![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 20, 2023, 6:20 PM IST
ಕೊಚ್ಚಿ: ಮಾಲಿವುಡ್ ನಲ್ಲಿ ಕಳೆದ ಕೆಲ ಸಮಯದಿಂದ ಸಿನಿಮಾಗಳಿಗೆ ನೆಗೆಟಿವ್ ರಿವ್ಯೂ ನೀಡುವ ವಿಚಾರದಲ್ಲಿ ದೂರುಗಳು ದಾಖಲಾಗಿವೆ.
ಇತ್ತೀಚೆಗೆ ನಟ ದಿಲೀಪ್ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಚಿತ್ರತಂಡ ಸಿನಿಮಾದ ಕುರಿತು ನೆಗೆಟಿವ್ ರಿವ್ಯೂ ನೀಡಿದ ಕಾರಣಕ್ಕಾಗಿ ಯೂಟ್ಯೂಬರ್ಸ್ ಹಾಗೂ ವ್ಲಾಗರ್ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 13 ರಂದು ರಿಲೀಸ್ ಆದ ʼರಾಹೆಲ್ ಮಕಲ್ʼ ಸಿನಿಮಾದ ನಿರ್ದೇಶಕ ಉಬೈನಿ ಇ ಕೂಡ ನೆಗೆಟಿವ್ ರಿವ್ಯೂ ನೀಡಿದ ಫೇಸ್ ಬುಕ್, ಯೂಟ್ಯೂಬರ್ಸ್ ಹಾಗೂ ವ್ಲಾಗರ್ಸ್ ಗಳ ವಿರುದ್ಧ ದೂರು ದಾಖಲಿಸಿದ್ದರು.
ಇದರ ಬೆನ್ನಲ್ಲೇ ಈ ಕುರಿತು ಮಾಲಿವುಡ್ ಸಿನಿಮಾರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಮಾತನಾಡಿದ್ದಾರೆ.
ಮಮ್ಮುಟ್ಟಿ ಹಾಗೂ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿರುವ ʼ ಕಾತಲ್-ದಿ ಕೋರ್ʼ ಸಿನಿಮಾ ಇದೇ ನ.23 ರಂದು ತೆರೆ ಕಾಣಲಿದೆ. ಪ್ರಚಾರದ ಅಂಗವಾಗಿ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಇದೇ ವೇಳೆ ಮಮ್ಮುಟ್ಟಿ ಸಿನಿಮಾಗಳ ವಿಮರ್ಶೆ ಬಗ್ಗೆ ಮಾತನಾಡಿದ್ದಾರೆ.
ಕೋಟ್ಯಂತರ ರೂಪಾಯಿಯಲ್ಲಿ ತಯಾರಾದ ಮತ್ತು ಅನೇಕ ಜನರ ಪರಿಶ್ರಮದಿಂದ ಮಾಡಿದ ಸಿನಿಮಾವೊಂದು ವಿಮರ್ಶೆಯಿಂದ ಥಿಯೇಟರ್ ನಲ್ಲಿ ಸೋಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ಒಂದು ವಿಮರ್ಶೆಯಿಂದಾಗಿ ಸಿನಿಮಾದ ಸೋಲು ಆಗುವುದಿಲ್ಲ. ವಿಮರ್ಶೆಯು ವಿಮರ್ಶಕರ ದೃಷ್ಟಿಕೋನವನ್ನು ಆಧರಿಸಿದೆ. ವಿಮರ್ಶೆಗಳನ್ನು ನಿಲ್ಲಿಸುವುದರಿಂದ ಸಿನಿಮಾಕ್ಕೇನು ಹೊಡೆತ ಬೀಳುವುದಿಲ್ಲ ಅಥವಾ ಲಾಭವಾಗುದಿಲ್ಲ. ಯಾವ ಸಿನಿಮಾವನ್ನು ನೋಡಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರು ಮಾಡುತ್ತಾರೆ. ಇದಲ್ಲದೆ ನಮಗೆ ಅಭಿಪ್ರಾಯವನ್ನು ಹೇಳುವ ಸ್ವಾತಂತ್ಯವಿದೆ” ಎಂದು ಮಮ್ಮುಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Kollywood: ಅನಾರೋಗ್ಯ: ಹಿರಿಯ ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ
“ಸಿನಿಮಾ ನೋಡಿದ ಬಳಿಕ ಅಭಿಪ್ರಾಯಗಳು ನಮ್ಮದೇ ಆಗಿರಬೇಕು ಹೊರತು ಇತರರದ್ದಲ್ಲ. ನಾವು ಇತರರ ಅಭಿಪ್ರಾಯವನ್ನು ಕೇಳಿ ಮುಂದುವರೆದರೆ ಆಗ ನಮ್ಮ ಸ್ವಂತ ಅಭಿಪ್ರಾಯಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ನೋಡಬೇಕು” ಎಂದರು.
ಜಿಯೋ ಬೇಬಿ ನಿರ್ದೇಶನದ ʼಕಾತಲ್-ದಿ ಕೋರ್ʼ ಸಿನಿಮಾದ ಕಥೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆಯುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿ ಮ್ಯಾಥ್ಯೂ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
#Mammootty always has a valid point on anything social or political, here’s about the much controversial “Review Bombing”pic.twitter.com/gvVuOW6nBZ
— ALIM SHAN (@AlimShan_) November 20, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.