UV Fusion: ಮೊಬೈಲ್‌ ಎಂಬ ಮಾಯಾವಿ


Team Udayavani, Dec 16, 2023, 8:00 PM IST

16-uv-fusion

ಮೊಬೈಲ್‌ ಇದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಆಗ ತಾನೆ ಮಾತಾಡಲು ಕಲಿತ ಮಗುವಿನಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರಿಗೂ  ಬೇಕು. ಮೊಬೈಲ್‌ನಿಂದ ಬದುಕು, ಸಂಬಂಧಗಳು ಚೆನ್ನಾಗಿವೆ, ಇಂದ ತುಂಬಾ ನೆಮ್ಮದಿಯಾಗಿದ್ದೇನೆ, ಸಂತೋಷವಾಗಿದ್ದೀನಿ ಎಂದು ಹೇಳುವವರು ಕಡಿಮೆ. ಮೊಬೈಲಿನಲ್ಲೇ ವೃತ್ತಿ ಮಾಡುತ್ತಾ ಜೀವನ ನಡೆಸುವವರು ಇದ್ದರೂ ಬಹಳ ಕಡಿಮೆಯಿದ್ದಾರೆ.

ಆದರೆ ಅವರೆಲ್ಲ  ನೆಮ್ಮದಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನವಿಡೀ ಮೊಬೈಲ್‌ನೊಂದಿಗೆ ಕಳೆಯುವ ಸಮಯವನ್ನು ಸ್ನೇಹಿತರು, ಮನೆಯವರು, ಸಂಬಂಧಿಕರೊಂದಿಗೆ ಕಳೆಯುವುದಿಲ್ಲ. ಅವರೆಲ್ಲರರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಆದರೆ ಅದು ನೇರ ಸಂಪರ್ಕ ಆಗಿರುವುದಿಲ್ಲ, ಬದಲಾಗಿ ಮೊಬೈಲ್‌ ಮೂಲಕವೇ ಸಂಪರ್ಕದಲ್ಲಿರಿರುತ್ತೇವೆ.

ಮೊಬೈಲ್‌ ಬಳಕೆ ಇಂದ ನೆಮ್ಮದಿ ಇರುವುದಿಲ್ಲ ಎಂದು ಖಂಡಿತವಾಗಿಯೂ ಹೇಳಲು ಸಾಧ್ಯವಿಲ್ಲ. ನಾವು ಬಳಸುವ ರೀತಿಯಲ್ಲಿ ನೆಮ್ಮದಿ, ಖುಷಿ ಇದೆ. ಇಂದು ಜೀವನದ ಪ್ರಮುಖ ಭಾಗವಾಗಿಯೇ ನಾವು  ಬಳಸುತ್ತಿದ್ದೇವೆ. ಯಾಕೆಂದರೆ ಈಗ ಮೊಬೈಲ್‌ ಕೇವಲ  ಫೋನ್‌ ಮಾಡಲು, ಮೆಸೇಜ್‌  ಮಾಡಲು ಮಾತ್ರವಲ್ಲದೆ ಹಲವಾರು ವಿಷಯಗಳಿಗೆ ಬಳಸುತ್ತೇವೆ.

ಇದು ಒಂದು ರೀತಿಯ ಆಕರ್ಷಣೆಯೂ ಆಗಿದೆ. ಮೊಬೈಲ್‌ ಬಂದಾಗ ಇಡಿ ಪ್ರಪಂಚವೇ ನಮ್ಮ ಅಂಗೈಯಲ್ಲಿ ಇರುವಂತೆ ಖುಷಿ ಪಡುತ್ತೇವೆ, ದಿನ ಕಳೆದಂತೆ ಮೊಬೈಲ್‌ ಅಂಗೈಯಲ್ಲಿ ನಾವಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಏಷ್ಟು ಜನ ಇರುತ್ತಾರೋ ಅವರೆಲ್ಲರ ಬಳಿಯಲ್ಲಿಯು ಒಂದೊಂದು ಮೊಬೈಲ್‌ ಇರುತ್ತದೆ.

