ʼಸಲಾರ್‌ʼನಿಂದ ಮತ್ತೊಂದು ʼಕೆಜಿಎಫ್‌ʼ ನಿರೀಕ್ಷೆ ಬೇಡ.. Salaar ಕಥೆ ರಿವೀಲ್ ಮಾಡಿದ್ರು ನೀಲ್

ಕೆಜಿಎಫ್‌ ಮೊದಲೇ ಸಲಾರ್‌ ಕಥೆ ಬರೆದಿದ್ದೆ..

Team Udayavani, Nov 29, 2023, 12:54 PM IST

ʼಸಲಾರ್‌ʼನಿಂದ ಮತ್ತೊಂದು ʼಕೆಜಿಎಫ್‌ʼ ನಿರೀಕ್ಷೆ ಬೇಡ.. ಸಲಾರ್‌ ಕಥೆ ರಿವೀಲ್ ಮಾಡಿದ್ರು ನೀಲ್

ಹೈದರಾಬಾದ್: ಡಾರ್ಲಿಂಗ್‌ ಪ್ರಭಾಸ್‌ ಅವರ ʼಸಲಾರ್‌ʼ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿಯೇ ಇದೆ. ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದೆ. ಸದ್ಯ ಬಹು ನಿರೀಕ್ಷಿತ ʼಸಲಾರ್‌ʼ ಟ್ರೇಲರ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಕೆಜಿಎಫ್‌ -1,2 ಬಳಿಕ ಪ್ರಶಾಂತ್‌ ನೀಲ್‌ ಅವರ ʼಸಲಾರ್‌ʼ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸಟ್ಟೇರಿದ ದಿನದಿಂದ ನಾನಾ ರೀತಿಯಲ್ಲಿ ಸದ್ದು ಮಾಡಿದೆ. ಅದರಲ್ಲಿ ಹೆಚ್ಚು ಸುದ್ದಿಯಾಗಿದ್ದು ಸಿನಿಮಾ ರಿಮೇಕ್ ಎನ್ನುವ ವಿಚಾರ. ಪ್ರಶಾಂತ್‌ ನೀಲ್‌ ಅವರು ತಮ್ಮ ʼಉಗ್ರಂʼ ಸಿನಿಮಾದ ಕಥೆಯನ್ನೇ ʼಸಲಾರ್‌ʼ ನಲ್ಲಿ ಹೇಳಿದ್ದಾರೆ ಎನ್ನಲಾಗಿತ್ತು.

ಸಿನಿಮಾದ ಕಥೆಯ ಬಗ್ಗೆ ಮೊದಲ ಬಾರಿ ನಿರ್ದೇಶಕ ಪ್ರಶಾಂತ್‌ ನೀಲ್‌ ಮೌನ ಮುರಿದ್ದಾರೆ. ʼಪಿಂಕ್‌ ವಿಲ್ಲಾʼ ಈ ಬಗ್ಗೆ ಎಕ್ಸ್‌ ಕ್ಲೂಸಿವ್‌ ಆಗಿ ಅವರು ಮಾತನಾಡಿದ್ದಾರೆ.

“ಸಲಾರ್‌ “ ಸ್ನೇಹಿರಿಬ್ಬರು ಶತ್ರುಗಳಾಗುವ ಕಥೆಯನ್ನೊಳಗೊಂಡಿರುವ ಸಿನಿಮಾವಾಗಿದೆ. ಸ್ನೇಹವೇ ಸಲಾರ್‌ ನಲ್ಲಿ ಕಾಣುವ ಪ್ರಮುಖ ಭಾವನೆಯಾಗಿದೆ. ʼಸಲಾರ್ʼ ಮೊದಲ ಪಾರ್ಟ್‌ ನಲ್ಲಿ ಅರ್ಧ ಕಥೆಯನ್ನು ಹೇಳುತ್ತೇವೆ. ಇನ್ನರ್ಧ ಕಥೆಯನ್ನು ಎರಡನೇ ಭಾಗದಲ್ಲಿ ಹೇಳುತ್ತೇವೆ. ಡಿಸೆಂಬರ್ 1 ರಂದು ಬಿಡುಗಡೆಯಾಗಲಿರುವ ಸಲಾರ್ ಟ್ರೈಲರ್‌ನಲ್ಲಿ ಪ್ರೇಕ್ಷಕರು ನಾವು ರಚಿಸಿದ ಪ್ರಪಂಚದ ಒಂದು ಝಲಕ್‌ ನ್ನು ನೋಡಲಿದ್ದಾರೆ” ಎಂದು ಹೇಳಿದ್ದಾರೆ.

