Kaup: ಪೋಡಿ ಅಡ್ಡಿ ನಿವಾರಣೆಗೆ ಗುರ್ಮೆ ಸುರೇಶ್ ಶೆಟ್ಟಿ ಆಗ್ರಹ
Team Udayavani, Dec 15, 2023, 11:03 PM IST
ಬೆಂಗಳೂರು: ಉಡುಪಿ ಜಿಲ್ಲೆಗೆ ಸಂಬಂಧಿಸಿ ಸರಕಾರಿ ಜಮೀನು ಮಂಜೂರಾತಿ ಪ್ರಕರಣಗಳಲ್ಲಿ ಪೋಡಿ ದುರಸ್ತಿ (ಪ್ಲಾಟಿಂಗ್) ಪಡಿಸಲು ನಮೂನೆ 1ರಿಂದ 5 ನಮೂನೆಯನ್ನು ಭರ್ತಿ ಮಾಡಿ ಎಲ್ಲ ಮಂಜೂರುದಾರರ ಸಾಗುವಳಿ ಚೀಟಿ, ನಡವಳಿ ಹಾಗೂ ನಕ್ಷೆ ಇರುವ ಪ್ರಕರಣಗಳಲ್ಲಿ ಮಾತ್ರ ಪ್ಲಾಟಿಂಗ್ ಆಗುತ್ತಿದೆ. ಆದರೆ ಹಲವು ಮಂಜೂರಾತಿ ಪ್ರಕರಣಗಳಲ್ಲಿ ಮೂಲ ಕಡತ ಲಭ್ಯವಿದ್ದರೂ ಸಾಗುವಳಿ ಚೀಟಿ ಅಥವಾ ನಡವಳಿ ಮಾತ್ರ ಲಭ್ಯವಿರುವ ಪ್ರಕರಣಗಳಲ್ಲಿ ಪ್ಲಾಟಿಂಗ್ ಆಗದೆ ಬಾಕಿ ಇರುವುದರಿಂದಾಗಿ ಜನರಿಗೆ ಪೋಡಿ ದುರಸ್ತಿಪಡಿಸಲು ಸಮಸ್ಯೆಗಳು ತಲೆದೋರುತ್ತಿವೆ.
ಮೂಲ ಕಡತ ಲಭ್ಯವಿದ್ದ ಪ್ರಕರಣಗಳಲ್ಲಿ ಸಾಗುವಳಿ ಚೀಟಿ ಅಥವಾ ನಡವಳಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಪರಿಗಣಿಸಿ ಪ್ಲಾಟಿಂಗ್ ಕಾರ್ಯ ನಡೆಸುವಂತೆ ಇಲಾಖೆಗೆ ಸೂಚನೆ ನೀಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಧಾನಸಭೆಯಲ್ಲಿ ಕಂದಾಯ ಸಚಿವರ ಗಮನ ಸೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.