Insect cafe: ರಾಜ್ಯದ 20 ಕಡೆ ಕೀಟ ಕೆಫೆ ಸ್ಥಾಪನೆ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ಥಾಪಿಸಿದ್ದ "ಕೀಟ ಕೆಫೆ' ಯಶಸ್ವಿ

Team Udayavani, Nov 17, 2023, 1:01 PM IST

3-bangalore

ಬೆಂಗಳೂರು: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ ತಿಂಗಳು ಅನಾವರಣಗೊಂಡ “ಕೀಟ(ಇನ್‌ ಸೆಕ್ಟ್) ಕೆಫೆ’ ಪ್ರಯೋಗ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ನಗರದ ಕಬ್ಬನ್‌ ಪಾರ್ಕ್‌ ಸೇರಿ ರಾಜ್ಯಾದ್ಯಂತ 20 ಸಾವಿರ ರೂ.ನಲ್ಲಿ 20 ಕೀಟ ಕೆಫೆ ಸ್ಥಾಪಿಸುವ ಚಿಂತನೆ ತೋಟಗಾರಿಕೆ ಇಲಾಖೆ ನಡೆಸುತ್ತಿದೆ.

ಇಂದಿನ ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣ, ಹುಲ್ಲುಗಾವಲು ಗಳೂ ಮರೆಯಾಗಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲವಾದ್ದರಿಂದ ಇಂಡಿಯಾ ಫೌಂಡೇಷನ್‌ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹೊಸ ಪರಿಕಲ್ಪನೆಯಲ್ಲಿ ಸರ್ವ ರೀತಿಯಲ್ಲಿಯೂ ಕೀಟ ಗಳಿಗೆ ಪೂರಕವಾಗಿರಬಲ್ಲ, 20 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ “ಕೀಟ(ಇನ್‌ಸೆಕ್ಟ್) ಕೆಫೆ’ಯನ್ನು ಲಾಲ್‌ಬಾಗ್‌ ಬ್ಯಾಂಡ್‌ ಸ್ಯಾಂಡ್‌ ಬಳಿ ಸ್ಥಾಪಿಸಲಾಗಿದೆ. ನಿತ್ಯ ನೂರಾರು ವಿವಿಧ ಕೀಟಗಳು ಆಶ್ರಯ ಪಡೆಯುತ್ತಿವೆ.

3 ಸಾವಿರಕ್ಕೂ ಹೆಚ್ಚು ಪ್ರಭೇದಗಳ ಆಗರವಾಗಿರುವ ಸಸ್ಯಕಾಶಿ ಲಾಲ್‌ಬಾಗ್‌, ಅಸಂಖ್ಯಾತ ಜೀವರಾಶಿ ಹೊಂದಿರುವ ನಗರದ ಪ್ರಮುಖ ಜೀವ ವೈವಿಧ್ಯತಾ ಕೇಂದ್ರವಾಗಿದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಪರಿ ಸರ ಹಾಗೂ ಜೀವ-ಜಂತುಗಳಿಗೆ ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಆದ್ದರಿಂದ ಮರದ ತುಂಡು ಗಳಿಂದ ಸಣ್ಣ ಮನೆಯಾಕಾರದಲ್ಲಿ ಕೀಟ ಕೆಫೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕಡ್ಡಿ ಹುಳ, ಗಲ ಗಂಜಿ ಹುಳ, ವಾಡೆ ಹುಳ, ಜೀರುಂಡೆ, ಕಣಜ ಸೇರಿ 15-20ಕ್ಕೂ ಹೆಚ್ಚು ಕೀಟಗಳು ವಾಸವಾಗಿವೆ.

