Bangalore kambala: ಬೆಂಗಳೂರಿಗೂ ಕಾಲಿಟ್ಟ ಕಂಬಳ


Team Udayavani, Nov 25, 2023, 12:04 PM IST

tdy-9

ಕಂಬಳ ಅಂದರೆ ಗಂಪ+ಕಲ (ಗಂಪ ಕೆಸರು) ಕೆಸರು ಮಣ್ಣಿನಿಂದ ಕೂಡಿದ ವಿಶಾಲವಾದ ಭತ್ತ ಬೆಳೆಯುವ ಗದ್ದೆ. ಅತಿ ಸಣ್ಣ, ಸಾಮಾನ್ಯ ರೈತನ ಎರಡು ಎಕರೆ ವಿಶಾಲವಾದ ಭತ್ತ ಬೆಳೆಯುವ ಗದ್ದೆ ಯಾದರೆ ಗುತ್ತ, ಬರ್ಕೆ, ಬಾವ, ಸೀಮೆ ಹೀಗೆ ಅಂತಸ್ತಿಗನುಗುಣವಾಗಿ ಸುಮಾರು 30 ಎಕರೆ ವಿಸ್ತೀರ್ಣದವರೆಗೂ ಕಂಬಳ ಗದ್ದೆಗಳು ನಿರ್ಮಾಣವಾಗಿದೆ. ಇದು ಕಂಬಳ ಗದ್ದೆಗಳ ಮಹತ್ವವನ್ನು ತಿಳಿಸುತ್ತದೆ.

ಶಾಸನಗಳಲ್ಲಿ ಕಂಬಳದ ಉಲ್ಲೇಖ:

ಕಂಬಳ ಗದ್ದೆಯ ನಿರ್ಮಾಣದ ಕುರಿತು “ತಾಳಿಪ್ಪಾಡಿಯ ಶಾಸನ’ ಕಂಬಳ ಗದ್ದೆಯ ಉದ್ದಗಲ (ವಿಸ್ತೀರ್ಣ)ದ ಕುರಿತು ಶೃಂಗೇರಿಯ ಶಾಸನ, ಕಂಬಳ್ಳೋತ್ಸವವನ್ನು ವಿಜೃಂಭಣೆಯಂದ ಆಚರಣೆ ಮಾಡಿದ ಕುರಿತು ಕಲ್ಲು ಮಾಗಣೆಯ ಶಾಸನ, ಕಂಬಳ ಗದ್ದೆಯನ್ನು ನಿರ್ಮಾಣ ಮಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತ ನೀಡಿದ ಸೂರಾಲಿನ ಶಾಸನ, ಹೀಗೆ ಹತ್ತು ಹಲವು ಶಾಸನಗಳು ಕಂಬಳ ಗದ್ದೆಯ ಮಹತ್ವದ ಕುರಿತು ಬೆಳಕು ಚೆಲ್ಲುತ್ತವೆ. ಶತ ಶತಮಾನಗಳ ಇತಿಹಾಸವಿರುವ, ರೈತರ ಬದುಕಿನ ನಿರ್ವಹಣೆಯ ಮೂಲ ಆದಾಯವಾಗಿದ್ದ ಕಂಬಳ ಗದ್ದೆಗಳು, ಕಂಬಳ ಗದ್ದೆಗೆ ಹಾಕಿದ ಗೊಬ್ಬರ ಹಾಗೂ ಕಟ್ಟಿದ ನೀರು ಸಮರ್ಪಕವಾಗಿ ಬಳಕೆಯಾಗುವಂತೆ ಜಲಮಟ್ಟದಲ್ಲಿ ಕಂಬಳ ಗದ್ದೆಯನ್ನು ಕಾಪಾಡಿಕೊಂಡು ಬರುವುದೇ ಒಂದು ದೊಡ್ಡ ಸಾಹಸ.

