Tunnel ಕಾರ್ಮಿಕರು ಯಾವಾಗ ಹೊರ ಬರುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ
ದೊಡ್ಡ ಅಡಚಣೆ ನಂತರ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿಕೆ
Team Udayavani, Nov 25, 2023, 4:57 PM IST
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ವಿಳಂಬವಾಗುತ್ತಿದ್ದು ಡ್ರಿಲ್ಲಿಂಗ್ ಯಂತ್ರ ಆಗರ್ ಯಂತ್ರವು ದುರಸ್ತಿಗೀಡಾಗಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.
ರಕ್ಷಣ ಕಾರ್ಯಾಚರಣೆಯ ಕುರಿತು, ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಪ್ರತಿಕ್ರಿಯೆ ನೀಡಿದ್ದು “ಸ್ವಲ್ಪ ಸಮಯ ಬೇಕಾಗಬಹುದು. 41 ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಸೇರುತ್ತಾರೆ.ಆದರೆ ಯಾವಾಗ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಪ್ರಕಾರ ನಾವು ಆತುರಪಡಬಾರದು. ನಾವು ಅತ್ಯಂತ ಮುಖ್ಯವಾದ ವಿಷಯವನ್ನು ಪರಿಗಣಿಸಬೇಕು. ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಸೇರುತ್ತಾರೆ.ಅವರು ಕ್ರಿಸ್ಮಸ್ ಸಮಯದಲ್ಲಿ ಮನೆಗೆ ಬರುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದಿದ್ದಾರೆ.
#WATCH | On Silkyara tunnel rescue operation, International Tunneling Expert, Arnold Dix says, “It means some time from now until one month and 41 men will be home safe. I just don’t know exactly when. I mean that we should not rush. We should just consider the most important… pic.twitter.com/XOdxWJVX5J
— ANI (@ANI) November 25, 2023
”ಆರಂಭದಲ್ಲಿ, ಇದು ತ್ವರಿತವಾಗಿ ಆಗುತ್ತದೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ, ಅದು ಸುಲಭವಾಗುತ್ತದೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ, ನಾಳೆ ಎಂದು ನಾನು ಎಂದಿಗೂ ಹೇಳಲಿಲ್ಲ, ಅದು ಇಂದು ರಾತ್ರಿ ಎಂದೂ ನಾನು ಎಂದಿಗೂ ಹೇಳಲಿಲ್ಲ, ಆದರೆ ಅವರು ಸುರಕ್ಷಿತವಾಗಿರುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.
ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು ಲಂಬವಾಗಿ ಕೊರೆಯಲು ತಯಾರಿ ಆರಂಭಿಸಿವೆ. ಕೊರೆಯಲು ಬಳಸಬೇಕಾದ ಯಂತ್ರವನ್ನು ಸಂಪೂರ್ಣವಾಗಿ ಸಿದ್ಧವಾಗಿಡಲಾಗಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಲಂಬವಾಗಿ ಕೊರೆಯುವ ಸ್ಥಳವನ್ನು ತಲುಪಲು ಈಗಾಗಲೇ ರಸ್ತೆಯನ್ನು ಸಿದ್ಧಪಡಿಸಿದೆ ಮತ್ತು ವೇದಿಕೆಯನ್ನು ಬಲಪಡಿಸಲು ಸರಕುಗಳನ್ನು ಶೀಘ್ರದಲ್ಲೇ ಸಾಗಿಸಲಾಗುತ್ತದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್ ಬುಲ್ ಶ್ವಾನದ ಕಿತ್ತ ಕಿವಿ ಜೋಡಣೆ
Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!
Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!
Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ
ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್ ನಿಧಿ ವರ್ಗಾವಣೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ
Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ
Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್ ಬುಲ್ ಶ್ವಾನದ ಕಿತ್ತ ಕಿವಿ ಜೋಡಣೆ
Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Chikkamagaluru: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.