Daily Horoscope: ಕುಗ್ಗದ ಉತ್ಸಾಹದಿಂದ ಕಾರ್ಯನಿರ್ವಹಣೆ, ಸಹೋದ್ಯೋಗಿಗಳಿಂದ ಸಹಕಾರ
Team Udayavani, Nov 29, 2023, 7:17 AM IST
ಮೇಷ: ವಾರದ ನಡುವಿನ ದಿನ ಮಧ್ಯಮ ಫಲಗಳು. ಉದ್ಯೋಗ ಸ್ಥಾನದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಸಹೋದ್ಯೋಗಿಗಳಿಂದ ಒಳ್ಳೆಯ ಸಹಕಾರ. ಉದ್ಯಮದ ಪ್ರಗತಿ ಮಧ್ಯಮ ಗತಿಯಲ್ಲಿ. ಉದ್ಯಮ ವಿಸ್ತರಣೆಗೆ ಬ್ಯಾಂಕ್ ನೆರವು ಕೋರಿಕೆ. ಎಲ್ಲರ ಆರೋಗ್ಯ ಉತ್ತಮ.
ವೃಷಭ: ಉದ್ಯೋಗದಲ್ಲಿ ಗೌರವದ ಸ್ಥಾನಕ್ಕೆ ಚ್ಯುತಿಯಿಲ್ಲ. ಸರಕಾರಿ ನೌಕರರಿಗೆ ಅಧಿಕ ಜವಾಬ್ದಾರಿಗಳು. ವಸ್ತ್ರ, ಯಂತ್ರೋಪಕರಣ ಹಾಗೂ ಗೃಹಸಾಮಗ್ರಿ ಉದ್ಯಮಗಳಲ್ಲಿ ವಿಶೇಷ ಆದಾಯ. ಪಿತ್ರಾರ್ಜಿತ ಕೃಷಿಭೂಮಿ ಅಭಿವೃದ್ಧಿಗೆ ಪ್ರಯತ್ನ.
ಮಿಥುನ: ಕುಗ್ಗದ ಉತ್ಸಾಹದಿಂದ ಕಾರ್ಯ ನಿರ್ವಹಣೆ. ಹಲವು ದಿಕ್ಕುಗಳಿಂದ ಕಾರ್ಯದ ಒತ್ತಡ. ಉದ್ಯೋಗದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಪಾಲು ದಾರಿಕೆಯ ಉದ್ಯಮ ಸುಧಾರಣೆಗೆ ಕ್ರಮ. ಅಧ್ಯಾತ್ಮಿಕ ಚಿಂತನೆ, ದೇವಾಲಯಕ್ಕೆ ಭೇಟಿ, ಆಧ್ಯಾತ್ಮಿಕ ಸಾಧನೆಯ ಕುರಿತು ಚಿಂತನೆ.
ಕರ್ಕಾಟಕ: ಉದ್ಯೋಗದಲ್ಲಿ ಲಭಿಸಿದ ಉನ್ನತ ಸ್ಥಾನದಲ್ಲಿ ಯಶಸ್ವಿ. ಸ್ವಂತ ಉದ್ಯಮದಲ್ಲಿ ಸಹಜ ವಾದ ಪೈಪೋಟಿಗಳ ಯಶಸ್ವೀ ನಿವಾರಣೆ. ಉತ್ಪನ್ನಗಳ ಮತ್ತು ಸೇವೆಗಳ ಗುಣಮಟ್ಟ ಏರಿಕೆ ಪ್ರಯತ್ನ. ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹಕ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು.
ಸಿಂಹ: ಉದ್ಯೋಗ ಸ್ಥಾನದಲ್ಲಿ ಗುರುಸ್ಥಾನ ನಿರ್ವಹಣೆ. ಉದ್ಯಮದ ನೌಕರರ ಸಮಸ್ಯೆ ಪರಿಹಾರ. ಅಭಿವೃದ್ಧಿ ಕ್ರಮಗಳಿಗೆ ಸರಕಾರಿ ಇಲಾಖೆಗಳ ಅನುಕೂಲಕರ ಸ್ಪಂದನ. ಖಾದಿ, ಸ್ವದೇಶಿ ಉದ್ಯಮ ಕ್ಷೇತ್ರಕ್ಕೆ ಪ್ರವೇಶ. ಅವಿವಾಹಿತರಿಗೆ ವಿವಾಹ ಯೋಗ.
ಕನ್ಯಾ: ಕಾರ್ಯದಲ್ಲಿ ಅಧಿಕ ಉತ್ಸಾಹ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ. ಕಾಲಮಿತಿಯಲ್ಲಿ ಕೆಲಸ ಪೂರ್ಣ ಗೊಳಿಸಲು ಒತ್ತಾಯ. ಕಾರ್ಯಕ್ಷೇತ್ರಕ್ಕೆ ಗಣ್ಯರ ಭೇಟಿ. ಸ್ವಂತ ಉದ್ಯಮಕ್ಕೆ ಅನಿರೀಕ್ಷಿತ ನೆರವು. ಹಿರಿಯರ ಆರೋಗ್ಯ ಸುಧಾರಣೆ.