ಹತ್ತಾರು ಜನರ, ಕುಟುಂಬಗಳ ಪಾಲ್ಗೊಳ್ಳುವಿಕೆ, ನೂರಾರು ಜತೆ ಕೋಣಗಳ ಪಾಲ್ಗೊಳ್ಳುವಿಕೆಯಿಂದ ಮನುಷ್ಯ ಹಾಗೂ ಪ್ರಾಣಿಗಳ ಅವಿನಾಭಾವ ಸಂಬಂಧಗಳು ಅನಿವಾರ್ಯವಾಗಿತ್ತು ಕೂಡ. ಇಂದಿನಂತೆ ಯಾವುದೇ ಟಿಲ್ಲರ್‌, ಟ್ರಾಕ್ಟರ್‌, ಭತ್ತದ ನಾಟಿಯ, ಭತ್ತದ ಕಟಾವಿನ ಮೊದಲಾದ ಯಾವುದೇ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ ಕೇವಲ ಪರಸ್ಪರ ಕೂಡು ಕೊಳ್ಳುವಿಕೆಯ ಸಹಕಾರ ತತ್ವದ ನೆಲೆಯಲ್ಲಿ ಕೂಡು ಕುಟುಂಬದ ಪದ್ದತಿಯ ಆ ದಿನಗಳ ಬದುಕಿನ ರೀತಿ-ನೀತಿಗಳೇ ಸಾಹಸಮಯ ಬದುಕಿಗೆ ಉತ್ತಮ ನಿದರ್ಶನ.

ಅಂದಿನ ದಿನಗಳಲ್ಲೂ ಓರ್ವ ರೈತನ ಅಂಗಳದಲ್ಲಿರುವ ಭತ್ತದ ತುಪ್ಪೆ (ಕಿರೀಟ) ಆತನ ಹಟ್ಟಿಯಲ್ಲಿರುವ ಜಾನುವಾರುಗಳ ಸಂಖ್ಯೆ ಆತನ ಅಟ್ಟದಲ್ಲಿರುವ ಅಕ್ಕಿಮುಡಿಗಳು ರೈತನಿಗೆ ಅಂತಸ್ತು ಗೌರವಗಳನ್ನು ನೀಡುತ್ತಿದ್ದವು.

ಅಂತಸ್ತು ಬಿಂಬಿಸುವ ಕಂಬಳ: ವಿಶಾಲವಾದ ಕೆಸರು ಮಣ್ಣಿನಿಂದ ಕೂಡಿದ ಕಂಬಳ ಗದ್ದೆಯ ಉಳುಮೆಗೆ ನೂರಾರು ಜತೆ ಕೋಣಗಳು, ಸಾವಿರಾರು ಸಂಖ್ಯೆಯ ಜನಗಳು, ಕಂಬಳ್ಳೋತ್ಸವದಲ್ಲಿ ಪಾಲ್ಗೊಳ್ಳುವ ರೈತಾಪಿ ವರ್ಗದ ಜನಸ್ತೋಮಕ್ಕೆ ಅಂತಸ್ತಿಗನುಗುಣವಾಗಿ ಅತಿಥಿ ಸತ್ಕಾರ, ಹೀಗೆ ಆ ಊರಿನ ಜಾತ್ರೆಯಾಗಿ ಸಂಭ್ರಮಿಸುವ ದಿನಗಳು, ಆನಂದಿಸುವ ಕ್ಷಣಗಳು, ಹೀಗೆ ಉಳುಮೆಯ ಕೊನೆಯಲ್ಲಿ ಭಾಗವಹಿಸಿದ ಕೋಣಗಳ ಓಟಕ್ಕೆ ಸಮರ್ಪಕವಾದವುಗಳನ್ನು ಸಾಲಾಗಿ ನಿಲ್ಲಿಸಿ ಓಡಿಸುವ ಆ ದೃಶ್ಯವೇ ರೋಮಾಂಚನಕಾರಿ. ಅಡ್ಡ-ದಿಡ್ಡಿಯಾಗಿ ಓಡುವ, ಕೆಸರು ಮಣ್ಣಿನಲ್ಲಿ ಬೀಳುವ, ಬಿದ್ದವರು ಎದ್ದು ಮತ್ತೆ ಓಡುವ ಹೀಗೆ ಕೊನೆಯಲ್ಲಿ ಗೆದ್ದವರಿಗೆ ಎಲೆ-ಅಡಿಕೆ, ನಿಂಬೆ ಹಣ್ಣು ಎಳನೀರು ಗೊನೆ ಬಹುಮಾನ ನೀಡುವ ಈ ದೃಶ್ಯಾವಳಿಗಳನ್ನು ಕಣ್‌ ತುಂಬಿಸಿ ಆನಂದಿಸಿಕೊಳ್ಳುವ ಜನಮಾನಸದ ಸಂಭ್ರಮವೇ ಒಂದು ದೊಡ್ಡ ಉತ್ಸವ. ಕಂಬಳ ಆಯೋಜಕರಿಗೆ ಸಲ್ಲುವ ಗೌರವ.

