Ardhambardha Premakathe Review; ತಿರುವುಗಳ ನಡುವೆ ಕೊನೆಯಿಲ್ಲದ ಪ್ರೇಮಕಥೆ!


Team Udayavani, Dec 2, 2023, 10:39 AM IST

ardhambardha premakathe review

ಯಾವುದೇ ಪ್ರೇಮಕಥೆಗೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಕ್ಕರೆ ಅಲ್ಲಿಗೆ ಆ ಪ್ರೇಮಕಥೆ ಮುಗಿದು ಹೋದಂತೆ! ಆದರೆ ನಿಜವಾದ ಪ್ರೇಮಕಥೆ ಎಂದಿಗೂ ಮುಗಿಯುವುದಿಲ್ಲ. ಅದು ನಡೆಯುತ್ತಲೇ ಇರುತ್ತದೆ. ಪ್ರೀತಿಸಿದವರ ಜೊತೆಗಿನ ಪ್ರಯಾಣ ನಿತ್ಯ ನೂತನ. ಪ್ರೇಮಕ್ಕಾಗಲಿ, ಪ್ರೇಮಕಥೆಗಾಗಲಿ ಕೊನೆಯೆಂಬುದು ಇರಬಾರದು. ಹಾಗಾಗಿ ನಮ್ಮ ಪ್ರೇಮಕಥೆ “ಅರ್ಧಂಬರ್ಧ ಪ್ರೇಮಕಥೆ’ಯಾಗಿಯೇ ಉಳಿಯಲಿ. ಅದಕ್ಕೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಗುವುದು ಬೇಡ. ಅಥವಾ ನಾವೇ ಅದನ್ನು ಒತ್ತಾಯಪೂರ್ವಕವಾಗಿ ಮುಗಿಸುವುದು ಬೇಡ. ಹೀಗೆ ಪ್ರೇಮಿಗಳಿಬ್ಬರು ತಮ್ಮ ಮನದಾಳದ ಮಾತನ್ನು ಹೇಳಿಕೊಳ್ಳುವ ವೇಳೆಗೆ ಇನ್ನೇನು ಕ್ಲೈಮ್ಯಾಕ್ಸ್‌ನಲ್ಲಿ ಲವ್‌ಸ್ಟೋರಿ ಎಂಡಿಂಗ್‌ ಆಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ, ಪ್ರೇಮಕಥೆಯ ಮತ್ತೂಂದು ಮಜಲು ತೆರೆದುಕೊಳ್ಳಲು ಹಲವು ದಾರಿಗಳು ಕಾಣಿಸಿಕೊಳ್ಳುತ್ತವೆ. ಇದು “ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್‌ ನಿರೀಕ್ಷಿಸುತ್ತಿದ್ದವರಿಗೆ ಕಾಣುವ ದೃಶ್ಯಗಳು.

ಸಿನಿಮಾದ ಟೈಟಲ್‌ನಲ್ಲಿ ಇರುವಂತೆ, ಇದು ನಿಜಕ್ಕೂ “ಅರ್ಧಂಬರ್ಧ ಪ್ರೇಮಕಥೆ’ಯ ಸಿನಿಮಾ ಎಂದು ಖಂಡಿತವಾಗಿಯೂ ಹೇಳಬಹುದು.  ಇಂದಿನ ಜನರೇಶನ್‌ನ ಹುಡುಗ-ಹುಡುಗಿಯರ ಬದುಕಿನ ದೃಷ್ಟಿ, ಪ್ರೀತಿ, ಪ್ರೇಮದ ಬಗ್ಗೆ ಅವರ ವ್ಯಾಖ್ಯಾನ ಎಲ್ಲವನ್ನೂ ತಮ್ಮದೇ ರೀತಿಯಲ್ಲಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್‌ ಕೌಶಿಕ್‌.

ಯುವ ಮನಸ್ಸಿನ ಗೊಂದಲ, ತಳಮಳಗಳ ಚಿತ್ರಣದ ನಡುವೆಯೇ “ಅರ್ಧಂಬರ್ಧ ಪ್ರೇಮಕಥೆ’ ಸರಾಗವಾಗಿ ಸಾಗುತ್ತದೆ. ಪ್ರೇಮ ಕಥೆಗೆ ಹೊಸ ಆಯಾಮ ಕೊಡಬಹುದು ಎಂಬ ನಿರ್ದೇಶಕರ ಕಲ್ಪನೆ ಸಿನಿಮಾದಲ್ಲಿ ಸಾಕಾರವಾಗಿದೆ. ಆ ಮಟ್ಟಿಗೆ ಹೇಳುವುದಾದರೆ, “ಅರ್ಧಂಬರ್ಧ ಪ್ರೇಮಕಥೆ’ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಇನ್ನು ಇಡೀ ಸಿನಿಮಾದ ಬಹುಭಾಗ ದಿವ್ಯಾ ಉರುಡುಗ ಮತ್ತು ಅರವಿಂದ್‌ ಜೋಡಿಯ ಸುತ್ತಾಟ ಆವರಿಸಿ ಕೊಂಡಿದ್ದು, ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ವರ್ಕೌಟ್‌ ಆಗಿದೆ.

ದಿವ್ಯಾ ತಮ್ಮ ಲವಲವಿಕೆಯ ಅಭಿನಯ ದಲ್ಲಿ ಇಷ್ಟವಾದರೆ, ಅರವಿಂದ್‌ ಮೊದಲ ಪ್ರಯತ್ನದಲ್ಲಿ ಸಹಜ ಅಭಿನಯದ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ಮಧ್ಯದಲ್ಲಿ ಬರುವ ಒಂದಷ್ಟು ಪಾತ್ರಗಳು, ನಿರ್ವಹಿಸಿರುವ ಕಲಾವಿದರು ಕೂಡ ಕಥೆಯ ಆಶಯಕ್ಕೆ ಎಲ್ಲೂ ಚ್ಯುತಿ ಮಾಡಿಲ್ಲ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ತೆರೆಮೇಲೆ ಸಿನಿಮಾದ ಅಂದವನ್ನು ಹೆಚ್ಚಿಸಿದೆ.

ಚಿತ್ರಕಥೆಗೆ ಕೊಂಚ ವೇಗ ಸಿಕ್ಕಿದ್ದರೆ, “ಅರ್ಧಂಬರ್ಧ ಪ್ರೇಮಕಥೆ’ಯ ಓಟ ಇನ್ನಷ್ಟು ಹೆಚ್ಚಾಗಿರುವುದರ ಜೊತೆಗೆ ಪರಿಣಾಮಕಾರಿಯಾಗಿರುವ ಸಾಧ್ಯತೆಗಳಿದ್ದವು.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shalivahana Shake Movie Review

Shalivahana Shake Movie Review: ಟೈಮ್‌ ಲೂಪ್‌ ಕಥೆಯ ʼಶಾಲಿವಾಹನ ಶಕೆ’

Vikasa Parva Movie Review

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

kaalapatthar

Kaalapatthar movie review: ಶಿಲೆಯ ಸುತ್ತದ ಸೆಳೆತವಿದು..

Ronny

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.