ಎಲ್ಲರಿಗೂ ರಾಮ್‌ ರಾಮ್‌!-ಅನುಮಾನ ಹುಟ್ಟುಹಾಕಿದ ನಿರ್ಗಮಿತ ಸಿಎಂ ಶಿವರಾಜ್‌ ಚೌಹಾಣ್‌ ಹೇಳಿಕೆ


Team Udayavani, Dec 9, 2023, 11:38 PM IST

SHIVARAJ SINGH CHOUHAN 1

ಹೊಸದಿಲ್ಲಿ: “ಸಭೀ ಕೋ ರಾಮ್‌ ರಾಮ್‌…”(ಎಲ್ಲರಿಗೂ ರಾಮ್‌ ರಾಮ್‌)

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಒಮ್ಮತಕ್ಕೆ ಬರಲು ಬಿಜೆಪಿ ಹೈಕಮಾಂಡ್‌ ಹೆಣಗಾಡುತ್ತಿರುವಂತೆಯೇ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಾಡಿರುವ ಟ್ವೀಟ್‌ ಇದು.

ಶನಿವಾರ ಎಕ್ಸ್‌ನಲ್ಲಿ ಅವರು “ಸಭೀ ಕೋ ರಾಮ್‌ ರಾಮ್‌” ಎಂದು ಬರೆದುಕೊಂಡಿದ್ದು, ಅದು ವೈರಲ್‌  ಆಗುತ್ತಿದ್ದಂತೆಯೇ ಅದನ್ನು ಅಳಿಸಿಹಾಕಿದ್ದಾರೆ. ಹೀಗಿದ್ದಾಗ್ಯೂ, ಶಿವರಾಜ್‌ ಸಿಂಗ್‌ ಅವರ ಈ ಟ್ವೀಟ್‌ನ ಮರ್ಮವೇನು ಎಂಬ ಬಗ್ಗೆ ಭಾರೀ ಚರ್ಚೆಗಳು ಆರಂಭ ವಾಗಿವೆ. ಚೌಹಾಣ್‌ ಅವರು ತಮಗೆ ಸಿಎಂ ಹುದ್ದೆ ಸಿಕ್ಕೇಬಿಡ್ತು ಎಂಬ ಖುಷಿಯಿಂದ ಎಲ್ಲರನ್ನೂ ಅಭಿನಂದಿಸಿ ಈ ರೀತಿ ಬರೆದುಕೊಂಡಿದ್ದಾರೋ ಅಥವಾ ಸಿಎಂ ಹುದ್ದೆ

ಕೈತಪ್ಪಿತು ಎಂಬ ನೋವಿನಿಂದ “ವಿದಾಯದ ಸಂಕೇತ”ವಾಗಿ ಬರೆದುಕೊಂಡಿದ್ದಾರೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಸಾಮಾನ್ಯವಾಗಿ “ರಾಮ್‌ ರಾಮ್‌” ಎಂಬುದನ್ನು ಅಭಿನಂದನೆ ಹಾಗೂ ವಿದಾಯ ಎರಡಕ್ಕೂ ಬಳಸಲಾಗುತ್ತದೆ. ಇಲ್ಲಿ ಚೌಹಾಣ್‌ ಅವರು ಯಾವ ಉದ್ದೇಶದಿಂದ ಹೀಗೆ ಬರೆದಿದ್ದಾರೆ ಎಂಬುದರ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರಲಾರಂಭಿಸಿವೆ. ಇದರ ಬೆನ್ನಲ್ಲೇ ಈ ಟ್ವೀಟ್‌ ಕೂಡ ಡಿಲೀಟ್‌ ಆಗಿದೆ.

ಈ ಕುರಿತು ಅವರನ್ನೇ ಪ್ರಶ್ನೆ ಮಾಡಿದಾಗ ಅವರು, “ಇದು ಭಗವಂತ ರಾಮನ ದೇಶ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ನಾವು ಪ್ರತಿದಿನ ಮುಂಜಾನೆ ರಾಮ್‌ ರಾಮ್‌ ಎಂದು ಹೇಳುತ್ತಲೇ ಒಬ್ಬರನ್ನೊಬ್ಬರು ನಮಸ್ಕರಿಸುತ್ತೇವೆ ಅಷ್ಟೆ” ಎಂದಿದ್ದಾರೆ.

ನಾಳೆ ಆಯ್ಕೆ: ಸೋಮವಾರ ಬೆಳಗ್ಗೆಯೇ ಭೋಪಾಲ್‌ಗೆ ಕೇಂದ್ರದ ಮೂವರು ವೀಕ್ಷಕರು ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಶಾಸಕರ ಸಭೆಯಲ್ಲಿ ನಾಯಕನ ಆಯ್ಕೆ ನಡೆಯಲಿದೆ.

ಇನ್ನೊಂದೆಡೆ, ವೀಕ್ಷಕರ ಸಮ್ಮುಖದಲ್ಲಿ ಛತ್ತೀಸ್‌ಗಡದ 54 ಬಿಜೆಪಿ ಶಾಸಕರು ಭಾನುವಾರ ಸಭೆ ಸೇರಲಿದ್ದು, ಇಲ್ಲೇ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ಮಾಜಿ ಸಿಎಂ ರಮಣ್‌ ಸಿಂಗ್‌  ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ಬಿಜೆಪಿಯು ಒಬಿಸಿ ಅಥವಾ ಬುಡಕಟ್ಟು ಜನಾಂಗದ ನಾಯಕರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಕೆಸಿಆರ್‌ಗೆ ನಾಯಕ ಸ್ಥಾನ: ಹೈದರಾಬಾದ್‌ನಲ್ಲಿ ಶನಿವಾರ ತೆಲಂಗಾಣದ ಬಿಆರ್‌ಎಸ್‌ ಶಾಸಕರ ಸಭೆ ನಡೆದಿದ್ದು, ಮಾಜಿ ಸಿಎಂ ಕೆ. ಚಂದ್ರಶೇಖರ್‌ರಾವ್‌ರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 119 ಸದಸ್ಯಬಲದ ವಿಧಾನಸಭೆಯಲ್ಲಿ ಬಿಆರ್‌ಎಸ್‌ನ 39 ಶಾಸಕರಿದ್ದಾರೆ.

ವಿಕ್ರಮಾರ್ಕಗೆ ಹಣಕಾಸು: ತೆಲಂಗಾಣದ ಕಾಂಗ್ರೆಸ್‌ ಸರಕಾರದಲ್ಲಿ ಶನಿವಾರ ಖಾತೆಗಳ ಹಂಚಿಕೆ ನಡೆದಿದ್ದು, ಸಿಎಂ ರೇವಂತ್‌ ರೆಡ್ಡಿ ಅವರು ನಗರಾಭಿವೃದ್ಧಿ, ಮುನ್ಸಿಪಲ್‌ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಹಂಚಿಕೆಯಾಗದ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ಅವರಿಗೆ ಹಣಕಾಸು,ಇಂಧನ ಖಾತೆಯ ಹೊಣೆ ವಹಿಸಲಾಗಿದೆ. ನೀರಾವರಿ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಉತ್ತಮ ಕುಮಾರ್‌ ರೆಡ್ಡಿ ವಹಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ

1-shah

J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.