ತುಲಾ: ನಿಶ್ಚಿಂತೆಯಿಂದ ದಿನಚರಿ ಆರಂಭ. ಉದ್ಯೋಗ ಸ್ಥಾನದಲ್ಲಿ ಸಹೋದ್ಯೋಗಿಗಳಿಂದ ಗೌರವ. ಅಧ್ಯಾಪಕರಿಂದ ಮಕ್ಕಳ ಪ್ರತಿಭೆ ವೃದ್ಧಿಗೆ ವಿಶೇಷ ಪ್ರಯತ್ನ. ಕುಶಲಕರ್ಮಿಗಳ ಕೃತಿಗಳಿಗೆ ಅಧಿಕ ಬೇಡಿಕೆ. ಮನೆಯಲ್ಲಿ ದೇವತಾಕಾರ್ಯದಿಂದ ಸಕಾರಾತ್ಮಕ ಸ್ಪಂದನ.
ವೃಶ್ಚಿಕ: ಹಲವು ಬಗೆಯ ಶುಭಫಲಗಳ ಅನುಭವ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸರಕಾರಿ ಅಧಿಕಾರಿಗಳಿಗೆ ಜನಸೇವೆಯಿಂದ ಮನ್ನಣೆ. ಧಾರ್ಮಿಕ ಮೂಲದ ಸೇವಾ ಸಂಸ್ಥೆಗಳಿಂದ ಗೌರವ. ವಸ್ತ್ರ, ಆಭರಣ ಖರೀದಿ ಸಂಭವ. ಎಲ್ಲರ ಆರೋಗ್ಯ ಉತ್ತಮ.
ಧನು: ಮನಃಪೂರ್ವಕ ದುಡಿಮೆಯಿಂದ ಕುಗ್ಗದ ಕಾರ್ಯೋತ್ಸಾಹ. ಉದ್ಯೋಗ ಸ್ಥಾನದಲ್ಲಿ ಹುದ್ದೆಗೆ ಮೀರಿದ ಗೌರವ. ಅನಿರೀಕ್ಷಿತ ನೆರವುಗಳಿಂದ ಉದ್ಯಮ ಅಭಿವೃದ್ಧಿ. ವಸ್ತ್ರ, ಸಿದ್ಧವಸ್ತ್ರ, ಪಾದಕ್ಷೆ, ಶೋಕಿಸಾಮಗ್ರಿ ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ. ಸಮಾಜ ಸೇವಾ ಕಾರ್ಯಗಳತ್ತ ಹೆಚ್ಚಿದ ಆಕರ್ಷಣೆ.
ಮಕರ: ನಿರಾತಂಕ ಸ್ಥಿತಿಯಲ್ಲಿ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯ ಮುಗಿಸುವ ತರಾತುರಿ. ಸಿವಿಲ್ ಎಂಜಿನಿಯರರಿಗೆ ಸರಕಾರಿ ನೌಕರಿಯ ಸಾಧ್ಯತೆ. ಸರಕಾರಿ ಉದ್ಯೋಗಸ್ಥರಿಗೆ ದೂರದ ಊರಿಗೆ ವರ್ಗಾವಣೆ. ಅಪರೂಪದ ಅತಿಥಿಗಳ ಆಗಮನ.
ಕುಂಭ: ಉದ್ಯೋಗ ಸ್ಥಾನದಲ್ಲಿ ಬೆನ್ನಟ್ಟಿ ಬರುವ ಹೆಚ್ಚುವರಿ ಜವಾಬ್ದಾರಿಗಳು. ಸ್ವಂತ ಉದ್ಯಮ ಸ್ಥಿರ ವಾಗಿ ಅಭಿವೃದ್ಧಿ. ವೈವಿಧಿಕರಣದ ಮೊದಲ ಹಂತಕ್ಕೆ ಸಿದ್ಧತೆ. ಕಟ್ಟಡ ನಿರ್ಮಾಣ ಕಾರ್ಯಗಳ ವೇಗ ವರ್ಧನೆ. ಸಿವಿಲ… ಎಂಜಿನಿಯರಿಂಗ್ ವೃತ್ತಿಯವರಿಗೆ ಉನ್ನತ ಹುದ್ದೆ ಸಂಭವ.
ಮೀನ: ಸಪ್ತಾಹದ ಮಧ್ಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವವರ ಸಂಪರ್ಕ. ಉದ್ಯೋಗದಲ್ಲಿ ಹೊಸ ಬಗೆಯ ಜವಾಬ್ದಾರಿಗಳು. ಸಕಾಲಿಕ ಸೇವೆಯಿಂದ ಸಾರ್ವಜನಿಕರ ವಿಶ್ವಾಸ ವೃದ್ಧಿ. ನೂತನ ಆಸ್ತಿ ಖರೀದಿ ಪ್ರಯತ್ನಕ್ಕೆ ಮುನ್ನಡೆ ವಿಷ್ಣು ಕ್ಷೇತ್ರ ಭೇಟಿ ಸಂಭವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಲವಲವಿಕೆ. ಪರಂಪರಾಗತ ವೃತ್ತಿಯತ್ತ ಆಕರ್ಷಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.