UV Fusion: ಕೊನೆಯ ನಿಲ್ದಾಣ


Team Udayavani, Nov 30, 2023, 7:15 AM IST

8-uv-fusion

ಬಾಳೆಂಬ ಪಯಣದಲ್ಲಿ ಅನುಭವ  ಸಂತೆಗಳೆನ್ನುವ ನಿಲ್ದಾಣ. ನೋವು-ನಲಿವಿನ ಜತೆಗೂಡಿ ಸಂಚರಿಸುವ ಸಂಚಾರಿ. ಇನ್ನು ಏಳುಬೀಳಿನ ತಿರುವಿನ ಹಾದಿ, ಮಾರ್ಗವೇ ತ್ರಾಸ ಎನಿಸೋ ಕಷ್ಟದ ಹಾದಿಯ ಮೂಲಕ  ಪಯಣಿಸ್ಸಿದ್ದೇ ಆದರೆ ಗೆಲುವಿನ ಸೋಪಾನವು ಸಿಗುತ್ತದೆ.

ಈ ಪ್ರಯಾಣದಲ್ಲಿ ಪ್ರತೀ ನಿಲ್ದಾಣದಲ್ಲೂ ಹೊಸ ಹೊಸ ವಿಷಯಗಳು ಪಯಣಿಗನಿಗೆ ಜತೆಯಾಗುವವು. ಕಹಿ  ನೆನಪೆನ್ನುವ ಹೊರೆಯನ್ನು ಅಲ್ಲಿಯೇ ಕೆಳಗಿಳಿಸಿ ಮುಂದಿನ ಹಾದಿಯತ್ತ ಮುನ್ನುಗಬೇಕು. ಯಾಕೆಂದರೆ ಕಹಿ ನೆನಪು,  ಕೆಟ್ಟ ಆಲೋಚನೆ ನಾವಿರುವ ಜಾಗದಲ್ಲೇ ನಮ್ಮ ಮನಸ್ಸನ್ನು ಕಟ್ಟಿ ಬಿಡುತ್ತದೆ. ಅದು ಹೊಸ ತರ ಯೋಚನೆಗಾಗಲಿ, ನವ ವಿಧದ ಯೋಜನೆಗಾಗಲಿ ಅನುವು ಮಾಡಿಕೊಡುವುದಿಲ್ಲ. ಹಾಗಾಗಿ ಅಲ್ಲೇ ಬಿಟ್ಟು ಮುಂದುವರಿದರೆ ಯಾತ್ರಿಕನ ಈ ಯಾತ್ರೆ ಸುಖಕರವಾಗಿರುತ್ತದೆ.

ಈ ಪಯಣ ನಿರಂತರ. ಆದರೆ ಇಲ್ಲಿ ಸಾಧಿಸಿದ ಪಯಣಿಗನೂ, ಸಾಧಿಸದ ಪಯಣಿಗನೂ, ಕೋಟೆ ಕಟ್ಟಿ ಮೆರೆದ ರಾಜನೂ, ಅಲ್ಲಿ ದುಡಿದ ಸೈನಿಕನೂ, ಸಾಮಾನ್ಯರಲ್ಲಿ ಅಸಾಮಾನ್ಯನೂ, ಅಸಾಮಾನ್ಯ ಅಲ್ಲದ ಸಾಮಾನ್ಯನೂ ಎಲ್ಲರೂ ತಲಪುವುದು  ಭೇದ ಭಾವವಿಲ್ಲದ “ಕೊನೆಯ ನಿಲ್ದಾಣ’ಕ್ಕೆ. ಹುಟ್ಟು ಎನ್ನುವುದು ಪಯಣಿಗನ ಆರಂಭದ ನಿಲ್ದಾಣ. ಅಲ್ಲಿಂದ ಶುರುವಾದ ಸಂಚಾರ ಹಲವಾರು ಮೈಲಿಗಲ್ಲುಗಳನ್ನು ದಾಟಿ, ಸಂಬಂಧ ಅನುಬಂಧಗಳ ಲೆಕ್ಕಾಚಾರಗಳ ಆಟ ಮುಗಿಸಿ, ಸಾವೆನ್ನುವ ಕೊನೆಯ ನಿಲ್ದಾಣದತ್ತ ತನ್ನ ಪಯಣ ಶುರುವಾಗಿ ಬಿಡುತ್ತದೆ.

ಹುಟ್ಟು ಸಾವಿನ ನಡುವೆ ಬಾಲ್ಯದ ಸವಿ ನೆನಪಿದೆ, ಮಧ್ಯ ವಯಸ್ಸಿನ ನೋವು ನಲಿವಿನ ವ್ಯಥೆ-ಕಥೆಯಿದೆ, ಮುದಿ ವಯಸ್ಸಿನ ವೃದ್ಧಾಪ್ಯದ ಅನುಭವ. ಇದೆಲ್ಲವೂ ನಮ್ಮ ಸಂಚಾರದಲ್ಲಿನ ಸುಂದರವಾದ  ಏಳು ಬೀಳು, ಸುಖ ದುಃಖ ಇವುಗಳ ಸಮ್ಮಿಶ್ರಣ- ಸಮ್ಮಿಲನ. ನಮ್ಮಯ ಸಂಚಾರದಿ ಕೊಂಡಿಯಂತಿರುವುದು ಈ ಸಂಬಂಧ- ಅನುಬಂಧಗಳೇ.

ಸಾವಿನ ಕೊನೆಯ ನಿಲ್ದಾಣ ಎಲ್ಲರ ಬಾಳಲ್ಲೂ ಗತಿಸಿಯೇ ಗತಿಸುತ್ತದೆ. ಇಲ್ಲಿಂದ ಮುಂದೆ ಸಂಚಾರವು ಮುಂದುವರಿಯದು. ಕೊನೆಯ ನಿಲ್ದಾಣಕ್ಕೆ ತಲುಪುವ ಮೊದಲು ಏನಾದರೂ ಸಾಧಿಸಿ ತೀರುವ ಛಲ ನಮ್ಮಲ್ಲಿರಲಿ.

-ಗಿರೀಶ್‌ ಪಿ.ಎಂ.

ವಿವಿ ಮಂಗಳೂರು

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.