ಭಕ್ತಿ ಪ್ರಧಾನ ದೈವಿಕ ಆಚರಣೆ: ವಿಶಾಲವಾದ ಗದ್ದೆ, ಗದ್ದೆ ಉಳುಮೆಯಿಂದ ಮೊದಲ್ಗೊಂಡು, ಭತ್ತದ ನಾಟಿ, ಅಥವಾ ಬಿತ್ತನೆ ಕೆಲಸ, ಕಟಾವು ಮುಗಿಸಿ ಮನೆಯಂಗಳಕ್ಕೆ ತರುವಲ್ಲಿಗೆ ಮಾನವ ಪ್ರಯತ್ನದೊಂದಿಗೆ ದೈವ-ದೇವರ ಅನುಗ್ರಹವು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಭೂತಾರಾಧನೆ, ನಾಗಾರಾಧನೆ, ನಂಬಿದ ದೇವರಿಗೆ ಪ್ರಾರ್ಥನೆ, ಹರಕೆ ಸಲ್ಲಿಸುವುದು ಅನಿವಾರ್ಯ.

ಕಂಬಳ ಗದ್ದೆಯು ಪಾವಿತ್ರ್ಯತೆಯ ನಿಟ್ಟಿನಲ್ಲಿ ವಿವಿಧ ರೀತಿಯ ಆಚರಣೆ, ಆರಾಧನೆಗಳು, ಕಂಬಳಾಚರಣೆಯ ಅಂಗವಾಗಿ ಈ ಸಾಂಪ್ರದಾಯಿಕ ಕಂಬಳಗಳು “ಭಕ್ತಿ ಪ್ರಧಾನ’ ಕಂಬಳಗಳೆನಿಸಿದವು. ಒಂದು ಕಾಲದಲ್ಲಿ ಇಂತಹ ಸಾಂಪ್ರದಾಯಿಕ ಕಂಬಳಗಳು ಕೇವಲ ಕಂಬಳಾಚರಣೆಗಳು ಮಾತ್ರವಲ್ಲದೆ ಒಂದೊಂದು ತಿಂಗಳ ಜಾತ್ರೆಯಾಗಿ ವಿವಿಧ ಮನರಂಜನೆಗಳೊಂದಿಗೆ ರೈತರ ಕೃಷಿ ಉಪಕರಣಗಳ ಕೊಡು- ಕೊಳ್ಳುವ ವ್ಯವಹಾರ ಕೇಂದ್ರಗಳಾಗಿಯೂ ಪ್ರಸಿದ್ಧಿ ಪಡೆದುದು ಬಹುಮುಖ್ಯವಾದ ಅಂಶ. ಉದಾ: ಮುಲ್ಕಿ ಸೀಮೆಯ ಅರಸು ಕಂಬಳ ಹಾಗೂ ವಂಡಾರು ಬೀಡಿನ ಕಂಬಳಾಚರಣೆಗಳು. ಇಂತಹ ಪ್ರಮುಖ ಕಂಬಳಗಳ ದಿನ ನಿಗದಿಯಾದ ನಂತರ ಕಂಬಳ್ಳೋತ್ಸವ ಮುಗಿಯುವ ವರೆಗೆ ಆ ಊರಿನಲ್ಲಿ ಯಾವುದೇ ಶುಭ ಸಮಾರಂಭಗಳಿಗೆ ಅವಕಾಶವಿರಲಿಲ್ಲವೆನ್ನುವುದು ಕಂಬಳ ಗದ್ದೆಯ ಆಚರಣೆಯ ಪ್ರಾಮುಖ್ಯತೆಗೆ ನೀಡುತ್ತಿದ್ದ ಸಹಕಾರಕ್ಕೆ ಸಾಕ್ಷಿಯಾಗುತ್ತದೆ.

