ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

ಶಾಕ್‌ ಆದ ನಟಿ ಮೃಣಾಲ್‌

Team Udayavani, Nov 30, 2023, 4:05 PM IST

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

ವಿಶಾಖಪಟ್ಟಣಂ: ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ಬಹು ನಿರೀಕ್ಷಿತ ʼಹಾಯ್‌ ನಾನ್ನʼ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ತಂದೆ – ಮಗಳ ಭಾವಯಾನದ ಕಥೆಯಳ್ಳ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ನಾನಿ – ಮೃಣಾಲ್‌ ಸೇರಿದಂತೆ ಸಿನಿಮಾತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ʼಹಾಯ್‌ ನಾನ್ನʼ ಪ್ರೀ ರಿಲೀಸ್‌ ಇವೆಂಟ್‌ ವಿಶಾಖಪಟ್ಟಣಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಗ್‌ ಸ್ಕ್ರೀನ್‌ ನಲ್ಲಿ ಹಾಕಿರುವ ಫೋಟೋವೊಂದರ ಕುರಿತು ವಿಜಯ್‌ ದೇವರಕೊಂಡ – ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.

ʼಹಾಯ್‌ ನಾನ್ನʼ ದಲ್ಲಿ ರಶ್ಮಿಕಾ ಹಾಗೂ ದೇವರಕೊಂಡ ನಟಿಸಿಲ್ಲ. ಆದರೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆಯ ಎಲ್‌ ಇಡಿ ಪರದೆ ಮೇಲೆ ಇದ್ದಕ್ಕಿದ್ದಂತೆ ರಶ್ಮಿಕಾ – ದೇವರಕೊಂಡ ಅವರ ಮಾಲ್ಡೀವ್ಸ್ ಹಾಲಿಡೇಯ ಫೋಟೋವನ್ನು ಹಾಕಲಾಗಿದೆ. ಇದನ್ನು ನೋಡಿ ಕೆಳಗೆ ಕೂತಿದ್ದ ಮೃಣಾಲ್‌ ಠಾಕೂರ್‌ ಶಾಕ್‌ ಆಗಿದ್ದಾರೆ. ಸಿನಿಮಾಕ್ಕೆ ಸಂಬಂಧವೇ ಇಲ್ಲದವರ ಫೋಟೋ ಹಾಕಿರುವುದಕ್ಕೆ ಅವರು ಶಾಕ್‌ ಆಗಿದ್ದಾರೆ.

ಸದ್ಯ ಈ ಫೋಟೋ ಬಿಗ್‌ ಸ್ಕ್ರೀನ್‌ ಮೇಲೆ ಹಾಕಲು ʼಹಾಯ್‌ ನಾನ್ನʼ ತಂಡದವರು  ಅನುಮತಿ ಕೇಳಿದ್ದರೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಆದರೆ ಇದನ್ನು ನೋಡಿದ ಕಾರ್ಯಕ್ರಮದ ನಿರೂಪಕಿ ಸುಮಾ, ಫೋಟೋಗ್ರಾಫರ್‌ ಬಳಿ ನನಗೆ ಸಂಶಯವಿದೆ. ಆ ದಿನ ಬಾಲಿಗೆ ಹೋದವನು ನೀನೇ ಇರಬೇಕು. ಒಂದು ವೇಳೆ ಇದ್ದರೆ ನೀನು ಅಂತಹ ಫೋಟೋಗಳನ್ನು ಕ್ಲಿಕ್‌ ಮಾಡಬಹುದೇ? ನೀನು ಸೆಲೆಬ್ರಿಟಿ ಫೋಟೋಗ್ರಾಫರ್‌ ಆಗಿದ್ದರೂ ಖಾಸಗಿತನ ಎನ್ನುವಂಥದ್ದು ಇರುತ್ತದೆ. ನೀವು ಡಿಸ್‌ ಪ್ಲೇ ಅಲ್ಲಿ ಏನೇ ನೋಡಿದರೂ ಅದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಇತ್ತ ʼಹಾಯ್‌ ನಾನ್ನʼ ತಂಡದ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಇದೊಂದು ಕೀಳು ಮಟ್ಟದ ಪ್ರಚಾರ ತಂತ್ರʼ ಒಬ್ಬರು ಕಮೆಂಟ್‌ ಮಾಡಿದ್ದಾರೆ. “ನೀವು ಇದನ್ನು ಬೇಕಂತಲೇ ಪ್ರದರ್ಶನ ಮಾಡಿದ್ದೀರಾ? ಎಂದಿದ್ದಾರೆ. “ಒಂದು ವೇಳೆ ಇದು ಪ್ರಚಾರದ ಪ್ಲ್ಯಾನ್‌ ಅಗಿದ್ದರೆ, ಅತ್ಯಂತ ಕೀಳಾದ ಯೋಜನೆ” ಎಂದು ಮತ್ತೊಬ್ಬರು ಹೇಳಿದ್ದಾರೆ.

7 ಭಾಷೆಗಳಲ್ಲಿ ʼಹಾಯ್‌ ನಾನ್ನʼ ಡಿ.7 ರಂದು ರಿಲೀಸ್‌ ಆಗಲಿದೆ.

 

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Urfi Javed: ಎಷ್ಟು ಜನರ ಜೊತೆ ಮಲಗಿದ್ದೀಯಾ? ಉರ್ಫಿಗೆ ಮುಜುಗರ ತಂದ ಬಾಲಕನ ಪ್ರಶ್ನೆ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

Fahadh Faasil: ಬಾಲಿವುಡ್ ಗೆ ಫಾಹದ್‌ ಎಂಟ್ರಿ; ಖ್ಯಾತ ನಿರ್ದೇಶಕನ ಜತೆ ಸಿನಿಮಾ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.