Kushtagi: ತೆರವು ಹಂತದಲ್ಲಿದ್ದ ಶಾಲೆಗೆ ತಹಶೀಲ್ದಾರ್‌ ಭೇಟಿ; ತೆರವಿಗೆ ತಾತ್ಕಾಲಿಕ ಬ್ರೇಕ್


Team Udayavani, Nov 21, 2023, 3:34 PM IST

10-kushtagi

ಕುಷ್ಟಗಿ: ಗದಗ-ವಾಡಿ ರೈಲು ಮಾರ್ಗದ ಉದ್ದೇಶಿತ ರೈಲ್ವೇ ಸ್ಟೇಷನ್ ನಿರ್ಮಾಣದ ಹಿನ್ನೆಲೆ ತೆರವು ಹಂತದಲ್ಲಿದ್ದ ಸಂತ ಶಿಶುನಾಳ‌ ಶರೀಪ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ‌ ಶಾಲಾ ಕಟ್ಟಡಕ್ಕೆ ತಹಶೀಲ್ದಾರೆ ಶ್ರುತಿ‌ ಮಳ್ಳಪ್ಪಗೌಡ್ರು ಅವರ ಮಧ್ಯಪ್ರವೇಶದಿಂದ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ಹಂತದಲ್ಲಿ ಕುಷ್ಟಗಿ ಪಟ್ಟಣದ ಹೊರವಲಯದ ಸಂತ ಶಿಶುನಾಳ ಶರೀಫ ನಗರದಲ್ಲಿ ಅಲೆಮಾರು ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ರೈಲ್ವೇ ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಈ ಹಂತದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 36 ಮನೆಗಳ ತೆರವಿಗೆ ಜಾಗದ ಮಿತಿ ಗುರುತಿಸಿ ಸ್ವಾಧೀನಪಡಿಸಿ ಕೊಂಡಿದ್ದು, ಈಗಾಗಲೇ ಭೂ ಪರಿಹಾರ ನೀಡಿ ರೈಲ್ವೇ ಸ್ಟೇಷನ್ ನಿರ್ಮಾಣ ಕಾರ್ಯ ಕೈಗೆತ್ತಿಗೊಂಡಿದೆ. ಈ ಸ್ಥಿತಿಯಲ್ಲಿ  ಶಾಲಾ ಕಟ್ಟಡಕ್ಕೆ ಪರ್ಯಾಯ ಕ್ರಮ ಕೈಗೊಳ್ಳದೇ ತೆರವಿಗೆ ಮುಂದಾಗಿರುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು.

ಸ್ಥಳೀಯರ ವಿರೋಧವನ್ನೂ ಲೆಕ್ಕಿಸದ ರೈಲ್ವೇ ಇಲಾಖೆ 15 ದಿನಗಳ‌ ಅಂತಿಮ‌ ಗಡವು ನೀಡಿತ್ತು. ಈ ಪರಿಸ್ಥಿತಿಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ  ಮೈಹಿಬೂಬಸಾಬ್ ಮದಾರಿ, ತಹಶೀಲ್ದಾರ ಶ್ರುತಿ ಮಳ್ಳಪ್ಪಗೌಡ್ರು ಅವರ ಗಮನಕ್ಕೆ ತಂದ ಹಿನ್ನೆಲೆ ತಹಶೀಲ್ದಾರ್, ನ.21ರ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೆ ಶಾಲಾ ಕಟ್ಟಡ ತೆರವುಗೊಳಿಸದಂತೆ ರೈಲ್ವೇ ಇಲಾಖೆಗೆ ಸೂಚನೆ ನೀಡಿದರು.

ಈ ಸಂಬಂದ ನಾಳೆ ಅಥವಾ ನಾಡಿದ್ದು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಕಾಮಗಾರಿಯ ಉದ್ದೇಶಿತ ನೀಲನಕ್ಷೆ, ಎಸ್ಟೀಮೇಟ್ ಮಾಹಿತಿಯೊಂದಿಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸೂಚಿಸಿದರು.

