Agriculture: ಮನೆಯ ತಾರಸಿನಲ್ಲಿ 200ಕ್ಕೂ ಹೆಚ್ಚು ಬೆಳೆ: ಜೋಸೆಫ್ ಲೋಬೋ ಸಾಧನೆ

ಮನೆಯ ತಾರಸಿನಲ್ಲಿ ಕೃಷಿ ತೋಟ; 200ಕ್ಕೂ ಅಧಿಕ ಬಗೆಯ ಹಣ್ಣು ಹಂಪಲು, ಹೂವು, ತರಕಾರಿ, ಔಷಧೀಯ ಸಸ್ಯಗಳನ್ನು ಬೆಳೆಸುವ ಜೋಸೆಫ್‌

Team Udayavani, Nov 29, 2023, 3:56 PM IST

13-katapady

ಕಟಪಾಡಿ: ಮನೆಯ ತಾರಸಿಯನ್ನೇ ಕೃಷಿಯ ತೋಟವಾಗಿಸಿ ಹಣ್ಣು ಹಂಪಲು, ಮಲ್ಲಿಗೆ ಸಹಿತ ಹೂವು, ಔಷಧೀಯ ಸಸ್ಯಗಳು, ತರಕಾರಿಗಳನ್ನು ಬೆಳೆಯುವ ಮೂಲಕ ಉಡುಪಿ ಜಿಲ್ಲೆಯ ಶಂಕರಪುರ ಕಂಚಿನಕೆರೆ ಬಿಜಿಕ್ರೆಕಾಡು ನಿವಾಸಿ ಜೋಸೆಫ್‌ ಲೋಬೋ ಅವರು ತನ್ನ ಆಹಾರದಲ್ಲಿ ಬಹುತೇಕ ಸ್ವಾವಲಂಬಿಯಾಗಿದ್ದಾರೆ.

ತನ್ನ ವಾಸದ ಮನೆಯ ಸುಮಾರು 1200 ಚದರ ಅಡಿ ತಾರಸಿಯಲ್ಲಿ ಕಾಸರಗೋಡು-7 ತಳಿಯ ಗೇರು, ಆಲ್‌ ಸೀಸನ್‌ ಮಾವು, ಚಿಕ್ಕು, ಪೀನಟ್‌ ಬಟರ್‌, 7 ವಿವಿಧ ಬಗೆಯ ಚೆರಿ ಹಣ್ಣುಗಳು, ಬಿಳಿ ನೇರಳೆ, ಬೀಜ ರಹಿತ ಲಿಂಬೆ, ಮಿರಾಕಲ್‌ ಫ್ರುಟ್‌, ಔಷಧೀಯ ಸಸ್ಯಗಳು, ಜೇನು ಸಾಕಣೆ, ವಿವಿಧ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದು, ಸುಮಾರು 200ಕ್ಕೂ ವಿವಿಧ ತಳಿಯ ಗಿಡಗಳು ಇವರ ತಾರಸಿಯಲ್ಲಿ ಬೆಳೆಯುತ್ತಿದ್ದು ತನ್ನ ಆಹಾರದಲ್ಲಿ ತಾನು ಸ್ವಾವಲಂಬಿಯಾಗಿದ್ದು ಮಾತ್ರವಲ್ಲದೇ ಜೇನು ಸಾಕಣೆ, ಹೈನುಗಾರಿಕೆಯನ್ನು ನಡೆಸುವ ಮೂಲಕ ಗಿಡಗಳಿಗೆ ಜೈವಿಕ ಗೊಬ್ಬರ, ನೈಸರ್ಗಿಕ ಜೇನು ಉತ್ಪಾದನೆಯನ್ನೂ ನಡೆಸುತ್ತಿದ್ದಾರೆ.

ಸರ್ವ ಸಾಂಬಾರ್‌ ಗಿಡ, ಮಸಾಲ ಸೊಪ್ಪು, ರುದ್ರಾಕ್ಷಿ ಗಿಡ, ಕರ್ಪೂರ ಗಿಡ, ಹಿರೇಹಳ್ಳಿ ಡಾರ್ಫ್‌, ಖರ್ಜೂದ ಗಿಡ, ಪಾಟ್‌ ಬನಾನ, ಕರಿಮೆಣಸು ಕೂಡಾ, ಅಡಕೆ ಗಿಡ ಇವರ ತಾರಸಿಯಲ್ಲಿ ಬೆಳೆಯುತ್ತಿದ್ದಾರೆ.

