Atlee: ಸಿನಿಮಾ ನಕಲು ಮಾಡುವ ಆರೋಪ; ಮೌನ ಮುರಿದ ನಿರ್ದೇಶಕ ಅಟ್ಲಿ

ಒಂದು ಗುಂಪು ಯಾವಾಗಲೂ ನನ್ನ ಮೇಲೆ ದಾಳಿ ಮಾಡುತ್ತಿದೆ.

Team Udayavani, Nov 15, 2023, 4:10 PM IST

Atlee: ಸಿನಿಮಾ ನಕಲು ಮಾಡುವ ಆರೋಪ; ಮೌನ ಮುರಿದ ನಿರ್ದೇಶಕ ಅಟ್ಲಿ

ಚೆನ್ನೈ: ಕಾಲಿವುಡ್‌ ಸ್ಟಾರ್‌ ನಿರ್ದೇಶಕ ಅಟ್ಲಿ ಕುಮಾರ್‌ ತಮ್ಮ ಸಿನಿಮಾಗಳಿಂದಲೇ ಹೆಸರುಗಳಿಸಿದವರು, ಇತ್ತೀಚೆಗೆ ಅವರ ʼಜವಾನ್‌ʼ ಸಿನಿಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ.

ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದರೂ ಅಟ್ಲಿ ಅವರ ಮೇಲೆ ಮೊದಲಿನಿಂದಲೂ ಅವರು ಸಿನಿಮಾಗಳನ್ನು ನಕಲು ಮಾಡುತ್ತಾರೆ ಎನ್ನುವ ಆರೋಪವೊಂದಿದೆ. ಈ ಕುರಿತು ಮುಕ್ತವಾಗಿ ಅಟ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಟ್ಲಿ ಅವರ ಮೊದಲ ಸಿನಿಮಾ ʼರಾಜಾ – ರಾಣಿʼ ಸೂಪರ್‌ ಹಿಟ್‌ ಆಗಿತ್ತು. ಆದರೆ ಈ ಸಿನಿಮಾದ ಕೆಲ ಅಂಶವನ್ನು ಮಣಿರತ್ನಂ ಅವರ ಕ್ಲಾಸಿಕ್‌ ಹಿಟ್‌ ʼಮೌನ ರಾಗಂʼ ದಲ್ಲಿತ್ತು ಎಂದು ಕೆಲವರು ಈ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡಿದ್ದರು.

ಇದಾದ ಬಳಿಕ ಬಂದ ಅವರ ಎರಡನೇ ಚಿತ್ರ ʼಥೇರಿʼಯನ್ನು ಇತರ ತಮಿಳು ಚಲನಚಿತ್ರಗಳ ಮಿಶ್ರಣ ಎಂದು ಕೆಲವರು ಕರೆದಿದ್ದರು.ʼಮೆರ್ಸಲ್ʼ ,ʼಬಿಗಿಲ್‌ʼ ಹಾಗೂ ಇತ್ತೀಚೆಗೆ ಬಂದʼಜವಾನ್ʼ ನಕಲು ಎನ್ನುವ ಆರೋಪವನ್ನು ಎದುರಿಸಿದೆ.

“ನಾನು ʼರಾಜಾ – ರಾಣಿʼ ಸಿನಿಮಾವನ್ನು ನಿರ್ದೇಶನ ಮಾಡುವಾಗ ಅದರಲ್ಲಿದ್ದ ಸಂಬಂಧಗಳ ಬಗ್ಗೆ ಏನಾದರೂ ಮಾಡಬೇಕೆಂದು ಬಯಸಿದ್ದೆ. ಆದರೆ ಅದಾಗಲೇ ಆ ಅಂಶ ಬೇರೊಂದು ಸಿನಿಮಾದಲ್ಲಿತ್ತು. ಯಾರೂ ಮಾಡದ ಒಂದೇ ಒಂದು ಕಥೆಯಿಲ್ಲ. ನಾನು ಸ್ಕ್ರಿಪ್ಟ್‌ ಮಾಡಲು ತುಂಬಾ ಶ್ರಮ ಹಾಕುತ್ತೇನೆ. ನನ್ನ ಸಿನಿಮಾವನ್ನು ಬೇರೆ ಸಿನಿಮಾಗಳಿಗೆ ಹೋಲಿಸಿ ಯಾರಾದರೂ ಎರಡು ಸೆಕೆಂಡ್‌ಗಳಲ್ಲಿ ಕಾಮೆಂಟ್ ಕಳುಹಿಸಿದರೆ, ನನ್ನ ಶ್ರಮ ಮತ್ತು ಶ್ರಮ ಎಲ್ಲವೂ ನಕಲು ಎಂದು ನಾನು ಭಾವಿಸುವುದಿಲ್ಲ” ಎಂದಿದ್ದಾರೆ.

”ಒಂದು ಗುಂಪು ಯಾವಾಗಲೂ ನನ್ನ ಮೇಲೆ ದಾಳಿ ಮಾಡಲು, ನನ್ನನ್ನು ಗುರಿಯಾಗಿಸಲು ನೋಡುತ್ತದೆ. ನನ್ನ ಕೊನೆಯ ಸಿನಿಮಾ(ಜವಾನ್)‌ ಹಿಟ್‌ ಆಯಿತು, ಹಣ ಗಳಿಸಿತು, ಅದಕ್ಕಾಗಿ ಅವರು ಏನೂ ಹೇಳಿಲ್ಲ” ಎಂದರು.

ನನ್ನನ್ನು ಕೆಳಗಿಸಲು ನಿಮ್ಮ ಬಳಿ ಇರುವುದು ಇದೊಂದೇ ಮಾರ್ಗವೇ? ಅವನು ಗೆಲ್ಲಬಾರದು ಎಂಬ ಯೋಚನೆ ಇರುವವರಿಂದಲೇ ಇಂಥ ಟೀಕೆಗಳು ಬರುತ್ತವೆ. ರಜಿನಿ ಸರ್, ವಿಜಯ್ ಸರ್ ಮತ್ತು ಅಜಿತ್ ಸರ್ ಅವರಿಗೆ ಈ ಸಮಸ್ಯೆ ಇಲ್ಲ ಅನ್ನಿಸುತ್ತಿದೆಯೇ? ಹೋರಾಡಿ ಮುನ್ನಡೆಯಬೇಕು. ಇದೆಲ್ಲ ಗೊತ್ತಿಲ್ಲದೆ ಶಾರುಖ್ ಸರ್ ನನಗೆ ಫೋನ್ ಮಾಡ್ತಾರಾ? ಎಂದು ಹೇಳಿದ್ದಾರೆ.

ಸದ್ಯ ಅಟ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಶಾರುಖ್‌ – ವಿಜಯ್‌ ಅವರನ್ನು ಜೊತೆಯಾಗಿಸಿಕೊಂಡು ಸಿನಿಮಾ ಮಾಡಲಿದ್ದೇನೆ. ಇದು ನನ್ನ ಮುಂದಿನ ಆಗಿರಬಹುದೆಂದು ಹೇಳಿದ್ದರು.

 

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.