Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ


Team Udayavani, Nov 29, 2023, 4:19 PM IST

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

ಚೆನ್ನೈ: ಭಾರತ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರಿಂದು ಸಿನಿರಂಗದಲ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ. ಬಹುತೇಕ ಈಗಿನ ಕಾಲದ ಕಲಾವಿದರಿಗೆ ಎಲ್ಲರಿಗೂ ತಾನ್ನೊಮ್ಮೆ ರಜಿನಿಕಾಂತ್‌ ಅವರೊಂದಿಗೆ ನಟಿಸಬೇಕು, ಸಿನಿಮಾ ಮಾಡಬೇಕೆನ್ನುವ ಕನಸು ಇದ್ದೇ ಇರುತ್ತದೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಸಿನಿಮಾಗಳು ಹೊಸ ದಾಖಲೆಯನ್ನೇ ಬರೆಯುತ್ತವೆ. ಅವರ ಹಳೆಯ ಕಾಲದ ಸಿನಿಮಾಗಳಂತೂ ಇಂಡಸ್ಟ್ರಿ ಹಿಟ್‌ ಆಗಿವೆ. ಈಗಲೂ ಅವರ ಒಂದೊಂದು ಸಿನಿಮಾಗಳು ಹೊಸ ರೀತಿಯ ದಾಖಲೆಗಳನ್ನು ಬಾಕ್ಸ್‌ ಆಫೀಸ್‌ ನಲ್ಲಿ ಮಾಡುತ್ತವೆ.

ರಜಿನಿಕಾಂತ್‌ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ, ಯಾವ ಕಲಾವಿದರು ತಾನೇ ಬೇಡ ಹೇಳುತ್ತಾರೆ. ಆದರೆ ಒಂದಲ್ಲ ಎರಡಲ್ಲ ನಾಲ್ಕು ಸಲಿ ರಜಿನಿಕಾಂತ್‌ ಅವರಿಗೆ ನಟಿಸುವ ಅವಕಾಶ ಸಿಕ್ಕರೂ ಆ ಆಫರ್‌ ನ್ನು ಖ್ಯಾತ ನಟಿಯೊಬ್ಬರು ನಿರಾಕರಿಸಿದ್ದರು ಎನ್ನುವುದರ ಬಗ್ಗೆ ನಿಮಗೆ ಗೊತ್ತಾ?

ಯಾರು ಆ ಖ್ಯಾತ ನಟಿ:  ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಸಿನಿಮಾದಲ್ಲಿ ನಟಿಸಲು ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ಸತತ ನಾಲ್ಕು ಬಾರಿ ಆಫರ್‌ ಬಂದಿತ್ತು. ಆದರೆ ಅವರು ಅದನ್ನು ಒಪ್ಪಿರಲಿಲ್ಲ.

ರಜಿನಿಕಾಂತ್‌ ವೃತ್ತಿ ಬದುಕಿನ ಹಿಟ್‌ ಸಿನಿಮಾಗಳಲ್ಲಿ ಒಂದಾಗಿರುವ 1999 ರಲ್ಲಿ ಬಂದ ʼ ಪಡೆಯಪ್ಪʼ ಸಿನಿಮಾದಲ್ಲಿ ನಟಿಸಲು ಐಶ್ವರ್ಯಾ ಅವರಿಗೆ ಆಫರ್‌ ಬಂದಿತ್ತು. ಆದರೆ ಆ ಪಾತ್ರಕ್ಕೆ ಐಶ್ವರ್ಯಾ ಒಪ್ಪದೆ ಇದ್ದಾಗ, ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಸೌಂದರ್ಯ ಅವರು ಕಾಣಿಸಿಕೊಂಡಿದ್ದರು. ಇನ್ನು 2002 ರಲ್ಲಿ ರಜಿನಿಕಾಂತ್‌ ಅವರ ʼಬಾಬಾʼ ಸಿನಿಮಾಕ್ಕೂ ಐಶ್ವರ್ಯಾ ರೈ ಅವರಿಗೆ ನಟಿಯಾಗಿ ತೆರೆ ಹಂಚಿಕೊಳ್ಳಲು ಆಫರ್‌ ನೀಡಲಾಗಿತ್ತು, ಆ ಸಿನಿಮಾವನ್ನು ಐಶ್ವರ್ಯಾ ಒಪ್ಪಿಕೊಳ್ಳಿಲ್ಲ.  ಈ ಸಿನಿಮಾದಲ್ಲಿ ರಜಿನಿಕಾಂತ್‌ ಜೊತೆ ಮನೀಶಾ ಕೊಯಿರಾಲಾ ಕಾಣಿಸಿಕೊಂಡಿದ್ದರು.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಮತ್ತೊಂದು ಹಿಟ್‌ ʼಚಂದ್ರಮುಖಿʼ ಚಿತ್ರಕ್ಕೂ ಐಶ್ವರ್ಯಾ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅದನ್ನು ಐಶ್ವರ್ಯಾ ರಿಜೆಕ್ಟ್‌ ಮಾಡಿದ್ದರು. ಇವರ ಬದಲಿಗೆ ಸಿನಿಮಾದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದರು.

ಇನ್ನು ರಜಿನಿಕಾಂತ್‌ ವೃತ್ತಿ ಬದುಕಿನ ಬ್ಲಾಕ್‌ ಬಸ್ಟರ್‌ ʼಶಿವಾಜಿ: ದಿ ಬಾಸ್‌ʼ ಸಿನಿಮಾದಲ್ಲೂ ಐಶ್ವರ್ಯಾ ರೈ ಅವರು ಕಾಣಿಸಿಕೊಳ್ಳಲಿದ್ದರು. ಆದರೆ ಆಫರ್‌ ತಿರಸ್ಕರಿಸಿದ ಕಾರಣ ಶ್ರಿಯಾ ಶರಣ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು.

ನಾಲ್ಕು ಬಾರಿ ಆಫರ್‌ ರಿಜೆಕ್ಟ್‌ ಮಾಡಿದ ಬಳಿಕ ಕೊನೆಗೂ ಐಶ್ವರ್ಯಾ ರೈ ಅವರು ಶಂಕರ್‌ ಅವರ ʼಎಂದಿರಾನ್‌ʼ (ರೋಬೋಟ್) ಸಿನಿಮಾದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡರು. ಈ ಸಿನಿಮಾ ದೊಡ್ಡ ಹಿಟ್‌ ಆಯಿತು. ಸಿನಿಮಾದಲ್ಲಿನ ವಿ. ಶ್ರೀನಿವಾಸ್ ಮೋಹನ್‌ಗೆ ಅತ್ಯುತ್ತಮ ಸ್ಪೆಷೆಲ್‌ ಎಫೆಕ್ಟ್‌  ಮತ್ತು ಸಾಬು ಸಿರಿಲ್‌ಗೆ ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು  ಬಂದಿದ್ದವು. ಆದರೆ ಇದಾದ ಬಳಿಕ ಬಂದ ʼ2.0ʼ ನಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿಲ್ಲ.

ಸದ್ಯ ರಜಿನಿಕಾಂತ್‌ ʼತಲೈವರ್‌ 170ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಲೋಕೇಶ್‌ ಕನಕರಾಜ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.