Drug Addiction : ಮಾದಕ ವ್ಯಸನದಿಂದ ಬಿಡುಗಡೆಯೆಡೆಗೆ…


Team Udayavani, Dec 16, 2023, 9:00 PM IST

17-uv-fusion

ಆಧುನಿಕ ನಾಗರಿಕ ಸಮಾಜದ ಅತಿ ದೊಡ್ಡ ದುರಂತವೆಂದರೆ ಈ ಮಾದಕ ವಸ್ತುಗಳ ಸೇವನೆ ಎಂದೇ ಹೇಳಬಹುದು. ಅನೇಕರು ಒಂದಲ್ಲಾ ಒಂದು ಕಾರಣಗಳಿಂದ ಮಾದಕ ವ್ಯಸನಕ್ಕೆ ಒಳಗಾಗುತ್ತಲೇ ಇರುತ್ತಾರೆ. ಹದಿ ಹರೆಯದ ಅನೇಕರು ಪ್ರೇಮ ವೈಫ‌ಲ್ಯದ ಕಾರಣದಿಂದಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎನ್ನುವುದು ವಿಪರ್ಯಾಸ!

ಬ್ರೌನ್‌ ಶುಗರ್‌,  ಗಾಂಜಾ, ಕೊಕೈನ್, ಮರಿಜುವಾನ, ಅಫೀಮು, ಧೂಮಪಾನ, ಮದ್ಯಪಾನ ಮುಂತಾದ ಮಾದಕ ವ್ಯಸನಗಳ ದಾಸನಾದರೆ ಅವುಗಳಿಂದ ಹೊರ ಬರುವುದು ಬಲು ಕಠಿಣವೇ ಸರಿ.

ಈಗೀಗ ಮಾದಕ ವ್ಯಸನಗಳ ದೊಡ್ಡ ದಂಧೆಯೇ ನಡೆಯುತ್ತಿದೆ ಎನ್ನಬಹುದು. ಶಾಲಾ ಕಾಲೇಜುಗಳ ಆವರಣದಲ್ಲಿರುವ ಅನೇಕ ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಮಾರುವ ದೊಡ್ಡ ದಂಧೆಯೇ ನಡೆಯುತ್ತಿದೆ! ಕೆಲವು ವ್ಯಾಪಾರಸ್ಥರು ತಮ್ಮ ವ್ಯಾಪಾರದ ಲಾಭಕ್ಕಾಗಿ ಮಾದಕ ವಸ್ತುಗಳನ್ನು ಬಲು ಗುಟ್ಟಾಗಿ, ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದಾರೆ! ಇದರಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದಂತೂ ನಿಜ.

ತಮ್ಮ ಮನಸ್ಸಿನ ಸಂತೋಷಕ್ಕೆಂದೋ, ನೋವುಗಳನ್ನು ಮರೆಯಲೆಂದೋ ಹೀಗೆ ಹತ್ತು ಹಲವು ಕಾರಣಗಳಿಂದ ಅನೇಕರು ಇಂದು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕ ವ್ಯಸನದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತವೆ. ಒಮ್ಮೆ ಮಾದಕ ವ್ಯಸನ ನಮ್ಮ ದೇಹದೊಳಗೆ ಸೇರಿದರೆ ಅದೇನೋ ಉನ್ಮಾದ ಬಂದಂತೆ ಅನಿಸಿ, ಅವುಗಳನ್ನು ಮತ್ತೆ ಮತ್ತೆ ಬಳಸುವಂತೆ ಪ್ರೇರೇಪಿಸುತ್ತದೆ. ಯುವ ಪೀಳಿಗೆಯು ಮಾದಕ ವಸ್ತುಗಳಿಂದ ಮನಕೆ ಬಹಳ ನೆಮ್ಮದಿ ಸಿಗುವುದೆಂಬ ಭ್ರಮೆಯಲ್ಲಿ ಪದೇ ಪದೇ ಮಾದಕ ವ್ಯಸನಗಳಿಗೆ ಬಲಿಯಾಗುತ್ತಲೇ ಇದ್ದಾರೆ ಎಂಬುದು ಬಹಳ ದುಃಖದ ಸಂಗತಿ.

ಮಾದಕದ್ರವ್ಯಗಳು ನೇರವಾಗಿ ಮೆದುಳು ಹಾಗೂ ನರ ಮಂಡಲಕ್ಕೆ ಅನೇಕ ದುಷ್ಪರಿಣಾಮಗಳನ್ನು ತಂದೊಡ್ಡುತ್ತವೆ. ಮನಸ್ಸು ನಮ್ಮ ನಿಯಂತ್ರಣವನ್ನು ತಪ್ಪಿ ಅನೇಕ ಅಪರಾಧಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಜಗತ್ತಿನಲ್ಲಿ ಅನೇಕ ಕಳ್ಳತನ, ದರೋಡೆ, ಅಪಘಾತಗಳು ಮುಂತಾದ ನಾನಾ ರೀತಿಯ ಅಪರಾಧಗಳು ನಡೆಯುವುದು ಈ ಮಾದಕ ವ್ಯಸನಿಗಳಿಂದಲೇ.

ಮಾದಕ ವ್ಯಸನಗಳು ಇತರರ ಉಪಟಳಕ್ಕೆ ಪ್ರಚೋದಿಸುವುದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತೆಯೂ ಪ್ರೇರೇಪಿಸುತ್ತದೆ! ಮೊದ ಮೊದಲು ಕಡಿಮೆ ಇದ್ದ ಚಟ ದಿನಕಳೆಯುತ್ತಾ ಹೋದಂತೆ ಅಧಿಕವಾಗಿ ಅವುಗಳ ವಶಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಇದರಿಂದ ಮನುಷ್ಯ ದೈಹಿಕವಾಗಿ ಕೃಶವಾಗುವುದರ ಜೊತೆಗೆ ಮಾನಸಿಕವಾಗಿ ಅಸ್ಥಿರಗೊಂಡು, ಸಮಾಜದಲ್ಲಿ ತನ್ನ ಗೌರವ, ಘನತೆ, ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ.

