Kundapura ಸಿದ್ಧಿ ವಿನಾಯಕ ವಸತಿ ಶಾಲಾ ಮಕ್ಕಳಿಂದ 2 ಗಿನ್ನೆಸ್‌ ದಾಖಲೆ

ರೂಬಿಕ್‌ ಕ್ಯೂಬ್‌ನಲ್ಲಿ ಅತಿದೊಡ್ಡ ದ್ವಿಮುಖ ಚಿತ್ರ, ಅತಿಹೆಚ್ಚು ಜನರು ರಚಿಸಿದ ಮೊಸಾಯಿಕ್‌ ಚಿತ್ರ

Team Udayavani, Dec 3, 2023, 11:00 PM IST

Kundapura ಸಿದ್ಧಿ ವಿನಾಯಕ ವಸತಿ ಶಾಲಾ ಮಕ್ಕಳಿಂದ 2 ಗಿನ್ನೆಸ್‌ ದಾಖಲೆ

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆ ರೂಬಿಕ್‌ ಕ್ಯೂಬ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸುವ ಮೂಲಕ ಗಿನ್ನೆಸ್‌ ಪುಸ್ತಕಕ್ಕೆ ಸೇರ್ಪಡೆಯಾಯಿತು. ರೂಬಿಕ್‌ ಕ್ಯೂಬ್‌ನಲ್ಲಿ ಅತಿದೊಡ್ಡ ದ್ವಿಮುಖ ಚಿತ್ರ ಹಾಗೂ ಅತಿಹೆಚ್ಚು ಮಂದಿ ಭಾಗವಹಿಸಿದ ರೂಬಿಕ್‌ ಕ್ಯೂಬ್‌ನ ಚಿತ್ರ ಬಿಡಿಸಿದ ದೇಶದ ಏಕೈಕ ಶಾಲೆಯಾಗಿ ಇತಿಹಾಸ ಬರೆಯಿತು.

ಗಿನ್ನೆಸ್‌ ಸಂಸ್ಥೆಯ ಎಡ್‌ಜ್ಯುಡಿಕೇಟರ್‌ ರಿಷಿನಾಥ್‌ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ರವಿವಾರ ಸಂಸ್ಥೆಯ ಕಾರ್ಯದರ್ಶಿ, ಪ್ರಾಂಶುಪಾಲ ಎಚ್‌. ಶರಣ ಕುಮಾರ ಅವರಿಗೆ ಗಿನ್ನೆಸ್‌ ವಿಶ್ವ ದಾಖಲೆಯ ಪ್ರಮಾಣ ಪತ್ರ ಹಸ್ತಾಂತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವೇ| ಮೂ| ಬಾಲಚಂದ್ರ ಭಟ್‌, ಆಡಳಿತಾಧಿಕಾರಿ ವೀಣಾರಶ್ಮಿ, ರಮಾದೇವಿ ಆರ್‌. ಭಟ್‌ ಹಾಗೂ ಗಿನ್ನೆಸ್‌ ದಾಖಲೆ ಮಾರ್ಗದರ್ಶಕ ಪೃಥ್ವೀಶ್‌ ಕೆ., ಉಪಪ್ರಾಂಶುಪಾಲ ರಾಮ ದೇವಾಡಿಗ ಉಪಸ್ಥಿತರಿದ್ದರು.

ಈಗಾಗಲೇ ಎರಡು ಗಿನ್ನೆಸ್‌ ದಾಖಲೆ ಮಾಡಿದ ಬ್ರಹ್ಮಾವರದ ಪೇತ್ರಿಯ ಪೃಥ್ವೀಶ್‌ ಕೆ. ಒಂದೇ ಕೈಯಲ್ಲಿ ರೂಬಿಕ್‌ ಕ್ಯೂಬ್‌ ಸವಾಲು ನಿರ್ವಹಿಸಿ ಗಮನ ಸೆಳೆದರು.

