Parliament: ಹೊಗೆ ಬಾಂಬ್‌ಗ ವಿಶೇಷ ಶೂ ಮಾಡಿಸಿದ್ದ ಮನೋರಂಜನ್‌!

 ವರ್ಷದ ಹಿಂದೆಯೇ ಲಕ್ನೋದ ಚಮ್ಮಾರನಿಂದ ಬೂಟಿನೊಳಗೆ ರಂಧ್ರ ಕೊರೆಸಿದ್ದ-  ಕುಕೃತ್ಯಕ್ಕೆಂದೇ ಎರಡು ಜತೆ ಬೂಟು ಸಿದ್ಧಪಡಿಸಿಕೊಂಡಿದ್ದ

Team Udayavani, Dec 15, 2023, 11:58 PM IST

manoranjan single

ಹೊಸದಿಲ್ಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿಗಳ ಮಾಸ್ಟರ್‌ ಪ್ಲ್ರಾನ್‌ ಕುರಿತಾದ ಒಂದೊಂದೇ ಸ್ಫೋಟಕ ಸತ್ಯಗಳು ಹೊರಬರಲಾರಂಭಿಸಿವೆ.

ಸದನದೊಳಗೆ ಕ್ಯಾನಿಸ್ಟರ್‌ ಮೂಲಕ ಹೊಗೆ ಬಾಂಬ್‌ ಸಿಡಿಸುವ ಯೋಜನೆ ಮೈಸೂರಿನ ಮನೋ ರಂಜನ್‌ನದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಸತ್ತಿನಲ್ಲಿ ಕೋಲಾಹಲ ಉಂಟುಮಾಡಲೆಂದೇ ಆರೋಪಿಗಳಾದ ಮನೋರಂಜನ್‌ ಮತ್ತು ಸಾಗರ್‌ ಶರ್ಮಾ ತಮಗೆ ಬೇಕಾದಂತಹ “ವಿಶೇಷ ಶೂ”ಗಳನ್ನು ಮಾಡಿಸಿಕೊಂಡಿದ್ದರು.

ಇವರು ವರ್ಷದ ಹಿಂದೆಯೇ ಲಕ್ನೋದ ಚಮ್ಮಾರನೊಬ್ಬನನ್ನು ಸಂಪರ್ಕಿಸಿ, ಎರಡು ಜೋಡಿ ಶೂಗಳ ಅಡಿಭಾಗದಲ್ಲಿ 2.5 ಇಂಚು ಆಳದ ಕುಳಿಗಳನ್ನು ಕೆತ್ತಿಸಿದ್ದರು.

ಫೋನ್‌ ಸುಟ್ಟ ಸೂತ್ರಧಾರ

ಘಟನೆ ನಡೆದ ದಿನ ರಾತ್ರಿ 11.30ರ ವೇಳೆಗೆ ಆರೋಪಿ ಲಲಿತ್‌ ಝಾ ಬಸ್‌ನಲ್ಲಿ ರಾಜಸ್ಥಾನದ ಕುಚಮಾನ್‌ ನಗರ ತಲುಪಿದ್ದ. ಅಲ್ಲಿ ತನ್ನ ಗೆಳೆಯ ಮಹೇಶ್‌ ಮತ್ತು ಆತನ ಸಂಬಂಧಿ ಕೈಲಾಶ್‌ ಸಹಾಯ ದಿಂದ ಢಾಬಾದಲ್ಲಿ ಉಳಿದುಕೊಂಡಿದ್ದ. ಗುರುವಾರ ಬೆಳಗ್ಗೆ ತಾನು ತಂದಿದ್ದ ಎಲ್ಲ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ಸುಟ್ಟು ಹಾಕಿದ್ದ. ಅನಂತರ ದಿಲ್ಲಿಗೆ ವಾಪಸಾಗಿ, ರಾತ್ರಿ ವೇಳೆಗೆ ಕರ್ತವ್ಯಪಥ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದ. ಮೊಬೈಲ್‌ಗ‌ಳನ್ನು ಸುಟ್ಟಿರುವ ಕಾರಣ ಈತ ಸಾಕ್ಷ್ಯ ನಾಶದ ಆರೋಪವನ್ನೂ ಎದುರಿಸಲಿದ್ದಾನೆ.

