Tunnel: ಅಪಾಯಕಾರಿ “ಬಿಲ”ಗಳ ಕಥೆ- ರ‍್ಯಾಟ್‌-ಹೋಲ್‌ ಮೈನಿಂಗ್‌ ಎಂಬ ಡೆಡ್ಲಿ ಟ್ರ್ಯಾಪ್‌


Team Udayavani, Nov 28, 2023, 9:40 PM IST

rat hole mining

ಅಸುರಕ್ಷಿತ ಎಂಬ ಕಾರಣಕ್ಕೆ ದೇಶದಲ್ಲಿ ಬ್ಯಾನ್‌ ಆಗಿದ್ದ ಗಣಿಗಾರಿಕೆಯ ವಿಧಾನವೊಂದು ಈಗ ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಮೆರಿಕದಿಂದ ತರಿಸಲಾದ ಆಗರ್‌ ಮಷೀನ್‌ ಸೇರಿದಂತೆ ಹೈಟೆಕ್‌ ಯಂತ್ರಗಳು ಕೈಕೊಟ್ಟಾಗ ನೆರವಿಗೆ ಬಂದಿದ್ದೇ ಈ ರ‍್ಯಾಟ್‌-ಹೋಲ್‌ ಮೈನಿಂಗ್‌. ಏನಿದು ವಿಧಾನ? ಇದಕ್ಕೆ ನಿಷೇಧ ಹೇರಿದ್ದೇಕೆ ಎಂಬ ಮಾಹಿತಿ ಇಲ್ಲಿದೆ.

ಏನಿದು ರ‍್ಯಾಟ್‌ ಹೋಲ್‌ ಮೈನಿಂಗ್‌?
ಪುಟ್ಟ ಪುಟ್ಟ ಗುಂಡಿಗಳನ್ನು ಅಂದರೆ 4 ಅಡಿಗಿಂತಲೂ ಕಡಿಮೆ ಅಗಲದ ಹೊಂಡಗಳನ್ನು ಅಗೆದು, ಭೂಮಿಯ ಆಳಕ್ಕಿಳಿದು ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನವಿದು. ಕೈಯ್ಯಲ್ಲೇ ಒಬ್ಬ ವ್ಯಕ್ತಿಗಷ್ಟೇ ಹೋಗಿ-ಬರಲು ಸಾಧ್ಯವಾಗುವಂಥ ಕಿರಿದಾದ ಗುಂಡಿಗಳನ್ನು ಅಗೆಯುವವರನ್ನು ರ‍್ಯಾಟ್‌-ಹೋಲ್‌ ಮೈನರ್ಸ್‌ ಎಂದು ಕರೆಯುತ್ತಾರೆ. ಗುಂಡಿ ಅಗೆದ ಬಳಿಕ ದಪ್ಪ ಹಗ್ಗ ಮತ್ತು ಬಿದಿರಿನ ಏಣಿಗಳ ಮೂಲಕ ಕಾರ್ಮಿಕನು ಗುಂಡಿಯೊಳಕ್ಕೆ ಇಳಿಯುತ್ತಾನೆ. ಕಲ್ಲಿದ್ದಲಿನ ಪದರವು ಸಿಕ್ಕಿದೊಡನೆ, ಅದನ್ನು ಹೊರತೆಗೆಯುವ ಕೆಲಸ ನಡೆಯುತ್ತದೆ. ಈ ಗುಂಡಿಗಳು ಕೆಲವೊಮ್ಮೆ 100ರಿಂದ 400 ಅಡಿ ಆಳವೂ ಇರುತ್ತದೆ.

ಅತ್ಯಂತ ಅಪಾಯಕಾರಿ
ಈ ವಿಧಾನವು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ, ಈ ಕಿರಿದಾದ ಗುಂಡಿಗೆ ಒಮ್ಮೆಗೆ ಒಬ್ಬ ಕಾರ್ಮಿಕನಷ್ಟೇ ಇಳಿಯಲು ಸಾಧ್ಯ. ಒಳಕ್ಕೆ ಹೋದ ಆತ ಹಲವು ಪ್ರಕರಣಗಳಲ್ಲಿ ಉಸಿರಾಟದ ತೊಂದರೆ, ಆಮ್ಲಜನಕದ ಕೊರತೆ ಮತ್ತು ಹಸಿವಿನಿಂದ ಮೃತಪಟ್ಟ ಉದಾಹರಣೆಗಳಿವೆ.

ಹಲವು ದುರಂತಗಳು
ಇದೊಂದು ಅವೈಜ್ಞಾನಿಕ ವಿಧಾನ ಎಂಬ ಕಾರಣಕ್ಕಾಗಿ 2014ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರ‍್ಯಾಟ್‌-ಹೋಲ್‌ ಮೈನಿಂಗ್‌ಗೆ ನಿಷೇಧ ಹೇರಿತ್ತು. ಆದರೂ, ಮೇಘಾಲಯ, ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಈಗಲೂ ಈ ವಿಧಾನ ಚಾಲ್ತಿಯಲ್ಲಿದೆ. 2018ರಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 15 ಮಂದಿ ಗಣಿಯೊಳಗೆ ಪ್ರವಾಹದ ನೀರು ತುಂಬಿದ ಕಾರಣ, ಒಳಗೆ ಸಿಲುಕಿಕೊಂಡಿದ್ದರು. 2 ತಿಂಗಳಿಗೂ ಅಧಿಕ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕೊನೆಗೂ 2 ಮೃತದೇಹಗಳಷ್ಟೇ ಹೊರತೆಗೆಯಲು ಸಾಧ್ಯವಾಯಿತು. 2021ರಲ್ಲೂ 5 ಕಾರ್ಮಿಕರು ಸಿಲುಕಿಕೊಂಡು, ಆ ಪೈಕಿ 3 ಮೃತದೇಹಗಳಷ್ಟೇ ಸಿಕ್ಕಿದವು.

ನಿಷೇಧವಾಗಿದ್ದೇಕೆ?
ಇಲಿ ಬಿಲದ ಮಾದರಿಯ ಗುಂಡಿಗಳಲ್ಲಿ ಸಮರ್ಪಕ ಗಾಳಿ-ಬೆಳಕಿನ ವ್ಯವಸ್ಥೆ ಇರುವುದಿಲ್ಲ, ಕಾರ್ಮಿಕರು ಕೂಡ ಜೀವರಕ್ಷಕ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಪರಿಣಾಮ, ಕಾರ್ಮಿಕರ ಪ್ರಾಣಹಾನಿ, ದುರಂತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜತೆಗೆ, ಭೂಮಿಗೆ ಹಾನಿ, ಅರಣ್ಯ ನಾಶ ಮತ್ತು ಜಲಮಾಲಿನ್ಯಕ್ಕೂ ಇದು ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2014ರಲ್ಲಿ ರ‍್ಯಾಟ್‌ ಹೋಲ್‌ ಮೈನಿಂಗ್‌ಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

ರ‍್ಯಾಟ್‌-ಹೋಲ್‌ ಮೈನಿಂಗ್‌ ನಿಷೇಧಗೊಂಡಿದ್ದು ಯಾವಾಗ?- 2014
ಈ ವಿಧಾನದಲ್ಲಿ ಗುಂಡಿಗಳು ಎಷ್ಟು ಅಗಲವಿರುತ್ತವೆ? – ಗರಿಷ್ಠ 4 ಅಡಿ
ಗುಂಡಿಗಳ ಆಳ ಎಷ್ಟಿರುತ್ತವೆ? – 100ರಿಂದ 400 ಅಡಿ

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.