ಪ್ರತಿಯೊಬ್ಬರ ಬಳಿಯೂ ಮೊಬೈಲ್‌ ಇದ್ದಾಗ ಒಬ್ಬೊಬ್ಬರದ್ದು ಒಂದೊಂದು ಪ್ರಪಂಚವಾಗಿಬಿಡುತ್ತದೆ. ಮಕ್ಕಳಿಗೂ ಇದೆ ಅನ್ವಯವಾಗುತ್ತದೆ. ಮೊದಲೆಲ್ಲ ಚಿಕ್ಕ ಮಕ್ಕಳನ್ನು ಸಮಾಧಾನ ಮಾಡಲು ಎಷ್ಟೆಲ್ಲ ಕಷ್ಟ ಪಡಬೇಕಿತ್ತು, ಆದರೆ ಈಗ ಅವರ ಊಟ, ಪಾಠ, ಸಮಾಧಾನ ಎಲ್ಲವೂ ಮೊಬೈಲ್‌ ಒಂದರಿಂದ ಸಾಧ್ಯವಾಗಿದೆ.

ಬದಲಾದ ಜಗತ್ತಿಗೆ ನಾವು ಹೊಂದಿಕೊಂಡು ಹೋಗಬೇಕು, ಆದರೆ ಜಗತ್ತಿನ ಅರಿವೇ ಇರದ ಪುಟ್ಟ ಮಕ್ಕಳಿಗೆ ಮೊಬೈಲ್‌ ಬಳಕೆ ಕಲಿಸುವಷ್ಟು ಆಧುನಿಕರಾಗಬರದು. ಸಣ್ಣ ಪ್ರಾಯದಲ್ಲಿ ಮೊಬೈಲ್‌ ಉಪಯೋಗಿಸುವುದರಿಂದ ಶರೀರಕ್ಕೆ ನಾನಾ ತೊಂದರೆಗಳು ಉಂಟಾಗುತ್ತವೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ, ಆ ದೃಷ್ಟಿಯಿಂದ ಮೊಬೈಲ್‌ ಅತ್ಯಂತ ಪ್ರಯೋಜನಕಾರಿ. ಅಳವಡಿಸಲಾದ ಕೆಮರಾ ನೋಡಿ  ಖರೀದಿಸುತ್ತಾರೆ.  ಕಲರ್‌, ವಿನ್ಯಾಸಗಳನ್ನು ನೋಡಿ ಹೆಚ್ಚೆಚ್ಚು ಹಣ ಸುರಿದು ಖರೀದಿಸುತ್ತಾರೆ. ಮೊಬೈಲ್‌ ಬಳಕೆ ನಮ್ಮ ಜೀವನಕ್ಕೆ ಅಷ್ಟೊಂದು ಅವಶ್ಯಕತೆ ಇದೆಯೇ?

ಒಮ್ಮೆಯಾದರೂ ಯಾರಾದರೂ ಯೋಚಿಸಿದ್ದೀರಾ? ಅಗತ್ಯಕ್ಕೂ ಮೀರಿ ಮೊಬೈಲ್‌ ಬಳಕೆ ಇಂದ ಸಮಯ ಹಾಳಾಗುತ್ತದೆ, ಹಲವಾರು ತೊಂದರೆಗಳಿವೆಯೇ ಹೊರತು ಮತ್ಯಾವ ಘನಕಾರ್ಯವು ಸಾಧ್ಯವಿಲ್ಲ. ನಿಮ್ಮ ಜೀವನಕ್ಕೆ ಮೊಬೈಲ್‌ ಬಳಕೆ ಎಷ್ಟು ಅವಶಕವಿದೆ ಎಂದು ಒಮ್ಮೆಯಾದರೂ ಯೋಚಿಸಿ ಅದನ್ನು ಬಳಸಿ. ಅನವಶ್ಯ ಹಣ ಅದಕ್ಕೆ ಸುರಿದು ನಮ್ಮ ಬುದ್ಧಿವಂತಿಕೆಯನ್ನೆಲ್ಲ ಮೊಬೈಲ್‌ ಬಳಸುವುದರಲ್ಲೇ ಕಳೆಯಬಾರದು. ಸಮಯ ಎನ್ನುವುದು ಬಹಳ ದುಬಾರಿ ಒಮ್ಮೆ ಕಳೆದುಕೊಂಡರೆ ಮತ್ತೆ ಸಂಪಾದಿಸಲು ಸಾಧ್ಯವಿಲ್ಲ.

-ಅಪೂರ್ವ ನಾಯ್ಕ

ಧರ್ಮಸ್ಥಳ

ಟಾಪ್ ನ್ಯೂಸ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

012

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

Paduvari-Someshwara-beach

Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.