“ನಾನು ಇಲ್ಲಿಯವರೆಗೆ ಮಾಡಿದ ಎಲ್ಲಾ ಚಿತ್ರಗಳು ಫ್ಯಾಂಟಸಿಯ ಸ್ಪರ್ಶವನ್ನು ಹೊಂದಿವೆ. ಸ್ನೇಹಿತ, ತಾಯಿ ಅಥವಾ ತಂದೆ ಎನ್ನುವಂಥದ್ದು ಜಗತ್ತನ್ನು ಆಕರ್ಷಿಸುವ ಭಾವನೆಗಳಾಗಿವೆ. ನನ್ನ ಪ್ರಕಾರ ಭಾವನೆಗಳಿಲ್ಲದ ಚಿತ್ರವು ಶೋರಿಲ್‌ನಂತೆ ಕಾಣುತ್ತದೆ. ಸಿನಿಮಾದಲ್ಲಿ ಈ ಭಾವನೆಗಳಿದ್ದರೆ ಮಾತ್ರ ಆ್ಯಕ್ಷನ್ ಗಳು ಹೊರಬರಲು ಸಾಧ್ಯ. ನಾನು ಯಾವಾಗಲೂ ಎಮೋಷನಲ್‌ ಕಥೆಗಳನ್ನು ಬರೆಯುತ್ತೇನೆ. ನಂತರದ ಹಂತದಲ್ಲಿ ಇದರಲ್ಲಿ ಆ್ಯಕ್ಷನ್ ಗಳು ಸೇರುತ್ತವೆ. ʼಸಲಾರ್‌ʼ ನಲ್ಲೂ ಹೀಗೆಯೇ ಆಗಿದೆ” ಎಂದು ಹೇಳಿದ್ದಾರೆ.

ʼಸಲಾರ್‌ʼ ಹಾಗೂ ʼಕೆಜಿಎಫ್‌ʼ ಎರಡೂ ಭಿನ್ನವಾಗಿವೆ. ಭಿನ್ನವಾದ ಭಾವ,ಕಥೆಯನ್ನೊಳಗೊಂಡಿದೆ. ʼಸಲಾರ್‌ʼ ಕಥೆ ಹೇಳುವ ರೀತಿ ಭಿನ್ನವಾಗಿದೆ. ಜನ ʼಸಲಾರ್‌ʼ ನಿಂದ ಮತ್ತೊಂದು ʼಕೆಜಿಎಫ್‌ʼ ನಿರೀಕ್ಷೆ ಮಾಡುವುದು ಬೇಡ. ʼಸಲಾರ್‌ʼ ಎನ್ನುವುದೇ ಒಂದು ಬೇರೆ ಜಗತ್ತು.

“ಕೆಜಿಎಫ್ ಎರಡು ಭಾಗವಾಗಿರಲಿಲ್ಲ, ಆದರೆ ಸಲಾರ್ ಆಗಿದೆ. ಕಥೆಯು ತುಂಬಾ ದೊಡ್ಡದಾಗಿದೆ, ಇದು ಸರಿಯಾದ 6 ಗಂಟೆಗಳ ಚಲನಚಿತ್ರವನ್ನು ಮಾಡಬಹುದು. ಎರಡನೇ ಭಾಗಕ್ಕೆ ಸಾಕಷ್ಟು ವಿಷಯವಿದೆ ಮತ್ತು ಸಲಾರ್: ಭಾಗ ಒಂದನ್ನು ವೀಕ್ಷಿಸಿದಾಗ ಪ್ರೇಕ್ಷಕರು ಸಹ ಅದೇ ರೀತಿ ಭಾವಿಸುತ್ತಾರೆ. ಇದೊಂದು ಶುದ್ಧ ಕಥೆ ಆಧಾರಿತ ಚಿತ್ರ. ವಾಸ್ತವವಾಗಿ, ನಾನು ಕೆಜಿಎಫ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲೇ ನಾನು ಸಲಾರ್ ಬರೆದಿದ್ದೆ” ಎಂದು ಹೇಳಿದ್ದಾರೆ.

ಅಂದಹಾಗೆ ಡಿ.1 ರಂದು ʼಸಲಾರ್‌ʼ ಟ್ರೇಲರ್‌ ರಿಲೀಸ್‌ ಆಗಲಿದೆ. ಡಿ.22 ರಂದು ಸಿನಿಮಾ ತೆರೆ ಕಾಣಲಿದೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.