ಮಾದಕ ವ್ಯಸನಗಳಿಂದ ಹಚ್ಚ ಹಸುರಾಗಿದ್ದ ಸಂಬಂಧಗಳು ಕೆಡುತ್ತವೆ,  ಕುಟುಂಬದಲ್ಲಿ ಜಗಳಗಳು, ಭಿನ್ನಾಭಿಪ್ರಾಯಗಳು, ಪರಸ್ಪರ ಪ್ರೀತಿ, ಕಾಳಜಿಗಳು ಮರೆಯಾಗುತ್ತವೆ. ಇದರಿಂದ ಸಂಬಂಧಗಳು ನುಚ್ಚು ನೂರಾಗುತ್ತವೆ. ಇವುಗಳ ದುಷ್ಪರಿಣಾಮದಿಂದ ಮಕ್ಕಳ ಮನಸ್ಸಿನ ಮೇಲೆಯೂ ಬಲು ದೊಡ್ಡ ಪರಿಣಾಮವನ್ನೇ ಬೀರುತ್ತವೆ. ಮಕ್ಕಳು ಕೂಡ ಸಂಸ್ಕಾರ ಹೀನರಾಗಿ ಬೆಳೆದು, ಮುಂದೆ ಅವರೂ ಕೂಡ ಹಿರಿಯರನ್ನೇ ಅನುಸರಿಸಿ, ಹಿರಿಯರ ದಾರಿಯನ್ನೇ ಹಿಡಿಯುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಮಾದಕ ವ್ಯಸನಗಳಿಂದ ದೂರವಾಗುವುದೇ ಲೇಸು.

ಮಾದಕ ವ್ಯಸನಿಗಳು ಮಾದಕ ವ್ಯಸನಗಳಿಂದ ಬಲು ಬೇಗ ಸಾವಿಗೆ ಹತ್ತಿರವಾಗುತ್ತಾರೆ. ಶ್ವಾಸಕೋಶದ ಸಮಸ್ಯೆಗಳು, ಟಿ.ಬಿ, ಮೂತ್ರ ಕೋಶದ ಸಮಸ್ಯೆಗಳು ಹೀಗೆ ಒಂದೇ ಎರಡೇ?!, ಬಹು ಅಂಗಾಗ ಖಾಯಿಲೆಗಳಿಗೆ ತುತ್ತಾಗಿ ನರಳುವ ಪರಿಸ್ಥಿತಿ ಬಂದೊದಗುತ್ತದೆ. ಇದರ ಅರಿವಿದ್ದರೂ ಆಗಾಗ ಮಾದಕ ವ್ಯಸನಗಳ ಮೊರೆ ಹೋಗುತ್ತಿರುವುದು ವಿಪರ್ಯಾಸ!!

ಮಾದಕ ವ್ಯಸನಗಳಿಂದ ಮುಕ್ತಿ ಪಡೆಯುವುದು ಹೇಗೆ?

ಪ್ರಯತ್ನ ಪಟ್ಟರೆ ಮಾದಕ ವ್ಯಸನಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ.  ಮಾದಕ ವ್ಯಸನಿಗಳ ಬಿಡುಗಡೆಗೆ ಈಗೀಗ ಅನೇಕ ಶಿಬಿರಗಳು ತೆರೆಯಲ್ಪಟ್ಟಿವೆ. ಆ ಶಿಬಿರಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಿ, ಮಾದಕ ವ್ಯಸನಿಗಳ ಮನ ಪರಿವರ್ತನೆ ಮಾಡಿ ಅವರನ್ನು ವ್ಯಸನಗಳಿಂದ ಹೊರ ತಂದ ಅದೆಷ್ಟೋ ಉದಾಹರಣೆಗಳೂ ಇವೆ. ಕುಟುಂಬದವರ ಪ್ರೋತ್ಸಾಹ, ಸಹಕಾರ ಬಲು ಅಗತ್ಯ. ಕುಟುಂಬದ ಸದಸ್ಯರು ಮಾದಕ ವ್ಯಸನಿಗಳಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಹೆಚ್ಚಿಸುವಂತಹ ಮಾತುಗಳನ್ನಾಡಿ, ಅವರೊಡನೆ ಪ್ರೀತಿಯಿಂದ ನಡೆದುಕೊಂಡರೆ  ಬಿಡುಗಡೆ ಹೊಂದಲು ಸಾಧ್ಯವಿದೆ.

ಪ್ರಜ್ಞಾ ರವೀಶ್‌

ಕಾಸರಗೋಡು

ಟಾಪ್ ನ್ಯೂಸ್

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-uv-fusion

The Sound of Music: ದಿ ಸೌಂಡ್‌ ಆಫ್ ಮ್ಯೂಸಿಕ್‌

11-uv-fusion

UV Fusion: ಕನಸಿನ ಬೆನ್ನು ಹತ್ತಿ

5

UV Fusion: ಹೊಸ ಕನಸಿಗೆ ಮೊದಲ ಹೆಜ್ಜೆ

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

3-uv-fusion

UV Fusion: ಅಮ್ಮನ ಬೀಡಿಸೂಪಿನೆಡೆಯಿಂದ…

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Kaup LaxmiJanardhana Temple: Manohar Shetty elected as Management Committee Chairman

Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.