![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-415x277.jpg)
Tunnel Collapse: ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ತಂಡದಿಂದ ಮುಂದುವರೆದ ಕಾರ್ಯಾಚರಣೆ
ಘಟನೆ ಕುರಿತು ಮಾಹಿತಿ ಪಡೆದ ಪ್ರಧಾನಿ
Team Udayavani, Nov 14, 2023, 12:26 PM IST
![Tunnel Collapse: ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ತಂಡದಿಂದ ಮುಂದುವರೆದ ಕಾರ್ಯಾಚರಣೆ](https://www.udayavani.com/wp-content/uploads/2023/11/TUNNEL-1-620x378.jpg)
ಡೆಹ್ರಾಡೂನ್: ಭಾನುವಾರ ಮುಂಜಾನೆ ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು ಬಿದ್ದ ಪರಿಣಾಮ ಅದರ ಒಳಗೆ ಸಿಕ್ಕಿಬಿದ್ದ ಸುಮಾರು ನಲ್ವತ್ತು ಮಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತುಕತೆ ನಡೆಸಿ ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣೆಗೆ ರಕ್ಷಣಾ ತಂಡಗಳು ಹಗಳಿರುಳು ಕಾರ್ಯಾಚರಣೆ ನಡೆಸುತ್ತಿದ್ದು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಅಗತ್ಯವಿರುವ ಆಮ್ಲಜನಕವನ್ನು ಪೈಪ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗಿದ್ದು. ಸುರಂಗದೊಳಗೆ ಇರುವ ಆಕ್ಸಿಜನ್ ಪ್ರಮಾಣ ಕೇವಲ 10 ತಾಸುಗಳಿಗೆ ಮಾತ್ರ ಸಾಲುವಷ್ಟಿದ್ದರಿಂದ ಸಾಧ್ಯವಾದಷ್ಟೂ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆಯಲ್ಲಿ ಎಸ್ಡಿಆರ್ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಮುಖ್ಯಮಂತ್ರಿ ಧಾಮಿ ಅವರೊಂದಿಗೆ ಮಾತನಾಡಿದ್ದಾರೆ.
ಸುರಂಗದೊಳಗೆ ಸಿಲುಕಿರುವ ಎಲ್ಲಾ 40 ಜನರನ್ನು ಮಂಗಳವಾರ ಸಂಜೆಯೊಳಗೆ ರಕ್ಷಿಸುವ ನಿರೀಕ್ಷೆಯಿದೆ ಎಂದು ಎಸ್ಪಿ ಅರ್ಪಣ್ ಯದುವಂಶಿ ಸುದ್ದಿ ಸಂಸ್ಥೆ ಎ ಎನ್ಐ ಗೆ ತಿಳಿಸಿದ್ದಾರೆ. 900 ಎಂಎಂ ಪೈಪ್ಗಳನ್ನು ತುಂಬಿದ ಟ್ರಕ್ಗಳು ಸಿಲ್ಕ್ಯಾರಾ ತಲುಪಿದ್ದು, ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಸಿಲ್ಕ್ಯಾರಾ ಸುರಂಗದ ಭಾಗದಲ್ಲಿ ಮಣ್ಣು ಕುಸಿಯುವುದನ್ನು ತಡೆಗಟ್ಟಿ ಬಳಿಕ ಉಕ್ಕಿನ ಪೈಪ್ಗಳನ್ನು ಅಳವಡಿಸುವ ಮೂಲಕ ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯವನ್ನು ತಂಡ ನಡೆಸುತ್ತಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Viral Video: ಬೈಕ್ನಲ್ಲಿ ಪಟಾಕಿ ಇಟ್ಟು ವೀಲ್ಹಿಂಗ್; ಪುಂಡಾಟ ಮೆರೆದಾತ ಅರೆಸ್ಟ್
#WATCH | SDRF rescue teams led by Commandant SDRF Manikant Mishra carry out the operation to rescue 40 labourers trapped inside the Silkyara Tunnel in Uttarkashi pic.twitter.com/aN72jZGrEm
— ANI (@ANI) November 14, 2023
ಟಾಪ್ ನ್ಯೂಸ್
![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Modi Interview](https://www.udayavani.com/wp-content/uploads/2024/07/Modi-Interview-150x84.jpg)
Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್ ಕೀ ಬಾತ್ನಲ್ಲಿ ಮೋದಿ ಹೇಳಿದ್ದೇನು?
![Sharad pawar (2)](https://www.udayavani.com/wp-content/uploads/2024/07/Sharad-pawar-2-150x88.jpg)
Maharashtra ಚುನಾವಣೆಯಲ್ಲಿ MVA ಜತೆಗೂಡಿ ಕಣಕ್ಕೆ: ಶರದ್ ಘೋಷಣೆ
![1-jha](https://www.udayavani.com/wp-content/uploads/2024/07/1-jha-150x84.jpg)
Bihar, ಬಳಿಕ ಝಾರ್ಖಂಡ್ನಲ್ಲಿ ಸೇತುವೆಯೊಂದರ ಗರ್ಡರ್ ಕುಸಿತ
![1-eqwwewq](https://www.udayavani.com/wp-content/uploads/2024/06/1-eqwwewq-150x101.jpg)
Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್
![6](https://www.udayavani.com/wp-content/uploads/2024/06/6-20-150x90.jpg)
ಯೂಟ್ಯೂಬ್ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-150x100.jpg)
Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ
![Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ](https://www.udayavani.com/wp-content/uploads/2024/07/Vandse-150x85.jpg)
Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ
![Modi Interview](https://www.udayavani.com/wp-content/uploads/2024/07/Modi-Interview-150x84.jpg)
Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್ ಕೀ ಬಾತ್ನಲ್ಲಿ ಮೋದಿ ಹೇಳಿದ್ದೇನು?
![Sharad pawar (2)](https://www.udayavani.com/wp-content/uploads/2024/07/Sharad-pawar-2-150x88.jpg)
Maharashtra ಚುನಾವಣೆಯಲ್ಲಿ MVA ಜತೆಗೂಡಿ ಕಣಕ್ಕೆ: ಶರದ್ ಘೋಷಣೆ
![1-jha](https://www.udayavani.com/wp-content/uploads/2024/07/1-jha-150x84.jpg)
Bihar, ಬಳಿಕ ಝಾರ್ಖಂಡ್ನಲ್ಲಿ ಸೇತುವೆಯೊಂದರ ಗರ್ಡರ್ ಕುಸಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.