ಕಂಬಳದಲ್ಲೂ ಇದೆ ವೈವಿಧ್ಯ ಪ್ರಾಕಾರಗಳು:

ಇಂದು ನಾವು ಮೂರು ತರದ ಕಂಬಳಗಳನ್ನು ಕಾಣಬಹುದು. 1970ರ ಫೆಬ್ರವರಿ ತಿಂಗಳ ಮೊದಲ ಭಾನುವಾರದಂದು ಕಾರ್ಕಳ ತಾಲೂಕಿನ ಬಜಗೋಳಿ ಪೇಟೆಯಲ್ಲಿ “ಲವ-ಕುಶ’ ಜೋಡುಕೆರೆಯ ಕಂಬಳವು ಪ್ರಾರಂಭಿಸಲ್ಪಟ್ಟು ನೇಗಿಲು, ಹಗ್ಗ, ಅಡ್ಡ ಹಲಗೆ ಮತ್ತು ಕಣೆ ಹಲಗೆಗಳೆಂಬ ನಾಲ್ಕು ವಿಭಾಗಗಳನ್ನು ಒಳಗೊಂಡ ಆಧುನಿಕ ಕಂಬಳ ಪ್ರಾರಂಭಿಸಲ್ಪಟ್ಟಿತು.

ಹಳೆಯ ಸಂಪ್ರದಾಯದೊಂದಿಗೆ ಭಕ್ತ ಪ್ರಧಾನವಾಗಿ ಆಚರಣೆ ಹಾಗೂ ಆರಾಧನೆಯನ್ನು ಒಳಗೊಂಡ “ಭಕ್ತಿ ಪ್ರಧಾನವಾದ ಕಂಬಳ. ಭಕ್ತಿ ಮತ್ತು ಶಕ್ತಿ ಪ್ರಧಾನವಾದ ಆಧುನಿಕ ಕಂಬಳಗಳು. ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು, ಆಧುನಿಕತೆಯ ಸ್ಪರ್ಶಗಳೊಂದಿಗೆ ಆಚರಿಸಲ್ಪಡುವ “ಹಳೆ ಬೇರು ಹೊಸ ಚಿಗುರು’ ಅನ್ನುವ ಕಂಬಳ ಹೀಗೆ ಕಂಬಳದಲ್ಲಿ ಕ್ರಮೇಣ ಕೋಣಗಳ ಸ್ಪರ್ಧೆಯೇ ಮುಖ್ಯವಾಗಿ ಆಧುನಿಕ ಸೌಕರ್ಯಗಳೊಂದಿಗೆ ಜನಾಕರ್ಷಣೆಗೆ ಕಾರಣವಾಯಿತು. ನವಂಬರದ ಸಂಕ್ರಮಣದಿಂದ ಡಿಸೆಂಬರ್‌ ತಿಂಗಳ ಸಂಕ್ರಮಣದ ಮಧ್ಯೆ ಹೆಚ್ಚಿನಲ್ಲಿ ಸಾಂಪ್ರದಾಯಿಕ ಕಂಬಳಗಳು ನೆರವೇರಿದರೆ ನವಂಬರ್‌ ತಿಂಗಳ ಮೊದಲ ವಾರದಿಂದ ಮಾರ್ಚ್‌ ತಿಂಗಳ ಕೊನೆಯವರೆಗೆ ಆಧುನಿಕ ಕಂಬಳಗಳು ಸಂಘಟಿಸಲ್ಪಡುತ್ತವೆ.

