![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 7, 2023, 10:56 PM IST
ದೋಹಾ: ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಬಿಂದ್ಯಾರಾಣಿ ದೇವಿ ಅವರು ಐಡಬ್ಲ್ಯುಎಫ್ ಗ್ರ್ಯಾನ್ ಪ್ರಿಯ ವನಿತೆಯರ 55 ಕೆ.ಜಿ. ವಿಭಾಗದ ಕ್ಲೀನ್ ಆ್ಯನ್x ಜರ್ಕ್ನ ಮೂರು ಪ್ರಯತ್ನಗಳಲ್ಲಿ ಭಾರ ಎತ್ತಲು ವಿಫಲರಾಗಿ ನಿರಾಶೆ ಮೂಡಿಸಿದ್ದಾರೆ.
24ರ ಹರೆಯದ ಬಿಂದ್ಯಾರಾಣಿ ಒಟ್ಟಾರೆ ಆರು ಪ್ರಯತ್ನಗಳಲ್ಲಿ ಎರಡು ಬಾರಿ ಮಾತ್ರ ಸರಿಯಾಗಿ ಭಾರ ಎತ್ತಲು ಯಶಸ್ವಿಯಾಗಿದ್ದಾರೆ. ಸ್ನ್ಯಾಚ್ನಲ್ಲಿ 81 ಕೆ.ಜಿ. ಎತ್ತಿರುವುದು ಅವರ ಉತ್ತಮ ನಿರ್ವಹಣೆಯಾಗಿದೆ. ಸ್ನ್ಯಾಚ್ನಲ್ಲಿ ಒಮ್ಮೆ ಮತ್ತು ಕ್ಲೀನ್ ಆ್ಯನ್x ಜರ್ಕ್ನ ಮೂರು ಪ್ರಯತ್ನಗಳಲ್ಲಿ ಅವರು ಭಾರ ಎತ್ತಲು ವಿಫಲರಾಗಿದ್ದರು. ಈ ವಿಭಾಗದಲ್ಲಿ 12 ಲಿಫ್ಟರ್ಗಳು ಭಾಗವಹಿಸಿದ್ದು ಇಬ್ಬರು ಭಾರ ಎತ್ತಲು ವಿಫಲರಾಗಿದ್ದರು. ಬಿಂದ್ಯಾರಾಣಿ ಈ ಹಿಂದೆ ಮೇ ತಿಂಗಳಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಕ್ಲೀನ್ ಆ್ಯನ್x ಜರ್ಕ್ನ ಮೊದಲ ಪ್ರಯತ್ನದಲ್ಲಿ ಅವರು 109 ಕೆ.ಜಿ. ಭಾರ ಎತ್ತಬೇಕಿತ್ತು. ಆದರೆ ಮೂರು ಬಾರಿಯೂ ಅವರು ವಿಫಲರಾಗಿ ನಿರಾಶೆ ಅನುಭವಿಸಿದರು. ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವರು ಕ್ಲೀನ್ ಆ್ಯನ್x ಜರ್ಕ್ನಲ್ಲಿ 116 ಕೆ.ಜಿ. ಎತ್ತಿರುವುದು ಅವರ ಉತ್ತಮ ನಿರ್ವಹಣೆಯಾಗಿತ್ತು.
ಅಜಿತ್ಗೆ ದ್ವಿತೀಯ ಸ್ಥಾನ
ಹಾಲಿ ರಾಷ್ಟ್ರೀಯ ಚಾಂಪಿಯನ್ ನಾರಾಯಣ್ ಅಚಿತ್ ಪುರುಷರ 73 ಕೆ.ಜಿ. ವಿಭಾಗದಲ್ಲಿ ಅಮೋಘ ನಿರ್ವಹಣೆ ನೀಡಿ ಬೆಳ್ಳಿಯ ಪದಕ ಗೆದ್ದರು. ಸ್ನ್ಯಾಚ್ನಲ್ಲಿ 133 ಕೆ .ಜಿ. ಎತ್ತಿದ ಅವರು ಕ್ಲೀನ್ ಆ್ಯನ್x ಜರ್ಕ್ನಲ್ಲಿ 157 ಕೆ.ಜಿ. ಭಾರ ಎತ್ತಿ ದ್ವಿತೀಯ ಸ್ಥಾನ ಪಡೆದರು. ಕಳೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವು ಒಟ್ಟಾರೆ 312 ಕೆ.ಜಿ. ಭಾರ ಎತ್ತಿದ್ದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.