![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 19, 2023, 11:25 PM IST
ಯಲ್ಲಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ವನಪಾಲಕನ ಶವವೊಂದು ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ರವಿವಾರ ದೊರೆತಿದೆ.
ಇಡಗುಂದಿ ವಲಯದ ವನಪಾಲಕ ಕೇಶವ ಓಮಯ್ಯ ಮೇಸ್ತ (36) ದೊರೆತ ಶವವಾಗಿದ್ದು ಇವರು ರವಿವಾರ ಬೆಳಗ್ಗೆ ಮನೆಯಿಂದ ಹೋದವರು ಮಧ್ಯಾಹ್ನ ಮನೆಗೆ ಬಾರದಾಗ ಹುಡುಕಾಡಿದಾಗ ಇಡಗುಂದಿ ಸಮೀಪದ ಮುಂಡಗೆಜಡ್ಡಿ ಅರಣ್ಯದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ದೊರೆತಿದೆ.
ನೇಣಿನ ಸ್ಥಿತಿ ನೋಡಿದರೆ ಇದು ಮೇಲ್ನೋಟಕ್ಕೆ ಕೊಲೆ ಅನಿಸಿದೆ.ಅತ್ಯಂತ ಸಣ್ಣ ಬಳ್ಳಿ ಈತನ ಕೊರಳಲ್ಲಿ ಕಂಡುಬಂದಿದ್ದು ಯಾರೋ ಅರಣ್ಯಗಳ್ಳ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಇವರನ್ನು ಕೊಂದು ನೇತು ಹಾಕಿರಬಹುದೆಂದು ತರ್ಕಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಮರಗಳ ಕಳ್ಳ ಸಾಗಾಣಿಕೆ ಯಾಗುತ್ತಿತ್ತೆಂಬ ಗುಮಾನಿಯೂ ಇದೆ.ಎರಡು ವರ್ಷದ ಹಿಂದೆ ಈ ವಲಯದಲ್ಲಿ ವಾಚಮನ್ ನೊಬ್ಬರ ದಾರುಣ ಹತ್ಯೆಯೂ ಆಗಿತ್ತೆಂಬುದು ಉಲ್ಲೇಖನೀಯ.
ಈ ಸಾವಿನ ಬಗ್ಗೆ ದೂರು ನೀಡಿದ ಸಹೋದರ ಉದಯ ಮೇಸ್ತ, ಸಾವಿನ ಬಗ್ಗೆ ಸಂಶಯವಿದೆ. ಸಾವಿನ ಕುರಿತಾಗಿ ಸರಿಯಾದ ತನಿಖೆಯಾಗಬೇಕೆಂದು ಪೋಲಿಸ್ ದೂರಿನಲ್ಲಿ ತಿಳಿಸಿದ್ದಾರೆ.ಏನಿದ್ದರೂ ಪೋಲಿಸರ ತನಿಖೆಯಿಂದ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯ ಹೊರಬೀಳಬೇಕಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.