Karnataka ಸರಕಾರವು ಈ ಬಾರಿ ಬರದ ಸವಾಲನ್ನು ಎದುರಿಸಬೇಕಿದೆ : ಡಾ.ಜಿ.ಪರಮೇಶ್ವರ್
ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ಶಂಕು
Team Udayavani, Nov 16, 2023, 8:44 PM IST
ಕೊರಟಗೆರೆ: ಈ ವರ್ಷ ರಾಜ್ಯದಲ್ಲಿ ಮಳೆ ಅತ್ಯಂತ ಕಡಿಮೆಯಾಗಿದ್ದು, ಬರದ ಛಾಯೆ ಆವರಿಸಿದೆ ಸರಕಾರವು ಈ ಸವಾಲನ್ನು ಎದುರಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಗಟ್ಲಗೊಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗುತ್ತಿದೆ, ಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಜನರಿಗೆ, ರೈತರಿಗೆ ವಿದ್ಯುತ್ ನಿರ್ವಹಣೆ ಸವಾಲಗಿದೆ ಆದರೆ ಅದನ್ನು ನಿಭಾಹಿಸಲು ಎಲ್ಲಾ ರೀತಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.
ಕೊರಟಗೆರೆ ಸೇರಿದಂತೆ ಸುತ್ತಮುತ್ತಲ ಹಾಗೂ ಬಯಲು ಸೀಮೆಯ ಪ್ರದೇಶಗಳಿಗೆ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗಳನ್ನು ಸರ್ಕಾರವು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ, ಈ ಯೋಜನೆಯಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಬಹಳ ಅನುಕೂಲವಾಗಲಿದೆ, ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯಪ್ರವೃತ್ತವಾಗಲಿದೆ ಎಂದ ಅವರು ಈ ಗ್ರಾಮದಲ್ಲಿನ ವೀರಾಂಜನೇಯ್ಯ ದೇವಾಲಯ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುವುದು ಮನುಷ್ಯನು ಜೀವನದಲ್ಲಿ ಧಾರ್ಮಿಕತೆಯಲ್ಲಿ ತೊಡಗಿಸಿಕೊಳ್ಳವುದರಿಂದ ಸಮಾಜದಲ್ಲಿ ಎಷ್ಟೋ ಅಪರಾಧಗಳು ಕಡಿಮೆಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿದ್ದ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಿಂದಿನಿಂದಲೂ ಗ್ರಾಮದ ಶಾಂತಿ ನೆಮ್ಮಂದಿಗೆ ಹಾಗೂ ಸೌಹಾದ್ಯತೆಗೆ ದೇವಸ್ಥಾನದಗಳನ್ನು ಕಟ್ಟುತ್ತಿದ್ದು ಆಂಜಿನೇಯ ಸ್ವಾಮಿಯು ಊರಿನ ಎಲ್ಲರೂ ಒಂದೆ ಮನಸ್ಸಿನ ಭಾವನೆಯಿಂದ ಪೂಜಿಸುವ ದೇವರಾಗಿದೆ ಎಂದರು.
ಎಲೆರಾಂಪುರದ ಶ್ರೀ ಹನುಮಂತನಾಥಸ್ವಾಮೀಜಿ ಮಾತನಾಡಿ ಧಾರ್ಮಿಕತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮಂದಿ ನೆಲೆಸಿದ್ದು, ಮನುಷ್ಯನ ಮಾನಸಿಕ ಶಕ್ತಿ ಧಾರ್ಮಿಕತೆಯಲ್ಲಿ ದೊರೆಯುತ್ತಿದೆ ಈ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿಅಶ್ವಥನಾರಾಯಣ ಮುಖಂಡರಾದ ವಾಲೆಚಂದ್ರಯ್ಯ, ರವಿಕುಮಾರ್, ಎ.ಡಿ.ಬಲರಾಮಯ್ಯ, ಎಂ.ಎನ್.ಜೆ.ಮAಜುನಾಥ್, ಗಟ್ಲಹಳ್ಳಿಕುಮಾರ್, ಗೋಂದಿಹಳ್ಳಿರಂಗರಾಜು ಸೇರಿದಂತೆ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು
ಬಲಿಗಾಗಿ ಕಾದುಕುಳಿತ ಅರಳಿ ಮರ; ಯಾವುದೇ ಅಹಿತಕರ ಘಟನೆಯಾಗುವ ಮುನ್ನ ಅರಳಿ ಮರ ತೆರವುಗೊಳಿಸಿ
Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್.ರಾಜಣ್ಣ
Pavagada: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಹಿಳೆ ಸಾವು
Pavagada: ಪಾವಗಡದಲ್ಲಿ ಕಂಡ ಸಿಂಹದ ವಿಡಿಯೋ ಗುಜರಾತಿನದ್ದು!
MUST WATCH
ಹೊಸ ಸೇರ್ಪಡೆ
Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು
Delhi Govt: ದೆಹಲಿ ಸಿಎಂ ರೇಸ್ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ
Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.