![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 22, 2023, 11:46 PM IST
ಮುಂಬಯಿ: ಶಿವಸೇನೆ ಪಕ್ಷದ ಮೂಲಚಿಹ್ನೆಯು ಉದ್ಧವ್ ಠಾಕ್ರೆ ಬಣಕ್ಕೆ ಸೇರಬೇಕಾಗಿರುವುದು ಎಂಬುದಕ್ಕೆ ಪೂರಕವಾಗುವಂತೆ ಸರಣಿ ಸಾಕ್ಷ್ಯಗಳನ್ನು ಉದ್ಧವ್ ಬಣ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರೆದುರು ಸಲ್ಲಿಕೆ ಮಾಡಿದೆ. ಶಿವಸೇನೆ ಬಂಡಾಯ ಶಾಸಕರ ವಿರುದ್ಧ ಉದ್ಧವ್ ಬಣ ಸಲ್ಲಿಸಿದ್ದ ಅನರ್ಹತೆ ಅರ್ಜಿ ವಿಚಾರಣೆಯು ನ.21ರಂದು ನಡೆದಿದೆ.
ಈ ವೇಳೆ ಉದ್ಧವ್ ಬಣಕ್ಕೆ ಪಕ್ಷದ ಮೂಲ ಚಿಹ್ನೆ ಸೇರಬೇಕು ಎಂಬ ಮನವಿಗೆ ಪೂರಕವಾದ ಪ್ರಮಾಣಪತ್ರ, ಇಮೇಲ್, ಸ್ಕ್ರೀನ್ಶಾಟ್, ವಾಟ್ಸ್ಆ್ಯಪ್ ಚಾಟ್ಸ್, ಫೋಟೋ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಲಾಗಿದೆ.ದಾಖಲೆಯಲ್ಲಿ ಉದ್ಧವ್ ಅವರನ್ನೇ ಪಕ್ಷದ ಮುಖ್ಯಸ್ಥರೆಂದು 2018 ರಿಂದ 2023ರ ಅವಧಿಗೆ ನೇಮಿಸಲಾಗಿದ್ದು, ಈ ಬಗ್ಗೆ ಚುನಾವಣೆ ಆಯೋಗಕ್ಕೂ ತಿಳಿಸಲಾಗಿತ್ತು. ಪಕ್ಷದ ರಚನೆಯಲ್ಲಿ ಪಕ್ಷದ ಮುಖ್ಯಸ್ಥರೆಂಬ ಪದವಿ ಇದೆ ಹೊರತಾಗಿ ಮುಖ್ಯ ನಾಯಕ ಎಂಬ ಪದವಿ ಇಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಆಗಿದ್ದು, ಮೂಲ ಚಿಹ್ನೆ ಅವರ ಬಣಕ್ಕೇ ಸೇರಬೇಕು ಎಂದು ವಾದಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.