ರೈಲ್ವೇ ಸ್ಟೇಷನ್ ನಿರ್ಮಾಣದ ಹಿನ್ನೆಲೆಯಲ್ಲಿ ಭೂಸ್ವಾಧೀನ ಹೊರತು ಪಡಿಸಿದ ಸ್ಥಳದಲ್ಲಿ ತೆರವುಗೊಳಿಸಿದ ಶೌಚಾಲಯ ಕಟ್ಟಡವನ್ನು ನಿರ್ಮಿಸಲು ರೈಲ್ವೇ ಇಲಾಖೆಯ ಇಂಜಿನೀಯರ್ ಅಶೋಕ ಅವರಿಗೆ ಸೂಚಿಸಿದರು.

ಈ ಬೆಳವಣಿಗೆ ಹಿನ್ನೆಲೆ ಶಾಲೆಯ ಕಟ್ಟಡ ತೆರವಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಸ್ಥಳೀಯರಲ್ಲಿ ತಹಶೀಲ್ದಾರ್ ಶ್ರುತಿ‌ ಮಳ್ಳಪ್ಪಗೌಡ್ರು ಮಧ್ಯೆ ಪ್ರವೇಶದಿಂದ ಶಾಲಾ ಕಟ್ಟಡ ತೆರವು ಕಾರ್ಯ ಮುಂದೂಡಿಕೆಯಾಗಿದೆ. ‌

ಎಸ್.ಡಿ.ಎಂ.ಸಿ. ಅಧ್ಯಕ್ಷ ಮೈಬೂಸಾಬ್ ಮದಾರಿ ಪ್ರತಿಕ್ರಿಯಿಸಿ, ಶಾಲಾ ಕಟ್ಟಡವನ್ನು ರೈಲ್ವೇ ಇಲಾಖೆಯವರು ತೆರವುಗೊಳಿಸಿದರೆ ಮಕ್ಕಳ ಭವಿಷ್ಯದ ಶಿಕ್ಷಣ ಚಿಂತೆಯಾಗಿದೆ. ಚಿಂದಿ ಆಯುತ್ತಿದ್ದ, ಭೀಕ್ಷೆ ಬೇಡುತ್ತಿದ್ದ ಮಕ್ಕಳಿಗೆ ಶೈಕ್ಷಣಿಕ ಸಂಸ್ಕಾರ ಸಿಕ್ಕಿದೆ. ಈಗ ಶಾಲಾ ಕಟ್ಟಡ ತೆರವುಗೊಳಿಸುವುದು, ಹೊಸ ಶಾಲಾ ಕಟ್ಟಡ ನಿರ್ಮಿಸಿದ ಮೇಲೆ ಅನಿವಾರ್ಯವಾದರೆ ಮಾತ್ರ ಈ ಶಾಲಾ ಕಟ್ಟಡ ತೆರವುಗೊಳಿಸಬೇಕು ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಮುಖ್ಯ ಶಿಕ್ಷಕಿ ಅಮೃತಾ ಕುಲಕರ್ಣಿ ಇದ್ದರು.

ಟಾಪ್ ನ್ಯೂಸ್

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Tiger-hu

Hunasuru: ಕೂಂಬಿಂಗ್ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರಗಿದ ಹುಲಿ!

ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Tumkur University ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

1-eqwewewqe

Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

MP Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕರ್ನಾಟಕಕ್ಕೆ ಬೇಕಿದೆ ಕೇರಳ ಮಾದರಿ ಶಿಕ್ಷಣ: ಶಾಸಕ ಹಿಟ್ನಾಳ

ಕರ್ನಾಟಕಕ್ಕೆ ಬೇಕಿದೆ ಕೇರಳ ಮಾದರಿ ಶಿಕ್ಷಣ: ಶಾಸಕ ಹಿಟ್ನಾಳ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

1-chess–bg

Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

POlice

Kasaragod: ಹಲ್ಲೆ ಪ್ರಕರಣ: ಕೇಸು ದಾಖಲು

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.