Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

ಕೊಟ್ಟರೆ ಖಾಲಿಯಾಗಬಾರದು, ಮನೆಯಲ್ಲಿಟ್ಟರೆ ಹಾಳಾಗಿರಬಾರದು

Team Udayavani, Nov 29, 2023, 5:58 PM IST

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

ಗದಗ: ಹುಟ್ಟು ಬಿಟ್ಟು ಸಾವಿಲ್ಲ, ಸಾವು ಬಿಟ್ಟು ಹುಟ್ಟಿಲ್ಲ. ಹುಟ್ಟು-ಸಾವಿನ ನಡುವಿನ ಹೋರಾಟವೇ ಜೀವನ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಶ್ರೀ ಹೇಳಿದರು.

ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಜರುಗಿದ ಆಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಹ, ಮಾತು, ಮನಸ್ಸನ್ನು ಸರಿಯಾಗಿ ಬಳಸಿಕೊಳ್ಳುವುದೇ ಜೀವನ. ನಮ್ಮಲ್ಲಿರುವ ಪ್ರಜ್ಞೆಯಿಂದ ಉತ್ತಮ ಕಾರ್ಯಗಳನ್ನು ಮಾಡುವುದರಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ನಾವು ಹುಟ್ಟಿನಿಂದ ಸಾವಿನವರೆಗೆ ನಡೆಸುವ ಪಾಪ-ಪುಣ್ಯಗಳ ಕರ್ಮದ ಫಲಗಳು ನಮ್ಮ ಜೀವನವನ್ನು ಮುನ್ನಡೆಸುತ್ತವೆ. ಆದ್ದರಿಂದ ನಮ್ಮ ಕಾರ್ಯಗಳು ಪುಣ್ಯದ ಕೆಲಸಗಳಾಗಿರಬೇಕು. ಅದರಿಂದ ಮಾತ್ರ ಜೀವನವು ಪುಣ್ಯಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಮಾನವ ತಾನು ನನ್ನದು ಎಂದು ಕೊಂಡಿರುವ ನಗದು, ಹೊಲ, ಮನೆ, ಅಧಿಕಾರ, ಸಂಪತ್ತು ಸೇರಿ ಎಲ್ಲವನ್ನೂ ಸಾವು ಕಸಿದುಕೊಂಡು ಹೋಗುತ್ತದೆ. ಆದ್ದರಿಂದ ಸಾವು ನಮ್ಮಿಂದ ಕಸಿದುಕೊಳ್ಳಲಾರದ ಸಂಪತ್ತಾಗಿರುವ ಪುಣ್ಯವನ್ನು ನಾವು ಗಳಿಸಬೇಕಿದೆ. ಪುಣ್ಯವನ್ನು ಸಂಪಾದಿಸುವುದು ನಮ್ಮ ಜೀವನದ ಗುರಿಯಾಗಬೇಕು. ಪುಣ್ಯವನ್ನು ಮಾತ್ರ ಸಾವಿನಿಂದ ಕಸಿದುಕೊಳ್ಳಲಾಗದು ಎಂದರು. ಕೊಟ್ಟರೆ ಖಾಲಿಯಾಗಬಾರದು, ಮನೆಯಲ್ಲಿಟ್ಟರೆ ಹಾಳಾಗಿರಬಾರದು, ಕಟ್ಟಿದ ಗಂಟು ಅಂಗಳದಲ್ಲಿಟ್ಟರೂ ಮುಟ್ಟಲು ಬಂದಿರಬಾರದು. ಅದುವೇ ಪುಣ್ಯದ ಕಾರ್ಯವಾಗಿದೆ. ಮನುಷ್ಯ ಪುಣ್ಯದ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ನೀರು, ಧೂಪ-ದೀಪಗಳಿಂದ, ಬಿಲ್ವಪತ್ರೆ- ಹೂವುಗಳಿಂದ ಮಾಡುವುದು ಪೂಜೆಯಲ್ಲ. ಇನ್ನೊಬ್ಬರ ವಸ್ತುಗಳನ್ನು ಬಳಸದೇ, ಭಕ್ತಿ-ಭಾವದಿಂದ, ಸಮಚಿತ್ತದಿಂದ ಮಾಡುವುದೇ ಪೂಜೆ. ಶರಣರು, ಅನುಭಾವಿಗಳು ಹಾಗೂ ಸಂತರು ಶರಣು-ಶರಣಾರ್ಥಿ ಎನ್ನುತ್ತಲೇ ಕಲ್ಯಾಣ ಕಟ್ಟಿದರು. ಆದ್ದರಿಂದ ಮನುಷ್ಯರು ಮತ್ತೂಬ್ಬರ ಬಗ್ಗೆ ನಿಂದನೆ ಮಾಡಲಾರದೇ, ನಮ್ಮ ಕಾಯಕವನ್ನು ಮಾಡುತ್ತ, ಪರಸ್ಪರರಿಗೆ ಗೌರವ ಕೊಡುತ್ತ ಜೀವನ ಸಾಗಿಸಿದರೆ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.

ಚಿಕೇನಕೊಪ್ಪ ಶರಣರ ಮಠದ ಶಿವಶಾಂತವೀರ ಶರಣರು, ಆಧ್ಯಾತ್ಮ ಪ್ರವಚನ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್‌. ಪಾಟೀಲ, ಚಂದ್ರು ಬಾಳಿಹಳ್ಳಿಮಠ, ಗುರಣ್ಣ ಬಳಗಾನೂರ, ಶೇಖಣ್ಣ ಗದ್ದಿಕೇರಿ, ಬಾಲಚಂದ್ರ ಭರಮಗೌಡ್ರ,  ಧೀರಜ್‌ ಜೈನ್‌, ಮುರುಘರಾಜೇಂದ್ರ ಬಡ್ನಿ, ರಾಘವೇಂದ್ರ ಕಾಲವಾಡ, ಅಶೋಕ ಪಾಟೀಲ ಇದ್ದರು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.