Aditi Prabhudeva; ‘ಅಲೆಕ್ಸಾ’ದಲ್ಲಿ ಖಡಕ್ ಪೊಲೀಸ್ ಆದ ಅದಿತಿ
Team Udayavani, Dec 3, 2023, 6:02 PM IST
“ಚಿಕ್ಕ ವಯಸ್ಸಿನಲ್ಲಿ ನನಗೆ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸಿತ್ತು. ನಿಜ ಜೀವನದಲ್ಲಿ ಅಂಥದ್ದೊಂದು ಕನಸು ನನಸಾಗಲಿಲ್ಲ. ಆದರೆ ಈಗ ಸಿನಿಮಾದಲ್ಲಿ ಆ ಕನಸು ನನಸಾಗಿದೆ’ ಇದು ನಟಿ ಅದಿತಿ ಪ್ರಭುದೇವ ಮಾತು.
ಅಂದಹಾಗೆ, ಮದುವೆಯ ಬಳಿಕ ಅದಿತಿ ಪ್ರಭುದೇವ ಅಭಿನಯಿಸಿರುವ ಮತ್ತೊಂದು ಸಿನಿಮಾ “ಅಲೆಕ್ಸಾ’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಅದಿತಿ ಪ್ರಭುದೇವ, ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ “ಅಲೆಕ್ಸ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಿತಿ ಪ್ರಭುದೇವ ತಮ್ಮ ಬಾಲ್ಯದ ಕನಸು ತೆರೆಮೇಲೆ ನನಸಾದ ಬಗ್ಗೆ ಮಾತನಾಡುವ ಅದಿತಿ, “ಚಿಕ್ಕ ವಯಸ್ಸಿನಲ್ಲಿ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸು ನನಸಾಗಲಿಲ್ಲ. ಆಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುತ್ತಿದ್ದಾಗ, ನನಗೂ ಈ ಫೈಟ್ಸ್, ಆ್ಯಕ್ಷನ್ಸ್ ಮಾಡಬೇಕು ಅಂಥ ಅನಿಸುತ್ತಿತ್ತು. ಈಗ ಅದೆಲ್ಲವೂ “ಅಲೆಕ್ಸ’ ಸಿನಿಮಾದಲ್ಲಿ ನನಸಾಗಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ನನಗೆ ಎರಡು-ಮೂರು ಭರ್ಜರಿ ಆ್ಯಕ್ಷನ್ಸ್, ಫೈಟ್ಸ್ ಸೀನ್ಸ್ ಇದೆ. ಮೊದಲ ಬಾರಿಗೆ ಈ ಥರದ ಪಾತ್ರದಲ್ಲಿ ಅಭಿನಯಿಸಿದ್ದು, ಶೂಟಿಂಗ್ ಮಾಡಿದ್ದು ಎಲ್ಲವೂ ಹೊಸಥರನಾಗಿತ್ತು’ ಎಂದಿದ್ದಾರೆ.
“ಸಿನಿಮಾದಲ್ಲಿ ನಾನು ಮಾಡಿರುವ ಆ್ಯಕ್ಷನ್ ದೃಶ್ಯಗಳನ್ನು ರವಿವರ್ಮ ಮತ್ತು ಮಾಸ್ ಮಾದ ಅವರು ಕಂಪೋಸ್ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ಸಣ್ಣ-ಪುಟ್ಟ ಗಾಯಗಳಾಯಿತು. ಆದರೂ ಮಾನಿಟರ್ನಲ್ಲಿ ನನ್ನ ಆ್ಯಕ್ಷನ್ಸ್ ಸೀನ್ಸ್ ನೋಡಿದಾಗ, ಇನ್ನೂ ಹೆಚ್ಚಾಗಿ ಆ್ಯಕ್ಷನ್ಸ್ ಮಾಡಬೇಕು ಅನಿಸುತ್ತಿತ್ತು. ಹೀರೋಗಳಿಗೆ ಮಾತ್ರ ಆ್ಯಕ್ಷನ್ಸ್, ಫೈಟ್ಸ್ ಇರುತ್ತದೆ. ನನಗೂ ಅಂಥದ್ದೇ ಆ್ಯಕ್ಷನ್ಸ್-ಫೈಟ್ಸ್ ಮಾಡಬೇಕು ಎಂಬ ಆಸೆ ಈ ಸಿನಿಮಾದಲ್ಲಿ ಈಡೇರಿದೆ’ ಎಂದಿದ್ದಾರೆ ಅದಿತಿ ಪ್ರಭುದೇವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.