ಅವಶ್ಯಕತೆಗಳಿಗನುಗುಣವಾಗಿ ನೂತನ ಪ್ರಯೋಗಗಳು ಪೆಟ್ರೋಮ್ಯಾಕ್ಸ್‌, ಟ್ಯೂಬ್‌ ಲೈಟ್‌, ಫ್ಲಡ್‌ ಲೈಟ್‌, ವಿಡಿಯೋ ಫಿನಿಶರ್‌ ಲೇಸರ್‌ ಬೀಮ್‌ ಸಮಯ (Timinigs) ಸಹಿತ ಕಂಬಳದಲ್ಲಿ ಪಾರದರ್ಶಕತೆಗೆ ಕಾರಣವಾದವು. ಕಂಬಳ ಕ್ಷೇತ್ರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಮಂದಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ.

ಕಾನೂನು ಅಡೆತಡೆಗಳನ್ನು ದಾಟಿದ ಕ್ರೀಡೆ:

ಕಂಬಳ ಕ್ಷೇತ್ರ ಅನೇಕ ಏಳು-ಬೀಳುಗಳನ್ನು ಅಗ್ನಿಪರೀಕ್ಷೆಯನ್ನು ಕಾನೂನಿನ ಹೋರಾಟವನ್ನು ಎದುರಿಸಬೇಕಾಯಿತು. ಕಂಬಳ ಉಳಿಸುವುದಕ್ಕಾಗಿ ಒಂದೆಡೆ ಕಾನೂನಿನ ಹೋರಾಟವಾದರೆ ಮತ್ತೂಂದೆಡೆ ಸಂಘಟಿತವಾದ ಅಹಿಂಸಾತ್ಮಕ ಪ್ರತಿಭಟನೆ. ಸುಮಾರು 150ಕ್ಕೂ ಮಿಕ್ಕಿ ಜತೆ ಕೋಣಗಳೊಂದಿಗೆ 25 ಸಾವಿರಕ್ಕೂ ಹೆಚ್ಚು ಕಂಬಳ ಪ್ರೇಮಿಗಳು ನಡೆಸಿದ ಪ್ರತಿಭಟನಾ ಹೋರಾಟ ಇಂದಿಗೂ ಮರೆಯಲಾರದ ಘಟನೆಯಾಗಿದೆ. ಯಾವುದೇ ಜಾತಿ-ಮತವಿಲ್ಲದ, ಶ್ರೀಮಂತರು-ಬಡವರು ಎನ್ನುವ ತಾರತಮ್ಯವಿಲ್ಲದೆ ಕುಟುಂಬ ಸಹತವಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವ, ಒಂದೇ ಒಂದು ಹಿಂಸಾತ್ಮಕವಾದ ಘಟನೆಗೆ ಅವಕಾಶವಿಲ್ಲದಂತೆ ಸಂಘಟಿಸಲ್ಪಡುವ ಜಾನಪದ ಕ್ರೀಡೆ ಕಂಬಳ ಮಾತ್ರ. ಜನಪ್ರತಿನಿಧಿಗಳು, ಪಕ್ಷಬೇಧವಿಲ್ಲದೆ ಎಲ್ಲರೂ ಒಮ್ಮತದಿಂದ ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆಯಲ್ಲಿಯೂ ಒಮ್ಮತದ ನಿರ್ಣಯ ಮೂಲಕ ಕಂಬಳ ಉಳಿಸಲು ನೀಡಿದ ಸಹಕಾರ ಅವಿಸ್ಮರಣೀಯ.

