Shedimane: ಮೊಮ್ಮಗಳಿಂದ ಅಜ್ಜಿಗೆ ಮೋಸ: ದೂರು ದಾಖಲು
Team Udayavani, Dec 12, 2023, 11:23 PM IST
ಸಿದ್ದಾಪುರ: ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಸರ್ವೆ ನಂ. 20-02ರಲ್ಲಿ ಮತ್ತು 20-03ರಲ್ಲಿ 2.31 ಎಕ್ರೆ ಸ್ಥಿರಾಸ್ತಿಯನ್ನು ಮೊಮ್ಮಗಳು ಚಂದನಾ ಸಿ., ಅಕ್ರಮವಾಗಿ ಸಹಿ ಮತ್ತು ಹೆಬ್ಬೆಟ್ಟನ್ನು ಪಡೆದು ವ್ಯವಸ್ಥಾಪನ ಪತ್ರ ಮಾಡಿಕೊಂಡಿದ್ದಾರೆ ಎಂದು ಶೇಡಿಮನೆ ಭಾಗೀರತಿ ಅಮ್ಮ (84) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಭಾಗೀರತಿ ಅಮ್ಮ ಅವರ ಮಗ ಗೋಪಾಲಕೃಷ್ಣ ಅವರು ತೀರಿಕೊಂಡಿ ದ್ದರು. ಗೋಪಾಲಕೃಷ್ಣ ಅವರ ಮರಣ ಪ್ರಮಾಣಪತ್ರ ಮಾಡಿಸಲು ಅಜ್ಜಿಯ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಬೇಕು ಎಂದು ಮೊಮ್ಮಗಳು ಚಂದನಾ ಸಿ., ಸುಳ್ಳು ಹೇಳಿ ರಂಜಿತ್, ಸತ್ಯನಾರಾಯಣ, ಎಚ್. ಚಂದ್ರಶೇಖರ ಅವರನ್ನು ಜತೆಯಲ್ಲಿ ಸೇರಿಕೊಂಡು ನ. 24ರಂದು ಶಂಕರನಾರಾಯಣ ರಿಜಿಸ್ಟ್ರಾರ್ ಕಚೇರಿಯಲ್ಲಿ ಭಾಗೀರತಿ ಅಮ್ಮ ಅವರ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಹಾಕಿಸಿಕೊಂಡಿದ್ದರು. ಅನಂತರ ಜಾಗವನ್ನು ಚಂದನಾ ಸಿ., ತನ್ನ ಹೆಸರಿನಲ್ಲಿ ವ್ಯವಸ್ಥಾಪನ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ಭಾಗೀರತಿ ಅಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.