Vijay Hazare Trophy ಕ್ರಿಕೆಟ್‌; ಬ್ಯಾಟಿಂಗ್‌ ವೈಫ‌ಲ್ಯ: ಕರ್ನಾಟಕ ಪರಾಭವ


Team Udayavani, Dec 3, 2023, 11:26 PM IST

1-qwewqeqwe

ಆನಂದ್‌ (ಗುಜರಾತ್‌): ಇನ್‌ಫಾರ್ಮ್ ಆಟಗಾರ ದೇವದತ್ತ ಪಡಿಕ್ಕಲ್‌ ಗೈರಲ್ಲಿ ಕಣಕ್ಕಿಳಿದ ಕರ್ನಾಟಕ, “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದೆ. ರವಿವಾರ ಹರ್ಯಾಣ ವಿರುದ್ಧ “ಸಿ’ ವಿಭಾಗದ 6ನೇ ಪಂದ್ಯ ಆಡಲಿಳಿದ ಕರ್ನಾಟಕ 5 ವಿಕೆಟ್‌ಗಳಿಂದ ಪರಾಭವಗೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಕರ್ನಾಟಕ 43.5 ಓವರ್‌ಗಳಲ್ಲಿ ಕೇವಲ 143ಕ್ಕೆ ಸರ್ವಪತನ ಕಂಡಿತು. ಹರ್ಯಾಣ 31.1 ಓವರ್‌ಗಳಲ್ಲಿ 5 ವಿಕೆಟಿಗೆ 144 ರನ್‌ ಬಾರಿಸಿತು. ಇದರೊಂದಿಗೆ ಆರೂ ಪಂದ್ಯಗಳನ್ನು ಗೆದ್ದು ನಾಕೌಟ್‌ ಪ್ರವೇಶಿಸಿದ ಹೆಗ್ಗಳಿಕೆ ಹರ್ಯಾಣದ್ದಾಯಿತು. ಕರ್ನಾಟಕದ ನಾಕೌಟ್‌ ಪ್ರವೇಶವೂ ಖಾತ್ರಿಯಾಗಿದೆ. ಮಂಗಳವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಅಗ ರ್ವಾಲ್‌ ಪಡೆ ಮಿಜೋರಂ ವಿರುದ್ಧ ಆಡಲಿದೆ.

42ಕ್ಕೆ 5 ವಿಕೆಟ್‌ ಪತನ
3 ರನ್‌ ಆಗುವಷ್ಟರಲ್ಲಿ ಕರ್ನಾಟಕದ ಆರಂಭಿಕರಾದ ಮಾಯಾಂಕ್‌ ಅಗ ರ್ವಾಲ್‌ (0) ಮತ್ತು ಆರ್‌. ಸಮರ್ಥ್ (1) ಪೆವಿಲಿಯನ್‌ ಸೇರಿಕೊಂಡರು. ಬಿ.ಆರ್‌. ಶರತ್‌ (15), ನಿಕಿನ್‌ ಜೋಸ್‌ (3), ಅಭಿನವ್‌ ಮನೋಹರ್‌ (3), ಮನೋಜ್‌ ಭಾಂಡಗೆ (8) ಕೂಡ ತಂಡದ ಕೈ ಹಿಡಿಯಲಿಲ್ಲ. 42ಕ್ಕೆ 5 ವಿಕೆಟ್‌, 74ಕ್ಕೆ 8 ವಿಕೆಟ್‌ ಉದುರಿಸಿಕೊಂಡ ಕರ್ನಾಟಕ ನೂರರ ಗಡಿ ತಲುಪುವುದೂ ಕಷ್ಟ ಎಂಬ ಸ್ಥಿತಿಯಲ್ಲಿತ್ತು.

10ನೇ ಕ್ರಮಾಂಕದಲ್ಲಿ ಆಡಲು ಬಂದ ವಿಜಯ್‌ಕುಮಾರ್‌ ವೈಶಾಖ್‌ ಸಿಡಿದು ನಿಂತ ಪರಿಣಾಮ ಮೊತ್ತ ನೂರೈವತ್ತರ ಗಡಿಯತ್ತ ಮುಖ ಮಾಡಿತು. ವೈಶಾಖ್‌ 4 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 54 ರನ್‌ ಕೊಡುಗೆ ಸಲ್ಲಿಸಿದರು (61 ಎಸೆತ).

ಹರ್ಯಾಣ ಪರ ಸುಮಿತ್‌ ಕುಮಾರ್‌ 3 ವಿಕೆಟ್‌, ಅಂಶುಲ್‌ ಕಾಂಬೋಜ್‌, ನಿಶಾಂತ್‌ ಸಿಂಧು, ಯಜುವೇಂದ್ರ ಚಹಲ್‌ ತಲಾ 2 ವಿಕೆಟ್‌ ಉರುಳಿಸಿದರು. ಒಂದು ವಿಕೆಟ್‌ ಹರ್ಷಲ್‌ ಪಟೇಲ್‌ ಪಾಲಾಯಿತು.
ಚೇಸಿಂಗ್‌ ವೇಳೆ ಹರ್ಯಾಣ ಕೂಡ ಕುಸಿತಕ್ಕೆ ಸಿಲುಕಿತು. ಅಂಕಿತ್‌ ಕುಮಾರ್‌ (2), ಹಿಮಾಂಶು ರಾಣಾ (0), ಯುವ್ರಾಜ್‌ ಸಿಂಗ್‌ (19) 35 ರನ್‌ ಒಟ್ಟುಗೂಡುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆದರೆ 4ನೇ ವಿಕೆಟಿಗೆ ಜತೆಗೂಡಿದ ನಿಶಾಂತ್‌ ಸಿಂಧು (43) ಮತ್ತು ರೋಹಿತ್‌ ಪ್ರಮೋದ್‌ ಶರ್ಮ (63) 99 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಮೇಲೆತ್ತಿದರು. ವಾಸುಕಿ ಕೌಶಿಕ್‌ ಮತ್ತು ಜಗದೀಶ್‌ ಸುಚಿತ್‌ ತಲಾ 2 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-43.5 ಓವರ್‌ಗಳಲ್ಲಿ 143 (ವಿ. ವೈಶಾಖ್‌ 54, ಮನೀಷ್‌ ಪಾಂಡೆ 24, ಶರತ್‌ 15, ಸುಮಿತ್‌ 28ಕ್ಕೆ 3, ಚಹಲ್‌ 16ಕ್ಕೆ 2, ನಿಶಾಂತ್‌ 22ಕ್ಕೆ 2, ಅಂಶುಲ್‌ 29ಕ್ಕೆ 2). ಹರ್ಯಾಣ-31.1 ಓವರ್‌ಗಳಲ್ಲಿ 5 ವಿಕೆಟಿಗೆ 144 (ರೋಹಿತ್‌ 63, ನಿಶಾಂತ್‌ 43, ವಿ. ಕೌಶಿಕ್‌ 9ಕ್ಕೆ 2, ಸುಚಿತ್‌ 37ಕ್ಕೆ 2).

ಟಾಪ್ ನ್ಯೂಸ್

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.