ಕಂಬಳ ಒಗ್ಗಟ್ಟಿನ ಹೋರಾಟದ ಕುರಿತು ಪತ್ರಿಕೆಯೊಂದು ಬರೆದ “ಕಂಬಳದಲ್ಲಿರುವ ಒಗ್ಗಟ್ಟು ನೇತ್ರಾವತಿ ತಿರುವು ಯೋಜನೆಯಲ್ಲಿರುತ್ತಿದ್ದರೆ, ಯಾವತ್ತೋ ಯಶಸ್ಸು ದೊರಕುತ್ತಿತ್ತು’ ಅನ್ನುವ ಮಾತು ಕಂಬಳ ಉಳಿವಿಗಾಗಿ ನಡೆಸಿದ ಹೋರಾಟಕ್ಕೆ ನೀಡಿದ ಪ್ರಶಸ್ತಿ ಪತ್ರದಂತಿತ್ತು.

ಕಂಬಳದಲ್ಲೂ ದಾಖಲೆ:

ಕಂಬಳದಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ ತರಬೇತಿ ಸಂಸ್ಥೆ ಇದು. ಈ ಸಂಸ್ಥೆಯ ಮೊದಲ ತಂಡದಲ್ಲಿ ತರಬೇತಿ ಪಡೆದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಕಕ್ಯೆ ಪದವು ಕಂಬಳದಲ್ಲಿ ಮಿಜಾರು ಪ್ರಸಾದ್‌ ನಿಲಯ ಶ್ರೀ ಶಕ್ತಿ ಪ್ರಸಾದ್‌ ಶೆಟ್ಟರ ಕೋಣಗಳನ್ನು ಓಡಿಸಿ 100 ಮೀಟರ್‌ ಓಟವನ್ನು 8.78 ಸೆಕೆಂಡ್‌ಗಳಲ್ಲಿ ಓಡಿಸಿ ಜಾಗತಿಕ ದಾಖಲೆ ನಿರ್ಮಿಸಿದುದು ಕಂಬಳ ಬಗ್ಗೆ ಜಗತ್ತೇ ಗುರುತಿಸುವಂತೆ ಮಾಡಿದೆ.

ಪ್ರಶಸ್ತಿಯ ಹಿರಿಮೆ, ಸರ್ಕಾರದ ಪ್ರೋತ್ಸಾಹ:

ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಕಂಬಳಕ್ಕೆ ಮೊದಲ “ರಾಜ್ಯೋತ್ಸವ ಪ್ರಶಸ್ತಿ’ ನಂತರದಲ್ಲಿ ಮೂಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರಿಗೆ ನೀಡಿದ ಪ್ರಶಸ್ತಿಗಳು ಕಂಬಳ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. 1994ರಲ್ಲಿ ಬಜಗೋಳಿ ಕಂಬಳದ ಮುಖ್ಯಸ್ಥರಾದ ಮೂಡುಕೋಡಿ ಗುಣಪಾಲ ಜೈನಿವರಿಗೆ ಮತ್ತು ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಕೆ. ಗುಣಪಾಲ ಕಡಂಬರಿಗೆ ಕಂಬಳ ಸಂರಕ್ಷಣ ಮತ್ತು ನಿರ್ವಹಣೆಗಾಗಿ “ಕರ್ನಾಟಕ ರಾಜ್ಯ ದಸರಾ ಪ್ರಶಸ್ತಿ’ ನೀಡಿ ಕರ್ನಾಟಕ ಸರ್ಕಾರ ಪ್ರೋತ್ಸಾಹಿಸಿದ್ದು ಒಂದು ಇತಿಹಾಸ. ಬೆಳ್ತಂಗಡಿಯ ಶಾಸಕ ಗಂಗಾಧರ ಗೌಡರು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಓಟಗಾರರಿಗ ಮಾಸಾಶನ ನೀಡಿದ್ದು, ಕೆ. ಅಭಯಚಂದ್ರ ಜೈನ್‌ ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಕಂಬಳ ಓಟಗಾರರು ಹಾಗೂ ಪ್ರೋತ್ಸಾಹಕರಿಗೆ “ಕ್ರೀಡಾರತ್ನ ಪ್ರಶಸ್ತಿ’ ಪಾರಂಭಿಸಿದ್ದು ಕಂಬಳಕ್ಕೆ ದೊರಕಿದ ದೊಡ್ಡ ಯಶಸ್ಸು. ಬಜಗೋಳಿಯ ಕಂಬಳದ 25 ವರ್ಷದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಘೋಷಿಸಿದ ಒಂದು ಲಕ್ಷ ರೂ ಪ್ರೋತ್ಸಾಹ ಧನ 2012ರ ಕರ್ನಾಟಕ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಡಿ. ವಿ. ಸದಾನಂದ ಗೌಡ ಕಂಬಳ ಸಂಘಟಕರಿಗಾಗಿ 1 ಕೋಟಿ ಅನುದಾನ ನೀಡಿದ್ದು ಕಂಬಳ ಕ್ಷೇತ್ರಕ್ಕೆ ಸರ್ಕಾರದ ಕಡೆಯಿಂದ ಒಂದಷ್ಟು ಆರ್ಥಿಕ ಬಲ ತಂದಿತು. ಕಾರ್ಕಳದ ಮಿಯ್ನಾರಿನಲ್ಲಿ ಮೂಲಭೂತ ಸೌಕರ್ಯ, ಲವ-ಕುಶ ಶಾಶ್ವತ ಕಂಬಳ ಕ್ರೀಡಾಂಗಣ, ಮೂಡುಬಿದಿರೆಯ ಕೋಟಿ ಚೆನ್ನಯ್ಯ ಕ್ರೀಡಾಂಗಣಗಳು ನಿರಂತರವಾಗಿ ಕಂಬಳ ತರಬೇತಿಗೆ ಪೂರಕವಾಗಿ ಬಳಕೆಯಾಗುತ್ತಿದೆ.