ಚರಿತ್ರೆಯ ಪುಟಗಳಲ್ಲಿ ದಾಖಲೆ
ಸಂಸ್ಥೆಯ ರಜತ ಮಹೋತ್ಸವ ವರ್ಷಾಚರಣೆ ಸಂದರ್ಭ ಗ್ರಾಮಾಂತರದ ಶಾಲಾ ವಿದ್ಯಾರ್ಥಿಗಳು ಮಾಡಿದ ಸಾಧನೆ ವಿಶ್ವಮಟ್ಟದಲ್ಲಿ ಚರಿತ್ರೆಯ ಪುಟಗಳಲ್ಲಿ ದಾಖಲೆ ಬರೆದಿದೆ. ರೊಟೇಟಿಂಗ್‌ ರೂಬಿಕ್‌ ಕ್ಯೂಬ್‌ನಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕ ಎಚ್‌. ರಾಮಚಂದ್ರ ಭಟ್‌ ಅವರ ಮೊಸಾಯಿಕ್‌ ಭಾವಚಿತ್ರ ರಚಿಸಲು 1,228 ಮಂದಿ ಭಾಗಿಯಾಗಿದ್ದರು.

ದೊಡ್ಡ ಚಿತ್ರ
1,228 ಮಂದಿ 1,300ರಷ್ಟು ಕ್ಯೂಬ್‌ಗಳಲ್ಲಿ 7.75×5.625 ಚ.ಅಡಿ ಉದ್ದಳತೆಯ 42.78 ಚ.ಅಡಿ ವಿಸ್ತೀರ್ಣದಲ್ಲಿ ಎಚ್‌. ರಾಮಚಂದ್ರ ಭಟ್‌ ಅವರ ಚಿತ್ರ ಮೂಡಿಸಲಾಯಿತು. ಯು.ಕೆ.ಯ ರೂಬಿಕ್ಸ್‌ ಬ್ರಾಂಡ್‌ ಲಿಮಿಟೆಡ್‌ 308 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮಾಡಿದ ರಚನೆಯ ದಾಖಲೆ ಇಲ್ಲಿ ಮುರಿದು ಬಿತ್ತು.

ಘೋಷಣೆ
ಕಳೆದ 4 ದಿನಗಳಿಂದ ಪ್ರತ್ಯಕ್ಷದರ್ಶಿಯಾಗಿದ್ದ ಗಿನ್ನೆಸ್‌ ಸಂಸ್ಥೆಯ ಎಡ್‌ಜ್ಯುಡಿಕೇಟರ್‌ ರಿಷಿನಾಥ್‌, ಸಾಧನೆಯ ಪರಿಶೀಲನೆ ನಡೆಸಿ, ಖಾಸಗಿ ಸರ್ವೆಯರ್‌ರಿಂದ ಅಳತೆ ಮಾಡಿಸಿ, ದಾಖಲೆ ಖಚಿತವಾದ ಬಳಿಕ, ನೂತನ ಗಿನ್ನೆಸ್‌ ವಿಶ್ವದಾಖಲೆಯ ಘೋಷಣೆ ಮಾಡಿದರು. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ 16 ಗಜೆಟೆಡ್‌ ಅಧಿಕಾರಿಗಳು, 16 ಮಂದಿ ಸಾಕ್ಷಿಗಳು ದೃಢೀಕರಿಸಿದರು.

ಸಂಭ್ರಮ
ಎರಡು ವಿಶ್ವ ದಾಖಲೆಯ ಗುರಿಯಲ್ಲಿ ಗುರುವಾರ ಗಣ್ಯರ ಉಪಸ್ಥಿತಿಯಲ್ಲಿ ಆರಂಭವಾದ ರೂಬಿಕ್‌ ಕ್ಯೂಬ್‌ ರಚನೆಯಲ್ಲಿ ಪಾಲ್ಗೊಂಡ ಸಹಪಾಠಿಗಳನ್ನು ಕ್ಷಣ ಕ್ಷಣಕ್ಕೂ ಉತ್ತೇಜಿಸುತ್ತಿದ್ದ ವಿದ್ಯಾರ್ಥಿಗಳು ನಿರೀಕ್ಷೆಯ ಅವಧಿಗಿಂತ ಮೊದಲೇ ಯಾವುದೇ ವೈಫಲ್ಯವಿಲ್ಲದೇ ದಾಖಲೆಯ ಗುರಿ ಮುಟ್ಟಿದಾಗ ಹಷೊìàದ್ಗಾರ ಮಾಡಿ ಜಯ ಘೋಷ ಹಾಕಿ ಕುಣಿದು ಸಂಭ್ರಮಿಸಿದರು.