ಅನುಕೂಲಗಳು: ಇಂದಿನ ದಿನಗಳಲ್ಲಿ ಕ್ರಿಮಿ- ಕೀಟಗಳು ನಾಶವಾಗುತ್ತಿದ್ದು, ಅವುಗಳ ಸಂತಾ ನೋತ್ಪತ್ತಿ ಕಡಿಮೆಯಾಗಿದೆ. ಈ ಕೀಟ ಕೆಫೆಯಿಂದಾಗಿ ಗಾಳಿ-ಮಳೆಯ ಅಡೆತಡೆಗಳಿಲ್ಲದೇ, ಕೀಟಗಳ ಸಂತಾನೋತ್ಪತ್ತಿ ಆಗುವ ಜತೆಗೆ ಅವುಗಳ ವೃದ್ಧಿಯೂ ಹೆಚ್ಚಾಗುತ್ತದೆ. ಇದರಿಂದಾಗಿ ಇತರೆ ಗಿಡಗಳ ಪಾಲಿನೇಷನ್‌(ಪರಾಗಸ್ಪರ್ಶ)ಗೆ ಸಹಕಾರಿಯಾಗಲಿದೆ. ಗಿಡ-ಮರಗಳ ಅಭಿವೃದ್ಧಿಯೂ ಆಗುತ್ತದೆ. ಅಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳಿಗೂ ಆಹಾರ ದೊರೆಯುತ್ತದೆ. ಪರಿಸರ ಏಳಿಗೆಗೆ ಒಂದು ಸೂಕ್ಷ ಜೀವಿಯೂ ಪ್ರಾಮುಖ್ಯತೆ ವಹಿಸುತ್ತದೆ.

ಏನಿದು ಕೀಟ ಕಫೆ ಕೀಟ ಕೆಫೆಯನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡು, ಒಣ ಹುಲ್ಲು, ಬಿದಿರು, ವಿವಿಧ ರೀತಿಯ ಮರಗಳ ಹಾಗೂ ಗಟ್ಟಿ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಡಿಕೊಂಡಿರುವಂತೆ ಜೋಡಿಸಿರುವ ಕೀಟಗಳಿಗೆ ಸುರಕ್ಷಿತ ಮನೆಯನ್ನು ಸಿದ್ಧಪಡಿಸಲಾಗಿದೆ. ಮಣ್ಣು ತುಂಬಿದ ಒಂದು ಬಾಕ್ಸ್‌ ಜತೆಗೆ ಸೂಕ್ಷ್ಮರಂಧ್ರದಿಂದ 2.5 ಇಂಚು ಇರುವ ರಂಧ್ರದವರೆಗೆ ಇರುವ ಈ ರಚನೆಯಿಂದಾಗಿ ಎಲ್ಲಾ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಒದಗಿಸಲಾಗಿದೆ. ಮಳೆ, ಗಾಳಿಯಿಂದಲೂ ಯಾವುದೇ ತೊಂದರೆಯಾಗದಂತೆ ಕೀಟಗಳಿಗೆ ಸುರಕ್ಷಿತವಾಗಿದ್ದು, ಸಂತಾನೋತ್ಪತ್ತಿ ಮತ್ತು ಅವುಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಲಾಲ್‌ಬಾಗ್‌ನಲ್ಲಿ ಕಳೆದ ತಿಂಗಳು ಸ್ಥಾಪಿಸಿರುವ “ಕೀಟ ಕೆಫೆ’ಯಿಂದ ಅನೇಕ ಕೀಟಗಳಿಗೆ ಮತ್ತು ಪರಿಸರಕ್ಕೆ ಉಪಯೋಗವಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಲಾಲ್‌ಬಾಗ್‌ನಲ್ಲಿ ನಾಲ್ಕು, ಕಬ್ಬನ್‌ ಪಾರ್ಕಿನಲ್ಲಿ ಐದು ಸೇರಿ ರಾಜ್ಯಾದ್ಯಂತ 20 “ಕೀಟ ಕೆಫೆ’ ಸ್ಥಾಪಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಸಿದ್ಧತೆಗಳು ಪ್ರಗತಿಯಲ್ಲಿದೆ. ● ಡಾ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ(ಲಾಲ್‌ಬಾಗ್‌).

●ಭಾರತಿ ಸಜ್ಜನ್‌

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.