ರಾಜಧಾನಿಯಲ್ಲಿ ಕಂಬಳ:

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೋಡುಕೆರೆ ನಿರ್ಮಾಣ ಮಾಡಿ ಕಂಬಳವನ್ನು ಅಂತಾರಾಷ್ಟ್ರೀಯವಾಗಿ ಪರಿಚಯಿಸುವ ಪ್ರಯತ್ನ ಇದೇ ನವೆಂಬರ್‌ ತಿಂಗಳ 25-26ರಂದು ಅದ್ಧೂರಿಯಾಗಿ ನಡೆಯುತ್ತಿದೆ. ಪ್ರಾಣಿ ದಯಾ ಸಂಘದವರ ತೀವ್ರ ವಿರೋಧದ ನಡುವೆಯೂ, ಈ ದೇಶದ ಸವೋಚ್ಚ ನ್ಯಾಯಾಲಯ ಸಂವಿಧಾನ ಪೀಠವು ಹಲವು ನಿಬಂಧನೆಗಳೊಂದಿಗೆ, ಅಹಿಂಸಾತ್ಮಕವಾಗಿ ಸಂಘಟಿಸಲು ಅನುವು ಮಾಡಿಕೊಟ್ಟಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಕಂಬಳ ಇಷ್ಟೆಲ್ಲ ಬೆಳೆಯುವುದಕ್ಕೆ ಕಂಬಳ ವ್ಯವಸ್ಥಾಪಕರ, ಓಡುವ ಕೋಣಗಳ ಯಜಮಾನರ ತುಂಬು ಹೃದಯದ ಸಹಕಾರ, ಮಾಧ್ಯಮ ಮಿತ್ರರ ಸಕಾಲಿಕ ನೆರವು ಮತ್ತು ಪ್ರಚಾರ, ಕಂಬಳಾಭಿಮಾನಿ ಬಂಧುಗಳ ಸಹಕಾರ ಬಹುಮುಖ್ಯವಾದುದು. ಇದರೊಂದಿಗೆ ಇನ್ನು ತೆರೆ ಕಾಣಲಿರುವ “ವೀರ ಕಂಬಳ’, ಈಗಾಗಲೇ ತೆರೆಕಂಡು ಕಂಬಳದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ “ಕಾಂತಾರ’ ಚಿತ್ರಗಳೂ ಅಭಿನಂದನಾರ್ಹ.