ರಾಜ್ಯದಲ್ಲಿ  ಪ್ರಥಮ ಜಲಕೃಷಿ  ಕೃಷಿಕ:

ಪಟ್ಟಣಗಳಲ್ಲಿನ ಮನೆ ಮಂದಿಗೆ ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ಮನೆಯ ತಾರಸಿಯಲ್ಲಿ, ಲಭ್ಯ ಸ್ಥಳಾವಕಾಶದಲ್ಲಿ  ಜಲಕೃಷಿ ವಿಧಾನದ ಮೂಲಕ ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳನ್ನು ಬೆಳೆಯಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಪ್ರಥಮವಾಗಿ ಜಲಕೃಷಿ ವಿಧಾನದ ಮಲ್ಲಿಗೆಯನ್ನು ಬೆಳೆಸಲು ಆರಂಭಿಸಿದ ರಾಜ್ಯದ ಪ್ರಥಮ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡು ಸಮ್ಮಾನಗಳಿಗೂ ಪಾತ್ರರಾಗಿರುವ ಜೋಸೆಫ್‌ ಲೋಬೋ ತಿಳಿಸುತ್ತಿದ್ದು, ಪತ್ನಿ ನೀಮಾ ಲೋಬೋ, ಕರಾಟೆಯಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ವಿಜೇತ ಪುತ್ರಿ ಜೆನಿಶಾ ಲೋಬೋ (ವಿದ್ಯಾರ್ಥಿನಿ)ಅವರ ಸಹಕಾರವನ್ನು ಸ್ಮರಿಸುತ್ತಾರೆ.

ನೆರಳು, ಮರದ ಬೇರುಗಳ ಹಾವಳಿ -ಮಲ್ಲಿಗೆ ಕೃಷಿ ವೈಫಲ್ಯವೇ ಪ್ರೇರಣೆ:

ತನ್ನ 18 ಸೆಂಟ್ಸ್‌ ಸ್ಥಳದಲ್ಲಿ ನೆರಳು, ಮರದ ಬೇರುಗಳ ಹಾವಳಿಯಿಂದ ಮಲ್ಲಿಗೆ ಬೆಳೆಯುವಲ್ಲಿ ಕಂಡಂತಹ ವೈಫಲ್ಯವು ತಾರಸಿ ಕೃಷಿಗೆ ಪ್ರೇರಣೆಯಾಗಿದ್ದು ಯಶಸ್ವಿಯಾಗಿದ್ದೇನೆ ಎನ್ನುವ ಜೋಸೆಫ್‌ ಲೋಬೋ ಅವರು ರಾಜ್ಯಾದ್ಯಂತ ನಡೆಯುವ ಕೃಷಿ ಮೇಳಗಳಿಗೆ ತೆರಳಿ ಅಲ್ಲಿ ಕಂಡು ಬರುವ ವಿಶೇಷ ತಳಿಗಳ ಗಿಡಗಳನ್ನು (ವಿದೇಶೀ ತಳಿ)ಬೆಳೆಸುವ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಅವಶ್ಯಕ ಇದ್ದವರಿಗೆ ತೋಟ ಸಿದ್ಧಪಡಿಸಿಕೊಡುವ ಕಾಯಕ ನಿರತರಾಗಿದ್ದಾರೆ. ಇವರ ಈ ಸಾಧನೆಗೆ ಮನ್ನಣೆ ಲಬಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯಾಗಿ ಅವರ ಯಶೋಗಾಥೆಯನ್ನು ಬಳಸಿಕೊಳ್ಳುತ್ತಿದ್ದು, ಯುವಜನಾಂಗವು ಹಸುರು ಪ್ರಕೃತಿ ಬೆಳೆಸುವಲ್ಲಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಯೋಗ ಶೀಲ ಥಾರಸಿ ಕೃಷಿಕ ಜೋಸೆಫ್‌ ಲೋಬೋ ಮನದ ಮಾತಿನಂತೆ ತನ್ನ  ತಾರಸಿ ಕೃಷಿಯಲ್ಲಿ ಜೈವಿಕ-ನಿಸರ್ಗದತ್ತ ಲಭ್ಯ ಹಣ್ಣು ಹಂಪಲು, ತರಕಾರಿ ಮನೆಬಳಕೆಗೆ ಮತ್ತು ನೆಂಟರಿಷ್ಟರು ಆಪೆ¤àಷ್ಟರಿಗೆ ಕೊಡಲು ಬಳಸುತ್ತೇನೆ. ಮಿಕ್ಕುಳಿದವು ಬಾನಾಡಿಗಳಿಗೆ, ಪ್ರಾಣಿಗಳಿಗೆ ಆಹಾರವಾಗುತ್ತದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಮನೆಯ ಥಾರಸಿ ಕೃಷಿ ತೋಟವಾಗಿದ್ದು, ಮನೆಯೊಳಗೆ ತಂಪಾದ ವಾತಾವರಣವು ಆರೋಗ್ಯಕ್ಕೆ ಪೂರಕ- ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇನೆ.

ನೀಮಾ ಲೋಬೋ ತಿಳಿಸುವಂತೆ  ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ನಮ್ಮ ನೈಸರ್ಗಿಕ ಆಹಾರದಲ್ಲಿ ಸ್ವಾವಲಂಬಿಗಳಾಗಿ ನಮ್ಮ ಆರೋಗ್ಯ-ನೆಮ್ಮದಿ ತಾರಸಿ ಕೃಷಿಯಲ್ಲಿ ಲಭಿಸುತ್ತಿದೆ. ಹಾಗಾಗಿ ಪತಿಯೊಂದಿಗೆ ಕೈ ಜೋಡಿಸುತ್ತಿದ್ದೇನೆ.

-ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.