![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 18, 2023, 3:53 PM IST
ಚೆನ್ನೈ: ರಾಜ್ಯಪಾಲ ಆರ್.ಎನ್.ರವಿ ಇತ್ತೀಚೆಗೆ ಹಿಂದಿರುಗಿಸಿದ 10 ವಿಧೇಯಕಗಳನ್ನು ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಶನಿವಾರ ಮರು ಅಂಗೀಕರಿಸಲಾಗಿದೆ.ಈ ಮೂಲಕ ಡಿಎಂಕೆ ನೇತೃತ್ವದ ಸರಕಾರ ರಾಜ್ಯಪಾಲರಿಗೆ ಸೆಡ್ಡು ಹೊಡೆದು ತನ್ನ ಪ್ರಾಬಲ್ಯ ತೋರಿದೆ. ವಿಧೇಯಕಗಳು ಅಂಗೀಕರವಾಗುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ”ಗೆಟ್ ಔಟ್ ರವಿ” ಎನ್ನುವ ಹೆಸರಿನಲ್ಲಿ ವಿವಿಧ ಟ್ರೋಲ್ ಗಳು ವೈರಲ್ ಆಗುತ್ತಿವೆ.
ಕಾನೂನು, ಕೃಷಿ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಿದ್ದ ವಿಧೇಯಕಗಳನ್ನು ನವೆಂಬರ್ 13 ರಂದು ರಾಜ್ಯಪಾಲರಾದ ರವಿ ಅವರು ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನದಲ್ಲಿ ಸದನವು ಅಂಗೀಕರಿಸಿತು.
ರಾಜ್ಯಪಾಲರು ಮತ್ತು ಸರಕಾರದ ನಡುವಿನ ನಿಲ್ಲದ ಸಂಘರ್ಷಕ್ಕೆ ಈ ವಿದ್ಯಮಾನ ಕಾರಣವಾಗಿತ್ತು. ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಸರ್ಕಾರದ ಉಪಕ್ರಮಗಳನ್ನು ತಡೆಯಲು ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸ್ಟಾಲಿನ್ ಆಕ್ರೋಶ ಹೊರ ಹಾಕಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.