Ayodhya ಶ್ರೀರಾಮ ಮಂದಿರಕ್ಕೆ ಬೆಳಕನೀವ ಕಾರ್ಯದಲ್ಲಿ ಮಿಜಾರು ಮೂಲದ ತಂತ್ರಜ್ಞ !
Team Udayavani, Dec 13, 2023, 11:40 PM IST
ಮೂಡುಬಿದಿರೆ: ಎಲ್ಲಿಯ ಮೂಡುಬಿದಿರೆ ಎಲ್ಲಿಯ ಅಯೋಧ್ಯೆ! ಇಡಿಯ ಭಾರತದ ಅಷ್ಟೇಕೆ ವಿಶ್ವದ ಗಮನಸೆಳೆಯುತ್ತಿರುವ, ಇನ್ನೇನು ಬಾಗಿ ಲನು ತೆರೆದು ಶ್ರೀರಾಮ ದರ್ಶನವ ನೀಡಲಿರುವ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ವಿದ್ಯುತ್ ದೀಪ ಅಲಂಕಾರ ಕಾಮಗಾರಿಯ ಹೊಣೆ ಹೊತ್ತಿರುವ ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ ಸರ್ವಿಸ್ ಇಂಡಿಯಾ ಪ್ರ„.ಲಿ. ಸಂಸ್ಥೆ ಯ ಪ್ರವರ್ತಕ ರಾಜೇಶ್ ಶೆಟ್ಟಿ ಅವರು ಮೂಡುಬಿದಿರೆ ತಾಲೂಕಿನ ಮಿಜಾರು
ಮೂಲದವರು. ಅದರಲ್ಲಿ ಪ್ರಬಂಧಕ ರಾಗಿ ಕೆಲಸ ಮಾಡುತ್ತಿರುವವರು ಮೂಡುಬಿದಿರೆಯ ಪ್ರಮೋದ್ ಶೆಣೈ.
ರಾಮ ಮಂದಿರದ ನಿರ್ಮಾಣದ ಹೊಣೆಹೊತ್ತ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಕಂಪೆನಿಯ ಟಿಸಿಎಸ್ ಸಂಸ್ಥೆಯು ತನ್ನ ಉಪ ಸಂಸ್ಥೆಯಾದ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ವಿದ್ಯುತ್ ಕಾಮಗಾರಿ ವಹಿಸಿಕೊಟ್ಟಿದ್ದು, ಆ ಸಂಸ್ಥೆಗೆ ಪರಿಚಿತರಾಗಿದ್ದ ರಾಜೇಶ್ ಶೆಟ್ಟಿ ಅವರ ಪಾಲಿಗೆ ಗುತ್ತಿಗೆ ಒದಗಿ ಬಂದಿದೆ. ಈ ಕಾರ್ಯದಲ್ಲಿ 200 ಮಂದಿ ಪರಿಣಿತರು ತೊಡಗಿಸಿಕೊಂಡಿದ್ದಾರೆ.
ದೇಗುಲ ಉದ್ಘಾಟನೆಯ ಆದ ಬಳಿಕವೂ ಹಲವಾರು ವರ್ಷ ಈ ವಿದ್ಯುದೀಕರಣದ ಉಸ್ತುವಾರಿ, ನಿರ್ವಹಣೆಯ ಜವಾಬ್ದಾರಿಯೂ ಶಂಕರ್ ಎಲೆಕ್ಟ್ರಿಕಲ್ ಸರ್ವೀಸ್ ಕಂಪೆನಿಯದ್ದೇ ಆಗಿದೆ. ಕಾಮಗಾರಿಯ ವೆಚ್ಚ ಎಷ್ಟು ಎಂಬುದನ್ನು ಬಹಿರಂಗಪಡಿಸಲಿಚ್ಛಿಸದ ರಾಜೇಶ್ ಶೆಟ್ಟಿ ಅವರು “ಶತಕೋಟಿ’ ಎಂದಿರಲಿ ಎಂದಿದ್ದಾರೆ.
ಕಟೀಲಮ್ಮನ ದಯೆ
“ಪೂರಾ ಕಟೀಲಮ್ಮನ ದಯೆ, ಶ್ರೀ ರಾಮದೇವೆರ್ನ ಕೃಪೆ. ಎಂಕ್ ಉಂದೆಂಚ ಒದಗ್ದ್ ಬತ್ತ್ಂಡ್ ಪಂಡ್ದೇ ಪನ್ಯರೆ ಆಪುಜಿ’ ಎಂದು ಉದಯವಾಣಿ ಜತೆ ಅನಿಸಿಕೆ ಹಂಚಿಕೊಂಡ ರಾಜೇಶ್ ಅವರು, ಊರಿಗೆ ಬಂದಾಗಲೆಲ್ಲ ಕಟೀಲಿಗೆ ಭೇಟಿ ನೀಡುತ್ತೇನೆ ಎನ್ನಲು ಮರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.