Daily Horoscope: ಈ ರಾಶಿಯ ಅವಿವಾಹಿತರಿಗಿಂದು ವಿವಾಹ ಯೋಗ ಭಾಗ್ಯ ಕೂಡಿಬರಲಿದೆ


Team Udayavani, Dec 14, 2023, 7:12 AM IST

Daily Horoscope: ಈ ರಾಶಿಯ ಅವಿವಾಹಿತರಿಗಿಂದು ವಿವಾಹ ಯೋಗ ಭಾಗ್ಯ ಕೂಡಿಬರಲಿದೆ

ಮೇಷ: ಅನೇಕ ವಿಷಯಗಳಲ್ಲಿ ಆಳವಾದ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ  ಹೆಚ್ಚುವರಿಯಾಗಿ ಹೊಸಬರಿಗೆ  ಮಾರ್ಗದರ್ಶನ ಮಾಡುವ ಜವಾಬ್ದಾರಿ. ಉದ್ಯೋಗದ ಜತೆಯಲ್ಲೇ  ಪೂರಕ ಆದಾಯದ  ಮಾರ್ಗ ಪರಿಶೀಲನೆ. ವಸ್ತ್ರಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಯಶಸ್ಸು.

ವೃಷಭ: ಚೆನ್ನಾಗಿ ಯೋಚಿಸಿಯೇ ಕಾರ್ಯವನ್ನು ಆರಂಭಿಸಿ. ಉದ್ಯೋಗ ಸ್ಥಾನದಲ್ಲಿ ಪ್ರೋತ್ಸಾಹದ ವಾತಾವರಣ. ಉತ್ತರದ ಕಡೆಯಿಂದ  ಶುಭ ವಾರ್ತೆ. ಹಿರಿಯ ಉದ್ಯಮಿಗಳಿಗೆ ಸಾಮಾಜಿಕರಿಂದ ಪುರಸ್ಕಾರ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ.

ಮಿಥುನ: ಆಧ್ಯಾತ್ಮಿಕ ಸಾಧನೆಯಿಂದ ಧೈರ್ಯ, ಸ್ಥೈರ್ಯ ವೃದ್ಧಿ. ಉದ್ಯೋಗದಲ್ಲಿ ಪ್ರತಿಭೆ, ಅನು ಭವಕ್ಕೆ ಮನ್ನಣೆ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ.  ಪ್ರಾಚೀನ ವಿದ್ಯೆ ಕಲಿಯುವ ಆಸಕ್ತಿ.  ಪರಿಸರ ರಕ್ಷಣಾ ಕಾರ್ಯ ಗಳಲ್ಲಿ ಪಾಲುಗೊಳ್ಳಲು  ಆಹ್ವಾನ. ಕೃಷಿಭೂಮಿ ಕೊಳ್ಳಲು ಸಂಕಲ್ಪ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಸ್ವಂತ ಉದ್ಯಮಕ್ಕೆ ಪೈಪೋಟಿಯ ಸಮಸ್ಯೆ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ತೆರಿಗೆ ಭೀತಿ. ಆರೋಗ್ಯ ವೃದ್ಧಿಗೆ ಯೋಗ, ಪ್ರಾಣಾಯಾಮ, ಧ್ಯಾನ ಕಲಿಕೆ. ನ್ಯಾಯಾಲಯ ವ್ಯವಹಾರದಲ್ಲಿ ಜಯ.

ಸಿಂಹ: ಕಾರ್ಯದ ಹಿಂದೆ ಸಮರ್ಪಣಭಾವ ಇದ್ದಾಗ ಭಗವದನುಗ್ರಹ ಖಚಿತ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಉದ್ಯಮದ ಪ್ರಗತಿಗೆ  ಅಡ್ಡಿಯಾದ ಸಮಸ್ಯೆಗಳ ನಿವಾರಣೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ.

ಕನ್ಯಾ: ಸ್ವಪ್ರಯತ್ನದಿಂದ ಆತ್ಮಬಲ ವೃದ್ಧಿ.ಉದ್ಯೋಗ ಸ್ಥಾನದಲ್ಲಿ  ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ  ನಷ್ಟ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಬಂಧುಗಳ ಮನೆಯಲ್ಲಿ ಶುಭ ಕಾರ್ಯ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ.

