Pro Kabaddi 10: ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ ಬೆಂಗಾಲ್ಗೆ ಭರ್ಜರಿ ಜಯ
Team Udayavani, Dec 12, 2023, 11:48 PM IST
ಬೆಂಗಳೂರು: ಪ್ರೊ ಕಬಡ್ಡಿ 10ನೇ ಋತುವಿನ ಮಂಗಳವಾರದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವು ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ 60-42 ಅಂಕಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಣಿಂದರ್ ಸಿಂಗ್, ನಿತಿನ್ ಮತ್ತು ಶ್ರೀಕಾಂತ್ ಜಾಧವ್ ಅವರ ಅಮೋಘ ರೈಡ್ ಮತ್ತು ಆಟದಿಂದಾಗಿ ಬೆಂಗಾಲ್ ತಂಡವು ಆರಂಭದಿಂದಲೇ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಪ್ರದರ್ಶನ ನೀಡಿತು. ಮಣಿಂದರ್ ನಿತಿನ್ ರೈಡಿಂಗ್ನಲ್ಲಿ ಭಾರೀ ಯಶಸ್ಸು ಪಡೆದರು. ಮಣಿಂದರ್ 15 ಮತ್ತು ನಿತಿನ್ 14 ಅಂಕ ಗಳಿಸಿದರೆ ಶ್ರೀಕಾಂಥ್ 12 ಅಂಕ ಪಡೆದರು.
ಪಾಟ್ನಾ ಪರ ಸುಧಾಕರ್ ಮತ್ತು ಸಚಿನ್ ಗಮನ ಸೆಳೆದರು. ಅವರ ಉತ್ತಮ ಆಟದಿಂದಾಗಿ ಪಾಟ್ನಾ ತೀವ್ರ ಪೈಪೋಟಿ ನೀಡಲು ಸಾಧ್ಯವಾಯಿತು.
ಬುಧವಾರ ಬೆಂಗಳೂರು ಚರಣದ ಕೊನೆಯ ದಿನವಾಗಿದ್ದು ಮೊದಲ ಪಂದ್ಯ ತಮಿಳ್ ತಲೈವಾಸ್-ತೆಲುಗು ಟೈಟಾನ್ಸ್ ನಡುವೆ ನಡೆಯಲಿದೆ. ಎರಡನೇ ಪಂಧ್ಯವು ಬೆಂಗಳೂರು ಮತ್ತು ಜೈಪುರ ನಡುವೆ ನಡೆಯಲಿದೆ.
ಶುಕ್ರವಾರದಿಂದ ಪುಣೆ ಚರಣದ ಪಂದ್ಯಗಳು ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್ ಹಾಲ್ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಮುಂಬಾ ಮತ್ತು ಪಾಟ್ನಾ ನಡುವೆ ನಡೆಯಲಿದ್ದರೆ ದ್ವಿತೀಯ ಪಂದ್ಯ ಪುನೇರಿ ಮತ್ತು ಹರಿಯಾಣ ಜತೆ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.