ʼAnimalʼ ಓಟಿಟಿ ವರ್ಷನ್‌ನಲ್ಲಿ ಬಾಬಿ – ರಣ್ಬೀರ್‌ ಕಿಸ್ಸಿಂಗ್‌ ಸೀನ್‌; ನಟ ಹೇಳಿದ್ದೇನು?


Team Udayavani, Dec 14, 2023, 2:03 PM IST

ʼAnimalʼ ಓಟಿಟಿ ವರ್ಷನ್‌ನಲ್ಲಿ ಬಾಬಿ – ರಣ್ಬೀರ್‌ ಕಿಸ್ಸಿಂಗ್‌ ಸೀನ್‌; ನಟ ಹೇಳಿದ್ದೇನು?

ಮುಂಬಯಿ: ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಂಡು, ಥಿಯೇಟರ್‌ ನಲ್ಲಿ ಸಕ್ಸಸ್‌ ಫುಲ್‌ ಆಗಿ ಸಾಗುತ್ತಿದೆ. ಗ್ಲೋಬಲ್‌ ಬಾಕ್ಸ್‌ ಆಫೀಸ್‌ ನಲ್ಲಿ ಸಿನಿಮಾ 600 ಕೋಟಿಗೂ ಅಧಿಕ ಕಮಾಯಿ ಮಾಡಿದೆ.

ರಣ್ಬೀರ್‌ ಕಪೂರ್‌ ಇಂದೆಂದೂ ಕಾಣಿಸಿಕೊಳ್ಳದ ರೌದ್ರ ಅವತಾರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ, ರೊಮ್ಯಾನ್ಸ್‌ ಹಾಗೂ ಬೋಲ್ಡ್‌ ಸೀನ್‌ ಗಳಿಂದ ಸಿನಿಮಾ ಚರ್ಚೆಯಲ್ಲಿದೆ. ರಶ್ಮಿಕಾ ಹಾಗೂ ತೃಪ್ತಿ ದಿಮ್ರಿ ಅವರು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಯಶಸ್ಸಿನ ಬಳಿಕ ಚಿತ್ರತಂಡ ಖುಷ್‌ ಆಗಿದೆ. ರಣ್ಬೀರ್‌ ಅಭಿನಯದೊಂದಿಗೆ ಗಮನ ಸೆಳೆದ ಮತ್ತೊಂದು ಪ್ರಮುಖ ಪಾತ್ರವೆಂದರೆ ಅದು ಬಾಬಿ ಡಿಯೋಲ್‌ ಅವರದು. ಬಾಬಿ ಸಿನಿಮಾದಲ್ಲಿ ʼ ಅಬ್ರಾರ್ ಹಕ್ʼ ಎನ್ನುವ ನೆಗೆಟಿವ್‌ ರೋಲ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ಅವರ ಅಭಿನಯವನ್ನು ನೋಡಿದ ಬಳಿಕ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸಿನಿಮಾದ ಯಶಸ್ಸಿನ ನಂತರ ಬಾಬಿ ಡಿಯೋಲ್‌ ನಾನಾ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ʼ ಕ್ವಿಂಟ್ʼ ನಲ್ಲಿನ ಸಂದರ್ಶನದಲ್ಲಿ ಅವರು ಸಿನಿಮಾದಲ್ಲಿದ್ದ ಪ್ರಮುಖ ದೃಶ್ಯವೊಂದರ ಬಗ್ಗೆ ಮಾತನಾಡಿದ್ದು, ಬಿಟೌನ್‌ ವಲಯದಲ್ಲಿ ಸದ್ದು ಮಾಡುತ್ತಿದೆ.

“ಸಿನಿಮಾದಲ್ಲಿ ನನ್ನ(ಬಾಬಿ ಡಿಯೋಲ್)‌ ಹಾಗೂ ರಣ್ಬೀರ್ ಕಪೂರ್‌ ನಡುವಿನ ಕಿಸ್ಸಿಂಗ್‌ ಸೀನ್ ವೊಂದಿತ್ತು. ಅದನ್ನು ಥಿಯೇಟರ್‌ ನಲ್ಲಿ ವರ್ಷನ್‌ ನಲ್ಲಿ ತೆಗೆಯಲಾಗಿದೆ. ಬಹುಶಃ ಆ ದೃಶ್ಯ ಓಟಿಟಿ ವರ್ಷನ್‌ ನಲ್ಲಿ ಇರಬಹುದು” ಎಂದು ಅವರು ಹೇಳಿದ್ದಾರೆ.

“ಇಬ್ಬರ ಸಹೋದರರು ಹೊಡೆದಾಡಿಕೊಳ್ಳುತ್ತಾರೆ. ಇಬ್ಬರು ಒಬ್ಬರನ್ನೊಬ್ಬರು ಕೊಲ್ಲಬೇಕೆಂದು ಬಯಸುತ್ತಾರೆ. ಆದರೆ ಅವರಿಬ್ಬರ ನಡುವೆ ಪ್ರೀತಿಯೂ ಇರುತ್ತದೆ. ಫೈಟ್‌ ನಡುವೆ ಒಮ್ಮೆಗೆ ನೀನು ಅವನಿಗೆ (ರಣ್ಬೀರ್‌ ಪಾತ್ರಕ್ಕೆ) ಕಿಸ್ ಮಾಡಬೇಕು. ಕಿಸ್‌ ನಲ್ಲಿರುವಾಗಲೇ ಅವನು ನಿನ್ನನ್ನು( ಅಬ್ರಾರ್)‌  ಕೊಲ್ಲುತ್ತಾನೆ” ಎಂದು ವಂಗಾ ಹೇಳಿದ್ದರು.

“ಅಲ್ಲೊಂದು ಕಿಸ್ಸಿಂಗ್‌ ಸೀನ್‌ ಇದೆ. ಬಹುಶಃ ಅದು ಅನ್‌ ಕಟ್‌ ನೆಟ್‌ಫ್ಲಿಕ್ಸ್ ಆವೃತ್ತಿಯಲ್ಲಿ ಬರಬಹುದು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ತಂದೆ – ಮಗನ ʼಅನಿಮಲ್‌ʼ ಸಿನಿಮಾದಲ್ಲಿ ರಣ್ಬೀರ್ ಕಪೂರ್‌, ಅನಿಲ್‌ ಕಪೂರ್‌, ಬಾಬಿ ಡಿಯೋಲ್‌, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಮುಂತಾದವರು ನಟಿಸಿದ್ದಾರೆ.

 

 

ಟಾಪ್ ನ್ಯೂಸ್

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hollywood: ಆಸ್ಕರ್‌ ವಿಜೇತ ‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

Hollywood: ಆಸ್ಕರ್‌ ವಿಜೇತ ‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.