ಕಾರ್ಮಿಕರ ರಕ್ಷಣೆಗೆ ಆಗರ್- IAFನ ಮೂರು ವಿಮಾನಗಳ ಸಹಾಯದಿಂದ ಯಂತ್ರ ಸಾಗಾಟ
Team Udayavani, Nov 17, 2023, 12:00 AM IST
ಉತ್ತರ ಕಾಶಿ: ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಟನಲ್ ಕುಸಿದು ಸಿಲುಕಿಕೊಂಡಿರುವ 40 ಕಾರ್ಮಿಕರ ರಕ್ಷಣೆಗಾಗಿ ಅಮೆರಿಕದ ಆಗರ್ ಯಂತ್ರ ಕೆಲಸ ಮಾಡಲು ಆರಂಭಿಸಿದೆ. 12 ಮೀಟರ್ಗಿಂತಲೂ ಅಧಿಕ ರಂಧ್ರವನ್ನು ಅದು ಕೊರೆದಿದೆ. ಹೀಗಾಗಿ, ಕಾರ್ಮಿಕರ ರಕ್ಷಣೆಯ ಕಾರ್ಯದಲ್ಲಿ ಹೊಸ ಆಶೆಯೊಂದು ಚಿಗುರೊಡೆದಿದೆ.
ಐಎಎಫ್ನ ಮೂರು ಸರಕು ಸಾಗಣೆ ವಿಮಾನಗಳ ಸಹಾಯದಿಂದ ಅಮೆರಿಕದ ಆಗರ್ ಯಂತ್ರವನ್ನು ಹೊಸದಿಲ್ಲಿಯಿಂದ ಚಿನ್ಯಾಲಿಸೌರ್ ಹೆಲಿಪ್ಯಾಡ್ಗೆ ಸಾಗಿಸಲಾಯಿತು. ಅಲ್ಲಿಂದ 35 ಕಿ.ಮೀ. ದೂರದ ಟನಲ್ ಇರುವ ಸ್ಥಳಕ್ಕೆ ಯಂತ್ರವನ್ನು ತರಲಾಯಿತು.
ಕಾರ್ಮಿಕರಿಂದ ಪೂಜೆ: ಸ್ಥಳದಲ್ಲಿದ್ದ ಕಾರ್ಮಿಕರು, ಎಂಜಿನಿಯರ್ಗಳು ಯಂತ್ರಕ್ಕೆ ಪೂಜೆ ಸಲ್ಲಿಸಿದರು. ಆಗರ್ ಯಂತ್ರವು ಶೀಘ್ರವಾಗಿ ಕಡಿಮೆ ಸಮಯದಲ್ಲಿ ಭೂಮಿಯನ್ನು ಕೊರೆದು, ದೊಡ್ಡ ಪೈಪ್ಗ್ಳನ್ನು ಅಳವಡಿಸಲಿದೆ. ಇದರ ಮೂಲಕ ಕಾರ್ಮಿಕರನ್ನು ಹೊರಕ್ಕೆ ತರಬಹುದಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು ಇನ್ನೂ 2ರಿಂದ 3 ದಿನಗಳು ಬೇಕಾಗಲಿದೆ. ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕ ಸೇರಿದಂತೆ ನೀರು ಮತ್ತು ಆಹಾರವನ್ನು ಪೂರೈಸುವ ಕಾರ್ಯ ಮುಂದುವರಿದಿದೆ.
ಸಚಿವ ಸಿಂಗ್ ಪರಿಶೀಲನೆ: ಟನೆಲ್ ಕುಸಿದ ಸ್ಥಳಕ್ಕೆ ಗುರುವಾರ ಕೇಂದ್ರ ಸಚಿವ ವಿ.ಕೆ.ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, “ಕಾರ್ಮಿಕರನ್ನು ಸುರಕ್ಷಿತ ವಾಗಿ ಹೊರಕ್ಕೆ ತರುವುದು ಮೊದಲ ಆದ್ಯತೆಯಾಗಿದೆ ಎಂದರು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಾತನಾಡಿ “ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಟನಲ್ಗಳನ್ನು ಪರಿಶೀಲಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.