ಹಿಂದೆಯೂ 40 ಬಾರಿ ಭದ್ರತ ವೈಫ‌ಲ್ಯ: ಅಮಿತ್‌ ಶಾ

“ಸಂಸತ್ತಿನಲ್ಲಿ ಈ ಹಿಂದೆ ಸುಮಾರು 40 ಬಾರಿ ಭದ್ರತ ಉಲ್ಲಂಘನೆ ಗಳಾಗಿವೆ. ಸದನದೊಳಗೆ ಗನ್‌ ತಂದ ಘಟನೆಗಳೂ ನಡೆದಿವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಭದ್ರತ ವೈಫ‌ಲ್ಯ ವಿಚಾರ

ವನ್ನೆತ್ತಿಕೊಂಡು ವಿಪಕ್ಷಗಳು ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿರು ವಂತೆಯೇ ಶಾ ಈ ಹೇಳಿಕೆ ನೀಡಿದ್ದಾರೆ. ಕಾಗದ ಎಸೆದದ್ದು, ಪಿಸ್ತೂಲ್‌ ತಂದದ್ದು, ಘೋಷಣೆ ಕೂಗಿದ್ದು, ಸಂಸದರ ಆಸನದತ್ತ ಜಿಗಿದದ್ದು ಸೇರಿದಂತೆ ಈವರೆಗೆ ಸರಿಸುಮಾರು 40ರಷ್ಟು ಇಂತಹ ಘಟನೆಗಳು ನಡೆದಿವೆ. ಆಯಾ ಸ್ಪೀಕರ್‌ಗಳು ಅದಕ್ಕೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶಾ ವಿವರಿಸಿದ್ದಾರೆ.

ಎಡ ಕಾಲಿಗೆ ಧರಿಸುವ ಶೂಗಳ ಸೋಲ್‌ಗ‌ಳಲ್ಲಿ ಕೆತ್ತಿಸಲಾದ ಕುಳಿಯ ಒಳಗೆ ಗ್ಯಾಸ್‌ ಕ್ಯಾನಿಸ್ಟರ್‌ಗಳನ್ನು ಇರಿಸಿಕೊಂಡು ಸದನದೊಳಕ್ಕೆ ಬಂದಿದ್ದರು. ನ್ಪೋರ್ಟ್ಸ್ ಶೂಗಳ ಒಳಗೆ ಗ್ಯಾಸ್‌ ಕ್ಯಾನಿಸ್ಟರ್‌ಗಳಿರುವುದು ಸಹಜವಾಗಿಯೇ ಯಾರ ಗಮನಕ್ಕೂ ಬಂದಿಲ್ಲ. ಅಲ್ಲದೆ ಭದ್ರತ ತಪಾಸಣೆ ವೇಳೆ ಬೂಟುಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಆರೋಪಿಗಳು ದೃಢಪಡಿಸಿಕೊಂಡೇ ಈ ಸಂಚು ಹೂಡಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ. ಸದ್ಯದಲ್ಲೇ ಆರೋಪಿಗಳನ್ನು ಲಕ್ನೋಗೆ ಕರೆದೊಯ್ದು, ಶೂಗಳನ್ನು ಸಿದ್ಧಪಡಿಸಿಕೊಟ್ಟ ಚಮ್ಮಾರನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

7 ದಿನ ವಶಕ್ಕೆ
ಈ ನಡುವೆ ಗುರುವಾರ ರಾತ್ರಿ ಶರಣಾದ ಪ್ರಕರಣದ ಸೂತ್ರಧಾರ ಲಲಿತ್‌ ಝಾನನ್ನು ಶುಕ್ರವಾರ ಪೊಲೀಸರು ದಿಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ವಿಚಾರಣೆಗೆ ಒಳಪಡಿಸಿ ಪ್ರಕರಣದ ಇಡೀ ಸಂಚನ್ನು ಬಯಲು ಮಾಡಲು ಆತನನ್ನು 15 ದಿನ ವಶಕ್ಕೆ ನೀಡಿ ಎಂದು ಪೊಲೀಸರು ಅರಿಕೆ ಮಾಡಿಕೊಂಡಿದ್ದು, ನ್ಯಾಯಾಲಯವು ಆರೋಪಿಯನ್ನು 7 ದಿನಗಳ ಪೊಲೀಸ್‌ ವಶಕ್ಕೊಪ್ಪಿಸಿ ಆದೇಶ ನೀಡಿದೆ.

ಮನೋರಂಜನ್‌ ಕೊಠಡಿಗೆ ಬೀಗ

ಮೈಸೂರಿನ ಮನೋರಂಜನ್‌ ಮನೆಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ಶುಕ್ರವಾರವೂ ಭೇಟಿ ನೀಡಿ ಆತನ ಕೋಣೆಗೆ ಬೀಗಮುದ್ರೆ ಹಾಕಿದ್ದಾರೆ. ಕೊಠಡಿ ಯಲ್ಲಿ ಸಾಕ್ಷ್ಯಾಧಾರ ಕಲೆ ಹಾಕಿದ್ದು, ಬಳಿಕ ಕೋಣೆಯನ್ನು ಸೀಜ್‌ ಮಾಡಿದ್ದಾರೆ. ಮತ್ತೂಮ್ಮೆ ಬಂದು ಪರಿಶೀಲನೆ ನಡೆಸುವವರೆಗೂ ಕೊಠಡಿಯ ಬಾಗಿಲು ತೆಗೆಯದಂತೆ ಕುಟುಂಬ ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಆತನ ಹಣದ ಮೂಲದ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

gayakwad

ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

Kharge (2)

One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.