UV Fusion: ಬಪ್ಪನಾಡಿನ ಡೋಲು ಬಾರಿಸು


Team Udayavani, Dec 9, 2023, 8:00 AM IST

14-uv-fusion

ಯಾವುದೇ ಕೆಲಸಕ್ಕೆ ಬಾರದೇ ಇರುವ ನಿಷ್ಪ್ರಯೋಜಕನಿಗೆ ವ್ಯಂಗ್ಯವಾಗಿ ಉಡುಪಿ ಮಂಗಳೂರಿನ ಭಾಗದಲ್ಲಿ “ನೀನು ಬಪ್ಪನಾಡು ಡೋಲು ಬಡಿಯಲಿಕ್ಕೆ ಹೋಗು’ ಎಂದು ಹೇಳುವುದಿದೆ. ನಾವು ಸಣ್ಣವರಾಗಿದ್ದಾಗಿನಿಂದ ಹಿಡಿದು ಈಗಲೂ ಈ ಮಾತು ಬಳಕೆಯಲ್ಲಿದೆ.

ಬಪ್ಪನಾಡು ಡೋಲು ಎಂಬ ಪದವೇ ಹೇಳುವಂತೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಬಹಳ ದೊಡ್ಡದಾದ ಡೋಲು ಇದು. ಇಲ್ಲಿನ ದುರ್ಗಾಪರಮೇಶ್ವರಿ ದೇವಿಗೆ ಡೋಲು, ವಾದ್ಯಗಳ ಸದ್ದು ಬಹಳ ಪ್ರಿಯಕರ ಎಂಬುದು ನಂಬಿಕೆ. ಇಲ್ಲಿನ ಒಂಬತ್ತು ಮಾಗಣಿಯ (ಒಂಬತ್ತು ಊರಿನವರು) ಕೊರಗ ಸಮುದಾಯದ ಜನರು ಜಾತ್ರಾ ಮಹೋತ್ಸವಕ್ಕೆ ಬಂದು ಅವರ ಡೋಲನ್ನು ರಾತ್ರಿಯಿಂದ ಬೆಳಗಿನ ವರೆಗೆ ಬಾರಿಸಬೇಕು. ಈ ಡೋಲಿನ ಶಬ್ದದೊಂದಿಗೆ ದೇವಿಯ ರಥೋತ್ಸವ ನಡೆಯುತ್ತದೆ. ತುಳುನಾಡಿನಲ್ಲಿ ದೈವ ದೇವರ ಕಾರ್ಯಗಳಿಗೆ ಈ ಸಮುದಾಯದ ಡೋಲು ಅತ್ಯಂತ ಆವಶ್ಯಕ.

ಬಪ್ಪನಾಡು ಡೋಲು ಬಾರಿಸುವುದು ಏಕೆ?

ಬಪ್ಪನಾಡಿನ ದೊಡ್ಡ ಡೋಲನ್ನು ಸಾಮಾನ್ಯ ಜನರು ಸಹ ಬಾರಿಸಲು ಅವಕಾಶವಿದೆ. ದೇವಿಗೆ ಡೋಲಿನ ನಾದ ಪ್ರಿಯವಾಗಿರುವುದರಿಂದ ಡೋಲನ್ನು ಮೂರು ಅಥವಾ ಐದು ಬಾರಿ ಬಾರಿಸಿದರೆ ತಮ್ಮಲ್ಲಿರುವ ಹೆದರಿಕೆ ಕಡಿಮೆಯಾಗುತ್ತದೆ ಹಾಗೂ ಇದನ್ನು ಒಂದು ಸೇವೆಯ ರೂಪದಲ್ಲಿಯೂ ಸಹ ದೇವಿಗೆ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂಬುದು ಇಲ್ಲಿನ ಭಕ್ತರ ಹಾಗೂ ಅರ್ಚಕರ ನಂಬಿಕೆ.

ಇನ್ನು ಕರಾವಳಿ ಭಾಗದಲ್ಲಿ ಬಹಳ ಬಳಕೆಯಲ್ಲಿರುವ ಮಾತು ಎಂದರೆ ಅದು “ಬಪ್ಪನಾಡಿಗೆ ಹೋಗಿ ಡೋಲು ಬಾರಿಸು’ ಎನ್ನುವುದು. ಈ ಮಾತು ಈಗಲೂ ಬಹಳಷ್ಟು ಬಳಕೆಯಲ್ಲಿದೆ. ಹೆಚ್ಚಾಗಿ ಈ ಮಾತನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಮಕ್ಕಳು ತಮ್ಮ ಪರೀಕ್ಷೆ ಅಥವಾ ಕಲಿಕೆಯಲ್ಲಿ ಹಿಂದೆ ಇದ್ದರೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಾಗಿ ಇದನ್ನು ಬಳಸುತ್ತಾರೆ. ಇನ್ನು ಯಾವುದೇ ಕೆಲಸಕ್ಕೆ ಬಾರದೇ ಇರುವ ಅಥವಾ ಹೇಳಿದ ಕೆಲಸ ಸರಿಯಾಗಿ ಮಾಡಿದೇ ಇರುವಾಗಲೂ ಈ ಮಾತನ್ನು ಉಪಯೋಗಿಸುತ್ತಾರೆ.

ಈ ಡೋಲು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ದಕ್ಷಿಣ ದಿಕ್ಕಿನಲ್ಲಿ ನೋಡಬಹುದು. ಒಮ್ಮೆ ಬಪ್ಪನಾಡು ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಬಪ್ಪನಾಡು ಡೋಲನ್ನು ನೋಡಿ, ಭಾರಿಸಿ.

-ಕಾರ್ತಿಕ್‌ ಮೂಲ್ಕಿ

ಎಸ್.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.