ತುಲಾ: ಹಿರಿಯರೊಂದಿಗೆ ತಪ್ಪಿಹೋಗಿದ್ದ ಸಂಪರ್ಕ ಪುನರಾರಂಭ. ನಿರೀಕ್ಷಿಸಿದಂತೆ ಹಿರಿಯರ ಭೇಟಿ. ಉದ್ಯೋಗದಲ್ಲಿ ಪ್ರತಿಭೆಗೆ ಪುರಸ್ಕಾರ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಮನೆಯಲ್ಲಿ ವರ್ಷಾವಧಿ ದೇವತಾ ಕಾರ್ಯಕ್ಕೆ ಸಿದ್ಧತೆ. ಮಕ್ಕಳ ಭವಿಷ್ಯ ಚಿಂತನೆ.

ವೃಶ್ಚಿಕ: ದೇಹ, ಮನಸ್ಸುಗಳ ಮೇಲೆ ಹವಾಮಾನ ವ್ಯತ್ಯಾಸದ ಪರಿಣಾಮ. ಉದ್ಯೋಗ ನಿರ್ವಹಣೆ ಮಂದಗತಿಯಲ್ಲಿ. ಸರಕಾರಿ ಉದ್ಯೋಗಿಗಳಿಗೆ ಆನಂದ. ವಾಹನ ಬಿಡಿಭಾಗ ಮಾರಾಟಗಾರರಿಗೆ ಲಾಭ.ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರ ಆರೋಗ್ಯ ಉತ್ತಮ.

ಧನು: ನಿರಂತರ ಶ್ರಮ ಹಾಗೂ  ಪ್ರತಿಭೆಯ ಬಳಕೆಗೆ ಸೂಕ್ತ ಫ‌ಲ ಪ್ರಾಪ್ತಿ. ಸಹೋದ್ಯೋಗಿಗಳಿಂದ ಗೌರವದ  ನಡವಳಿಕೆ. ತಾಯಿಯ ಕಡೆಯ  ಹಿರಿಯ ಬಂಧುಗಳ ಭೇಟಿ. ಸ್ವಂತದ ಚಿಕ್ಕ  ಉದ್ಯಮದ ಬೆಳವಣಿಗೆ ಆರಂಭ. ಸಮಾಜದ ಕಿರಿಯರಿಗೆ ಮಾರ್ಗದರ್ಶನ ಮಾಡುವ ಅವಕಾಶ.

ಮಕರ: ಏಳೂವರೆ ಶನಿ ಬಾಧೆಯ ಕೊನೆಯ ಹಂತದಲ್ಲಿ ಕೆಲವು  ಅನಿರೀಕ್ಷಿತ ಅನುಭವಗಳು. ಸಹಾಯ ಮಾಡುವ ಮನಸ್ಸಿನ ಹೊಸಬರ ಪರಿಚಯ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ಕುಂಭ: ಹೆಚ್ಚುಕಡಿಮೆ ಮಿಶ್ರಫ‌ಲಗಳ ದಿನ. ಉದ್ಯೋಗದಲ್ಲಿ ಕೆಲಸದ ಭಾರ ಹೆಚ್ಚಳ. ಸಂಸಾರದ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ. ಕೃಷಿ ಭೂಮಿ ವಿಸ್ತರಣೆ ಕ್ರಮ ಆರಂಭ. ಗ್ರಾಹಕರ ಬೇಡಿಕೆಗೆ ಸ್ಪಂದಿಸಲು ವಿಶೇಷ ಶ್ರಮ. ಸಮಾಜ ಸೇವೆಗೆ ಹೊಸ ಅವಕಾಶ ಅನ್ವೇಷಣೆ.

ಮೀನ: ಗುರು, ದೇವತಾನುಗ್ರಹ ವಿಶೇಷವಾಗಿರುವ ದಿನ. ಉದ್ಯೋಗದಲ್ಲಿ ಸಂತೃಪ್ತಿ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನ. ಅಪೇಕ್ಷಿತ ಕಾರ್ಯಗಳ ನೆರವೇರಿಕೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ.  ಭವಿಷ್ಯದ ಯೋಜನೆಯ ನೀಲನಕ್ಷೆ ತಯಾರಿ. ಸಮಾಜದ ಕಾರ್ಯಗಳ ಹೊಣೆಗಾರಿಕೆ ಮುಂದುವರಿಕೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.