![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 29, 2023, 8:21 AM IST
ಬೆಂಗಳೂರು: ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ವಿವಿಧ ಟಾಸ್ಕ್ಗಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ಕೋಟ್ಯಂತರ ರೂ. ವಂಚಿಸುತ್ತಿದ್ದ ತಂಡಕ್ಕೆ ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರ ನೀಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ಅನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ ನಿವಾಸಿ ಸೈಯದ್ ಯೂನಸ್ ಪಾಜಿಲ್(31), ಭಾರತಿನಗರ ನಿವಾಸಿ ಮೊಹಮ್ಮದ್ ಕಲೀಮುಲ್ಲಾ(35), ಕಾವೇರಿ ನಗರ ನಿವಾಸಿ ಸೈಯದ್ ಅರ್ಬಾಜ್(24) ಮತ್ತು ಫ್ರೆಜರ್ ಟೌನ್ ನಿವಾಸಿ ಇಬ್ರಾಹಿಂ ಕರ್ನೂಲ್ (36) ಬಂಧಿತರು. ತಲೆಮರೆಸಿ ಕೊಂಡಿರುವ ಇತರೆ ಮೂವರು ಆರೋಪಿ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದೇ ವೇಳೆ ಆರೋಪಿಗಳ ಸೃಷ್ಟಿಸಿದ 30 ವಿವಿಧ ಖಾತೆಗಳಲ್ಲಿದ್ದ 60 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು ಬಂಧಿತರನ್ನು ದುಬೈ ಮೂಲದ ಆರೋಪಿಗಳು ನಿರ್ವಹಿಸುತ್ತಿದ್ದು, ಅವರು ಸೂಚಿಸಿದ ಮೇರೆಗೆ ಬೆಂಗಳೂರು ಮತ್ತು ಬೆಂ. ಗ್ರಾಮಾಂತರ ವ್ಯಾಪ್ತಿಯಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ 10-20 ಸಾವಿರ ರೂ. ಕೊಟ್ಟು ಅವರ ಆಧಾರ್ ಕಾರ್ಡ್ ಸೇರಿ ಎಲ್ಲ ದಾಖಲೆಗಳನ್ನು ಪಡೆದು ವಿವಿಧ ಬ್ಯಾಂಕ್ಗಳಲ್ಲಿ ಚಾಲ್ತಿ ಖಾತೆಗಳನ್ನು ತೆರೆಯುತ್ತಿದ್ದರು.
ಅದಕ್ಕಾಗಿ ಕೆಲ ಅಂಗಡಿಗಳನ್ನು ಬಾಡಿಗೆಗೆ ತೆಗೆದುಕೊಂಡು ನಕಲಿ ರೆಂಟಲ್ ಆಗ್ರಿಮೆಂಟ್ಗಳನ್ನು ಸೃಷ್ಟಿಸುತ್ತಿದ್ದರು. ಆ ಅಂಗಡಿಗಳಿಗೆ ವಿವಿಧ ಕಂಪನಿಗಳ ಹೆಸರಿಟ್ಟು ಚಾಲ್ತಿ ಖಾತೆಗಳನ್ನು ತೆರೆಯುತ್ತಿದ್ದರು. ಅಲ್ಲದೆ, ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲು ಅವರ ಹೆಸರಿನಲ್ಲಿ ಸಿಮ್ಕಾರ್ಡ್ಗಳು ಖರೀದಿಸಿದ್ದರು.
ಬಳಿಕ ದುಬೈನಲ್ಲಿರುವ ಆರೋಪಿಗಳು ಇನ್ ಸ್ಟ್ರಾಗ್ರಾಂ ಹಾಗೂ ಟೆಲಿಗ್ರಾಂ ಆ್ಯಪ್ಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಪಾರ್ಟ್ ಟೈಂ ಜಾಬ್ ಕೊಡುತ್ತೇವೆ ಎಂದು ಹೇಳಿ ವಿವಿಧ ಟಾಸ್ಕ್ಗಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಲಾಭ ಬರುತ್ತದೆ. ಹಾಗೆಯೇ ವಿವಿಧ ಪ್ರಾಡಕ್ಟ್ಗಳನ್ನು ಖರೀದಿ ಮಾಡಿದರೆ ಲಾಭ ಬರುವುದಾಗಿ ಹೇಳಿ ಬಂಧಿತರು ಸೃಷ್ಟಿಸಿದ ಖಾತೆಗಳಿಗೆ ಹಣ ಹಾಕಿಸಿಕೊಂಡು, ಉದ್ಯೋಗ ಹಾಗೂ ಯಾವುದೇ ವಸ್ತುಗಳನ್ನು ಕೊಡದೆ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ದೇಶದ ವಿವಿಧೆಡೆ 305 ಕೇಸು ದಾಖಲು
ಆರೋಪಿಗಳು ಸೃಷ್ಟಿಸಿದ ಬ್ಯಾಂಕ್ ಖಾತೆಗಳಲ್ಲಿ ದೇಶಾದ್ಯಂತ 40 ಕೋಟಿ ರೂ. ವ್ಯವಹಾರ ನಡೆದಿದೆ. ಈ ಬ್ಯಾಂಕ್ ಖಾತೆಗಳ ವಿರುದ್ಧ ದೇಶದ ವಿವಿದೆಢೆ 305 ಕೇಸ್ಗಳು ದಾಖಲಾಗಿದೆ. ಸದ್ಯ 30 ಖಾತೆಗಳಿಂದ 60 ಲಕ್ಷ ರೂ. ಫ್ರೀಜ್ ಮಾಡಿದ್ದು, ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್ಗಳು, 2 ಬ್ಯಾಂಕ್ ಪಾಸ್ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್ಗಳು, ಬಯೋಮೆಟ್ರಿಕ್ ಸಾಧನ ಹಾಗೂ 2 ಸೀಲ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.