![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 29, 2023, 1:43 PM IST
ಮುಂಬಯಿ: ಸಲ್ಮಾನ್ ಖಾನ್ – ಕತ್ರಿನಾ ಅವರ ʼಟೈಗರ್ -3ʼ ಹಿಟ್ ಬಳಿಕ ಪ್ರೇಕ್ಷಕರು ಅಂಥದ್ದೇ ಸ್ಪೈ ಯೂನಿವರ್ಸ್ ಜರ್ನಿಯ ರೋಚಕ ಕಹಾನಿಯನ್ನೊಳಗೊಂಡಿರುವ ʼವಾರ್ -2ʼ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
ʼವಾರ್-2ʼ ಯಶ್ ರಾಜ್ ಫಿಲ್ಮ್ಸ್ ಅವರ ಹೈ ಬಜೆಟ್ ಸ್ಪೈ ಯೂನಿವರ್ಸ್ ಸಿನಿಮಾವಾಗಿದೆ. 2019 ರಲ್ಲಿ ʼವಾರ್ʼ ಬಿಟೌನ್ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಿತ್ತು. ಹೃತಿಕ್ ರೋಷನ್ , ಟೈಗರ್ ಶ್ರಾಫ್ ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ʼವಾರ್ -2ʼ ಈಗಾಗಲೇ ತನ್ನ ಪಾತ್ರವರ್ಗದಿಂದ ಹೈಪ್ ಹೆಚ್ಚಿಸಿದೆ. ಸಿನಿಮಾದಲ್ಲಿ ಸೂಪರ್ ಸ್ಟಾರ್ ಗಳ ದಂಡೇ ಇರಲಿದೆ. ಹೃತಿಕ್ ರೋಷನ್ ಜೊತೆ ಟಾಲಿವುಡ್ ಸ್ಟಾರ್ ಜೂ.ಎನ್ ಟಿಆರ್ ಇರುವುದು ಪ್ರೇಕ್ಷಕರ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಇದಲ್ಲದೆ ಕಿಯಾರಾ ಅಡ್ವಾಣಿ ಕೂಡ ಸಿನಿಮಾದ ಪಾತ್ರವರ್ಗದಲ್ಲಿ ಇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ʼಸಲಾರ್ʼನಿಂದ ಮತ್ತೊಂದು ʼಕೆಜಿಎಫ್ʼ ನಿರೀಕ್ಷೆ ಬೇಡ.. Salaar ಕಥೆ ರಿವೀಲ್ ಮಾಡಿದ್ರು ನೀಲ್
ಬಹು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ರಿಲೀಸ್ ಡೇಟ್ ಹೊರಬಿದ್ದಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ ಟಿಆರ್ ಅವರ ʼವಾರ್ -2ʼ 2025 ರ ಆಗಸ್ಟ್ 14 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಿಲೀಸ್ ಆಗಲಿದೆ ಎಂದು ʼಪಿಂಕ್ ವಿಲ್ಲಾʼದ ಹಿಮಾಂಶ್ ಮಂಕಡ್ ಟ್ವೀಟ್ ಮಾಡಿರುವುದು ವೈರಲ್ ಆಗಿದೆ.
ಅಯಾನ್ ಮುಖರ್ಜಿ ʼವಾರ್ -2ʼ ಸಿನಿಮಾವವನ್ನು ನಿರ್ದೇಶನ ಮಾಡಲಿದ್ದಾರೆ. ಸದ್ಯ ಅಧಿಕೃತವಾಗಿ ಇನ್ನಷ್ಟೇ ಸಿನಿಮಾದ ರಿಲೀಸ್ ಡೇಟ್ ಹೊರಬೀಳಬೇಕಿದೆ.
ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್ ಮತ್ತು ಟೈಗರ್ 3 ಸಿನಿಮಾದ ಬಳಿಕ ಬರುತ್ತಿರುವ ʼವಾರ್ -2ʼ ಯಶ್ ರಾಜ್ ಫಿಲ್ಮ್ಸ್ ಅವರ 6ನೇ ಸ್ಪೈ ಯೂನಿವಾರ್ಸ್ ಸಿನಿಮಾವಾಗಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.