ಮೊದಲ ದಾಖಲೆ
ಡಿ. 1ರಂದು 50 ವಿದ್ಯಾರ್ಥಿಗಳು 6,000 ಕ್ಯೂಬ್‌ಗಳನ್ನು ಬಳಸಿಕೊಂಡು 19.198 ಚ.ಮೀ ವಿಸ್ತೀರ್ಣದಲ್ಲಿ ದ್ವಿಮುಖ ಚಿತ್ರ ರಚಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದರು. ಒಂದು ಬದಿಯಲ್ಲಿ ಹಾಕಿ ಮಾಂತ್ರಿಕ ಮೇ| ಧ್ಯಾನಚಂದ್‌, ಇನ್ನೊಂದು ಬದಿಯಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರ ಚಿತ್ರ ರಚಿಸಿದ್ದರು. ಈ ಮೂಲಕ ಕಝಕಿಸ್ಥಾನದ ಝೆಂಗಿಸ್‌ ಐಟಾjನೋವ್‌ 5,100 ಕ್ಯೂಬ್‌ಗಳೊಂದಿಗೆ ನಿರ್ಮಿಸಿದ್ದ 15.878 ಚ.ಮೀ.ವಿಸ್ತಿರ್ಣದ ದಾಖಲೆ ಮುರಿದು ಬಿತ್ತು. ಪೃಥೀÌಶ್‌ ಅವರದ್ದು ಇದು 4ನೆಯ ದಾಖಲೆಯಾಗಿದೆ.

ಕಳೆದ ವರ್ಷ ನವಂಬರ್‌ನಿಂದ ಮಕ್ಕಳಿಗೆ ರೂಬಿಕ್‌ ಕ್ಯೂಬ್‌ ಸವಾಲು ಬಿಡಿಸಲು, ಜೂನ್‌ನಿಂದ ಚಿತ್ರ ಬಿಡಿಸಲು ತರಬೇತಿ ನೀಡಲಾಗುತ್ತಿತ್ತು. 7,500ರಷ್ಟು ಕ್ಯೂಬ್‌ಗಳನ್ನು ಸಮೀಪದ ಸರಕಾರಿ ಕನ್ನಡ ಶಾಲೆಗಳಿಗೆ ಉಚಿತವಾಗಿ ನೀಡಿ ಅವರಿಗೆ ತರಬೇತಿ ನೀಡಲಾಗುವುದು. ಮೊಬೈಲ್‌ನಿಂದ ದೂರ ಇರಿಸಲು, ಏಕಾಗ್ರತೆಗೆ, ಮನೋ ಸಾಮರ್ಥ್ಯ ವೃದ್ಧಿಗೆ ಇದು ಸಹಕಾರಿ ಎಂದು ಶರಣ ಕುಮಾರ್‌ ಹೇಳಿದರು.

ಎರಡು ದಾಖಲೆ
ಎಲ್ಲ ಮಕ್ಕಳು ಒಟ್ಟಾಗಿ 4 ದಿನಗಳ‌ಲ್ಲಿ ಎರಡು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸುವ ಮೂಲಕ ಭಾರತದ ಹೆಸರು ವಿಶ್ವಮಟ್ಟದಲ್ಲಿ ಮೂಡುವಂತೆ ಮಾಡಿದ ಸಂತೃಪ್ತಿ ಇದೆ.
ಎಚ್‌. ಶರಣ ಕುಮಾರ , ಪ್ರಾಂಶುಪಾಲರು, ಹಟ್ಟಿಯಂಗಡಿ
-ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.