಉದ್ಯೋಗ ಸ್ಥಾನದಲ್ಲಿ ವಿಶೇಷ ಮಾನ್ಯತೆ. ಪರಿಚಿತರ ಸಲಹೆಯಂತೆ ನಡೆದು ಅಪೇಕ್ಷಿತ ಕಾರ್ಯವನ್ನು ಮುಗಿಸಲು ಸಾಧ್ಯವಾದ ಸಂತೃಪ್ತಿ. ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಹಬ್ಬದ ದಿನಗಳ ನಡುವೆ ಉದ್ಯೋಗ ಸ್ಥಾನದ ಕರ್ತವ್ಯ ಪಾಲನೆ. ಪ್ರತಿಭೆಗೆ ಮೇಲಧಿಕಾರಿಗಳ ಮೆಚ್ಚುಗೆ. ಉದ್ಯಮಿಗಳಿಗೆ ಕಾರ್ಯಯೋಜನೆ ರೂಪಿಸುವ ಒತ್ತಡ. ವಾಹನ ಚಾಲನೆಯಲ್ಲಿ ಎಚ್ಚರ.  ಮನೆಯಲ್ಲಿ ನೆಮ್ಮದಿ.

ಕುಂಭ: ಸಂತೃಪ್ತಿಯ ಮನಸ್ಥಿತಿಯಲ್ಲಿ  ದಿನಾರಂಭ.ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ. ಸ್ವಂತ ಉದ್ಯಮದ ನೌಕರರಿಗೆ ಆನಂದ. ಉತ್ಪನ್ನಗಳಿಗೆ ಹೊಸಬರಿಂದ ಬೇಡಿಕೆ. ದೀರ್ಘಾವಧಿ ಯೋಜನೆಗಳಲ್ಲಿ ಪಾಲುಗೊಳ್ಳಲು ನಿರ್ಧಾರ.

ಮೀನ: ಕೆಲಸಗಳ  ಬದಲಾವಣೆಯೇ ವಿಶ್ರಾಂತಿ ಎಂಬುದು  ನಿಮಗೆ ಹೇಳಿ ಮಾಡಿಸಿದಂತಿದೆ.  ಉದ್ಯೋಗ ಸ್ಥಾನದಲ್ಲಿ ದಿನಕ್ಕೊಂದು ಬಗೆಯ ಹೊಸ ಜವಾಬ್ದಾರಿ ಬೆನ್ನಟ್ಟಿಕೊಂಡು ಬರುತ್ತದೆ. ಸರಕಾರಿ ಇಲಾಖೆಗಳಿಂದ  ಸಕಾಲಿಕವಾಗಿ ಅನುಕೂಲಕರ ಸ್ಪಂದನ.

ಟಾಪ್ ನ್ಯೂಸ್

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

1-horoscope

Horoscope: ಧೈರ್ಯವೊಂದೇ ಮಿತ್ರನೆಂಬ ಅರಿವು ಇರಲಿ, ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಕಾಟ

1-horoscope

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ, ಮನೋಬಲದಿಂದ ಕಾರ್ಯಸಿದ್ದಿ

1-horoscope

Daily Horoscope: ಉದ್ಯೋಗಾನ್ವೇಷಿಗಳಿಗೆ ಶುಭ ವಾರ್ತೆ, ಆರೋಗ್ಯ ಉತ್ತಮ

Dina Bhavishya

Daily Horoscope; ಉದ್ಯೋಗಸ್ಥರಿಗೆ ವಿಶಿಷ್ಟ ಜವಾಬ್ದಾರಿ, ನಿಲ್ಲದ ಹಿತಶತ್ರುಗಳ ಕಾಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.