ಒಟ್ಟಿನಲ್ಲಿ ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯಾಗದೆ ಕರಾವಳಿ ರೈತರ ಬದುಕಿನ ಸಾಂಸ್ಕೃತಿಕ ನೆಲೆಕಟ್ಟಿನ ಸಂರಕ್ಷಣೆಯ ತಾಯಿ ಬೇರಾಗಿ, ಹತ್ತು ಹಲವು ಆಚರಣೆ, ಆರಾಧನೆ ಮತ್ತು ನಂಬಿಕೆಗಳಿಗೆ ಪೂರಕ ಹಾಗೂ ಪ್ರೇರಕ ಶಕ್ತಿಯಾಗಿದೆ. ನಮ್ಮ ಕರಾವಳಿಯ ಈ ಹೆಮ್ಮೆಯ ಜಾನಪದ ಕ್ರೀಡೆಯಾಗಿ ಇಂದು ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ “ಕಂಬಳ’ವನ್ನು ಉಳಿಸಿ, ಬೆಳೆಸಲು ಶ್ರಮಿಸೋಣ. ಬೆಂಗಳೂರಿನಲ್ಲಿ ನಡೆಯುತ್ತಿರುವ ನಮ್ಮ ಕಂಬಳಕ್ಕೆ ತ್ರಿಕರಣ ಪೂರ್ವಕ ಸಹಕರಿಸೋಣ.

ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ: 2011ರ ಮೇ ತಿಂಗಳಲ್ಲಿ 11 ಜನ ಸಮಾನ ಮನಸ್ಕರು ಜೊತೆಗೊಡಿ ಸ್ಥಾಪಿಸಿದ ಸಂಸ್ಥೆ “ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ)’ ಇದೊಂದು ಇತರರಿಗೆ ಮಾದರಿಯಾಗಿ ಕಂಬಳವನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹೊಸ-ಹೊಸ ಅನ್ವೇಷಣೆ, ಆವಿಷ್ಕಾರಗಳಿಗೆ ಕಾರಣವಾಯಿತು. ಕಳೆದ 6 ವರ್ಷಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಯುವಕರಿಗೆ ವೈಜ್ಞಾನಿಕವಾದ ತರಬೇತಿಯನ್ನು ನೀಡಿದ ಹಿರಿಮೆ ಈ ಸಂಸ್ಥೆಗೆ ಸೇರುತ್ತದೆ. ಈ ಸಂಸ್ಥೆಯ ಚಟುವಟಿಕೆಗಳನ್ನು ಗುರುತಿಸಿದ ರಾಜ್ಯ ಸರ್ಕಾರ 2017ರಲ್ಲಿ “ಕ್ರೀಡಾ ಪೋಷಕ ಪ್ರಶಸ್ತಿ’ಯನ್ನು 5 ಲಕ್ಷ ರೂಪಾಯಿಯ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಿದೆ.

ಕೆ. ಗುಣಪಾಲ ಕಡಂಬ,ಕಂಬಳ ಅಕಾಡೆಮಿಯ ಸಂಚಾಲಕ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ, ಪ್ರಧಾನ ತೀರ್ಪುಗಾರ ಕಂಬಳ ಅಕಾಡೆಮಿ.

ಟಾಪ್ ನ್ಯೂಸ್

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

1-tej

RJD; ಶಿವಲಿಂಗ ತಬ್ಬಿದ‌ ತೇಜ್‌ಪ್ರತಾಪ್‌: ವೀಡಿಯೋ ವೈರಲ್‌

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

Parameshwar

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Naveen Patnaik

BJD; ಚುನಾವಣೆ ಸೋಲು:ಒಡಿಶಾ ಘಟಕ ಪುನಾರಚನೆ

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

supreem

Supreme Court; ದಿವ್ಯಾಂಗರ ಅವಹೇಳನ ತಡೆಗೆ ಮಾರ್ಗಸೂಚಿ

suicide (2)

Puri ಜಗನ್ನಾಥ ರಥಯಾತ್ರೆ ವೇಳೆ ನೂಕುನುಗ್ಗಲು: ಸಾವು 2ಕ್ಕೇರಿಕೆ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.